ಕರ್ನಾಟಕದ ಹಾಲು ಮಹಾರಾಷ್ಟ್ರದ ಪಾಲು: ಸೈಲೆಂಟಾಗಿ ಕರುನಾಡ ಗಡಿಗೆ ‘ಮಹಾ’ ಡೈರಿಗಳ ಎಂಟ್ರಿ !

ಕರ್ನಾಟಕದ ಹಾಲು ಮಹಾರಾಷ್ಟ್ರದ ಪಾಲು: ಸೈಲೆಂಟಾಗಿ ಕರುನಾಡ ಗಡಿಗೆ ‘ಮಹಾ’ ಡೈರಿಗಳ ಎಂಟ್ರಿ !

Published : Sep 12, 2023, 10:03 AM IST

ನಂದಿನಿ ಇದು ಕರ್ನಾಟಕದ ಅಸ್ಮಿತೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೀಗ ಕರ್ನಾಟಕ ಗಡಿಯಲ್ಲಿ ನಡೆಯುತ್ತಿರೋ ಅದೊಂದು ಬೆಳವಣಿಗೆಯಿಂದ ನಂದಿನಿ ಪಾಲಿಗೆ ಕಂಟಕ ಎದುರಾಗುವ ಲಕ್ಷಣಗಳು ಕಾಣ್ತಿವೆ. ಸದ್ದೇ ಇಲ್ಲದೆ ವಿಜಯಪುರದ ಗಡಿ ಗ್ರಾಮಗಳಲ್ಲಿ ಮಹಾರಾಷ್ಟ್ರದ ಹಾಲಿನ ಡೇರಿಗಳು ಎಂಟ್ರಿಯಾಗಿವೆ. ರೈತರಿಗೆ ಹೆಚ್ಚಿನ ದರದ ಆಮೀಷ ತೋರಿಸಿ ಹಾಲು ಖರೀದಿಸಿ ಮಹಾರಾಷ್ಟ್ರಕ್ಕೆ ಕೊಂಡೊಯ್ತಿವೆ.

ನಂದಿನಿ ಕನ್ನಡಿಗರ ಲೋಕಲ್ ಬ್ರ್ಯಾಂಡ್.. ನಂದಿನಿ(Nandini milk) ಉಳಿವಿಗಾಗಿ ನಡೆಯುತ್ತಿರುವ ಹೋರಾಟ ಎಲ್ಲರಿಗೂ ಗೊತ್ತು. ಆದ್ರೆ ಗಡಿ ಜಿಲ್ಲೆ ವಿಜಯಪುರದಲ್ಲಿ(Vijayapura) ನಂದಿನಿಗೆ ಸಂಕಷ್ಟ ಎದುರಾಗುವ ಲಕ್ಷಣಗಳು ಕಾಣ್ತಿವೆ. ಯಾಕಂದ್ರೆ ವಿಜಯಪುರ ಜಿಲ್ಲೆಯ ಮಹಾರಾಷ್ಟ್ರ(Maharashtra) ಗಡಿಯಲ್ಲಿರುವ ಹಳ್ಳಿಗಳಿಗೆ ಮಹಾರಾಷ್ಟ್ರದ ಹಾಲಿನ ಡೈರಿಗಳು(milk dairies) ಎಂಟ್ರಿ ಕೊಟ್ಟಿವೆ. ಮಹಾರಾಷ್ಟ್ರದಿಂದ ಬಂದಿರೋ ಹಾಲಿನ ಡೈರಿಗಳು ನಮ್ಮ ರಾಜ್ಯದ ರೈತರು ಉತ್ಪಾದಿಸಿದ ಗುಣಮಟ್ಟದ ಹಾಲನ್ನ ಖರೀದಿಸಿ ಮಹಾರಾಷ್ಟ್ರಕ್ಕೆ ಕೊಂಡೊಯ್ತಿವೆ. ತಿಕೋಟ ತಾಲೂಕಿನ ಬಾಬಾನಗರ, ಕನಮಡಿ, ಅಳಗಿನಾಳ, ಸೇರಿದಂತೆ ಗಡಿ ಗ್ರಾಮಗಳಲ್ಲಿ ಮಹಾರಾಷ್ಟ್ರದ ಹಾಲಿನ ಡೈರಿಗಳು ಪ್ರಬಲವಾಗಿ ಬೆಳೆದು ನಿಂತಿವೆ. ಲೀಟರ್‌ ಹಾಲಿಗೆ ರೈತರಿಂದ 35 ರಿಂದ 40ರೂಪಾಯಿಗೆ ಖರೀದಿ ಮಾಡ್ತಿವೆ. ಫ್ಯಾಟ್‌ ಹೆಚ್ಚಿಗೆ ಇದ್ದಲ್ಲಿ ಲೀಟರ್ಗೆ 60 ರೂಪಾಯಿವರೆಗೂ ಹಣ ನೀಡ್ತಿವೆ. ಕೆಎಂಎಫ್ ರೈತರಿಗೆ ಲೀಟರ್ ಹಾಲಿಗೆ ಕೇವಲ 33 ರೂಪಾಯಿ ನೀಡ್ತಿದೆ. ಅದು 15 ದಿನಕ್ಕೊಮ್ಮೆ ರೈತರ ಅಕೌಂಟ್ಗೆ ಜಮೆ ಆಗುತ್ತೆ. ಆದ್ರೆ ಮಹಾರಾಷ್ಟ್ರ ಡೈರಿಗಳು ಆಯಾ ದಿನವೇ ರೈತರಿಗೆ ಹಣ ನೀಡ್ತಿವೆ. ಪ್ರೋತ್ಸಾಹ ಧನವಾಗಿ ನೀಡ್ತಿರೋ 5 ರೂ. 6 ತಿಂಗಳಿಗೊಮ್ಮೆ ರೈತರಿಗೆ ಜಮೆ ಯಾಗುತ್ತೆ. ಇದನ್ನೇ ಬಂಡವಾಳ ಮಾಡಿಕೊಂಡಿರೋ ಮಹಾರಾಷ್ಟ್ರ ಡೈರಿಗಳು ರಾಜ್ಯದ ಗಡಿ ರೈತರನ್ನ ತಮ್ಮತ್ತ ಸೆಳೆಯುತ್ತಿವೆ. ಮಹಾರಾಷ್ಟ್ರ ಹಾಲಿನ ಡೈರಿಗಳ ಈ ನಡೆ ರಾಜ್ಯದ ಸ್ಥಳೀಯ ಹಾಲು ಒಕ್ಕೂಟಕ್ಕೆ ಆತಂಕ ಮೂಡಿಸಿದೆ.

ಇದನ್ನೂ ವೀಕ್ಷಿಸಿ:  ಕೋಟಿ ಖರ್ಚು ಮಾಡಿದ್ರೂ ವಾಸಕ್ಕೆ ಯೋಗ್ಯವಿಲ್ಲ..! ಕುಡಿಯೋಕೆ ನೀರಿಲ್ಲ..ಡ್ರೈನೇಜ್ ಮೊದಲೇ ಇಲ್ಲ..!

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
Read more