ಹೆತ್ತವರಿಂದಲೇ ಯುವಕನಿಗೆ ಗೃಹ ಬಂಧನ ಶಿಕ್ಷೆ! ಮಾನಸಿಕ ಅಸ್ವಸ್ಥ ಪಟ್ಟಕಟ್ಟಿ 6 ವರ್ಷ ಕೈಗೆ ಕೋಳ ..!

ಹೆತ್ತವರಿಂದಲೇ ಯುವಕನಿಗೆ ಗೃಹ ಬಂಧನ ಶಿಕ್ಷೆ! ಮಾನಸಿಕ ಅಸ್ವಸ್ಥ ಪಟ್ಟಕಟ್ಟಿ 6 ವರ್ಷ ಕೈಗೆ ಕೋಳ ..!

Published : Oct 09, 2023, 11:33 AM IST

ಆತ ಪಿಯುಸಿ ಓದಿದ್ದ 26 ವರ್ಷದ ನವಯುವಕ. ವಯಸ್ಸಾದ ತಂದೆ- ತಾಯಿಗೆ ಆಸರೆ ಆಗಬೇಕಾದ ಮಗ. ಆದ್ರೆ ಈಗ ಮಗನನ್ನೇ ಕಂಡರೆ ಪೋಷಕರು ಭಯಬಿದ್ದು ಆತನ ಕೈ- ಕಾಲುಗಳಿಗೆ ಬೇಡಿ ಹಾಕಿದ್ದಾರೆ.

ಕಣ್ಣೀರು ಹಾಕುತ್ತಾ ಭಯದಿಂದಲೇ ಯುವಕನಿಗೆ ಅನ್ನ ನೀಡುತ್ತಿರುವ ಮಹಿಳೆ ಹೆಸರು ನೀಲಮ್ಮ. ಮತ್ತೊಂದು ಕಡೆ ಕೈ- ಕಾಲಿಗೆ ಬೇಡಿ ಹಾಕಿಕೊಂಡು ನರಳುತ್ತಿರುವ ಯುವಕ. ಈ ದೃಶ್ಯಗಳು ಕಂಡು ಬಂದಿದ್ದು ರಾಯಚೂರು(Raichur) ಜಿಲ್ಲೆ ಲಿಂಗಸೂಗೂರು ತಾಲೂಕಿನ ದೇವರಭೂಪರ ಗ್ರಾಮದಲ್ಲಿ. ದೇವರಭೂಪುರ ಗ್ರಾಮದ ನೀಲಮ್ಮ ಹಾಗೂ ರಂಗಪ್ಪ ದಂಪತಿಗೆ ಇಬ್ಬರು ಮಕ್ಕಳು. ಈ ಪೈಕಿ ಮೊದಲನೇ ಮಗ 28 ವರ್ಷದ ಈ ಹನುಮಂತ. ಈತ ಮಾನಸಿಕ ಅಸ್ವಸ್ಥನಂತೆ(Mentally ill). ಹೀಗಾಗಿ ಕಳೆದ 6 ವರ್ಷಗಳಿಂದ ಹೆತ್ತವರೇ ಗೃಹ ಬಂಧನದಲ್ಲಿಟ್ಟಿದ್ದಾರೆ. ಹನುಮಂತನ ಕೈ-ಕಾಲುಗಳಿಗೆ ಕೋಳ ಹಾಕಲಾಗಿದೆ. ಈತನನ್ನ ಮನೆಯ ಒಂದು ಕೋಣೆಯಲ್ಲಿರಿಸಿದ್ರೆ, ತಾಯಿ ನೀಲಮ್ಮ, ತಂದೆ ರಂಗಪ್ಪ ಹಾಗೂ ತಮ್ಮ ವೆಂಕಟೇಶ್ ಮತ್ತೊಂದು ಕೋಣೆಯಲ್ಲಿರ್ತಾರೆ. ಕಳೆದ ಕೆಲ ವರ್ಷಗಳ ಹಿಂದೆ ಹನುಮಂತ ಮರದ ಮೇಲಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದನಂತೆ. ಇದಾದ ಬಳಿಕ ಮಾನಸಿಕವಾಗಿ ನೊಂದು ಹೋಗಿದ್ದ ಈತ, ಸಿಕ್ಕ ಸಿಕ್ಕವರ ಮೇಲೆ ಎರಗುತ್ತಿದ್ದನಂತೆ. ಅದೇ ಕಾರಣಕ್ಕೆ ಕೈಗೆ ಕೋಳ ತೊಡಿಸಿದ ಪೋಷಕರು, ಕಳೆದ 6 ವರ್ಷಗಳಿಂದಲೂ ಹೀಗೆ ಗೃಹಬಂಧನದಲ್ಲಿ(House Arrest) ಇಟ್ಟಿದ್ದಾರೆ. ಹಾಗಂತ ಹನುಮಂತನಿಗೆ ವಿವಿಧ ಆಸ್ಪತ್ರೆಗಳಿಗೆ ತೋರಿಸಿ ಚಿಕಿತ್ಸೆ ಕೂಡ ಕೊಡಿಸಿದ್ದಾರಂತೆ. ಆದ್ರೆ ದುರದೃಷ್ಟವಶಾತ್ ಆತ ಮಾತ್ರ ಚೇತರಿಕೆಯಾಗಿಲ್ಲ. ಹನುಮಂತ ಕೆಲವೊಮ್ಮೆ ಕಲ್ಲು, ಗಾಜು, ಕಟ್ಟಿಗೆಗಳನ್ನ ತಿನ್ನುತ್ತಾನಂತೆ.  ಹೀಗಾಗಿ ಈತನನ್ನು ಕಟ್ಟಿಹಾಕಿದ್ದಾರೆ. ಇಳಿವಯಸ್ಸಲ್ಲಿ ತಂದೆ-ತಾಯಿ ಸಲುಹಬೇಕಿದ್ದ ಮಗ ಗೃಹ ಬಂಧನದಲ್ಲಿ ನರಳುತ್ತಿರೋದು ದುರಂತ.‌

ಇದನ್ನೂ ವೀಕ್ಷಿಸಿ:  ಈಡೇರದ ಭರವಸೆ, ಸರ್ಕಾರದ ವಿರುದ್ಧ ಸಿಡಿದೆದ್ಧ ನೇಕಾರರು: ಉಚಿತ ವಿದ್ಯುತ್‌ಗೆ ಆಗ್ರಹ..!

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more