ವ್ಹೀಲ್‌ಚೇರ್‌ನಲ್ಲೇ ಅಯೋಧ್ಯೆಗೆ ಹೊರಟ ಸಾಹಸಿ: ರಾಮನ ಕಾಣುವ ಕನಸು ಕೊನೆಗೂ ನನಸಾಗುತ್ತಾ ?

ವ್ಹೀಲ್‌ಚೇರ್‌ನಲ್ಲೇ ಅಯೋಧ್ಯೆಗೆ ಹೊರಟ ಸಾಹಸಿ: ರಾಮನ ಕಾಣುವ ಕನಸು ಕೊನೆಗೂ ನನಸಾಗುತ್ತಾ ?

Published : Dec 11, 2023, 02:59 PM IST

ಅಯೋಧ್ಯೆಯಲ್ಲಿ ರಾಮಮಂದಿರ ಕಾಣುವ ಕೋಟ್ಯಾಂತರ ಜನರ ಬಯಕೆ ಈಡೇರುತ್ತಿದೆ. ಮಂದಿರದ ಕನಸು ಕಂಡ ವ್ಯಕ್ತಿಯೊಬ್ಬರು ತನ್ನ ಬಲಹೀನತೆಯನ್ನು ಕೂಡ ಲೆಕ್ಕಿಸದೆ ವ್ಹೀಲ್ ಚೇರ್‌ನಲ್ಲೇ ಅಯೋಧ್ಯೆಯ ಕಡೆ ಹೊರಟಿದ್ದಾರೆ. 

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಕೋಟ್ಯಾಂತ ಭಕ್ತರ ಕನಸು ಈಡೇರಲಿದೆ. ಅದ್ರೆ ಇಲ್ಲೊಬ್ಬರು ತನ್ನ ಕನಸ್ಸಿಗೆ ರೆಕ್ಕೆ ಕಟ್ಟಿ ವ್ಹೀಲ್‌ಚೇರ್‌ನಲ್ಲೇ(wheelchair) ಅಯೋಧ್ಯೆಗೆ ತೆರಳಲು ಮುಂದಾಗಿದ್ದಾರೆ. ಹೌದು ಇವರ ಹೆಸರು ಮಂಜುನಾಥ. ಮೂಲತಃ ಸಿಂಧಗಿಯವರು ಊರ್ ಊರ್ ಸುತ್ತುವುದೇ ಇವರ ಹವ್ಯಾಸವಾಗಿದೆ. ಅವಘಡ ಒಂದರಲ್ಲಿ ಕಾಲಿನ ಬಲ ಕಳೆದುಕೊಂಡ್ರು ತೀರ್ಥಯಾತ್ರೆ ಮಾಡುವುದನ್ನ ಮಾತ್ರ ಬಿಟ್ಟಿಲ್ಲ. ಒಂದು ಕ್ಷಣವು ನಿಂತ ಊರಲ್ಲಿ ನಿಲ್ಲದೆ, ಊರೂರು ಅಲೆಯುತ್ತಿದ್ದಾರೆ. ಇದೀಗ ರಾಮ ಮಂದಿರ(Ram Mandir) ಉದ್ಘಾಟನೆಯ ಸುದ್ದಿ ಕೇಳಿ ಮತ್ತೆ ಉತ್ತರಪ್ರದೇಶದತ್ತ ಮುಖ ಮಾಡಿದ್ದಾರೆ. ವ್ಹೀಲ್‌ಚೇರ್‌ನಲ್ಲಿ ಕುಳಿತುಕೊಂಡು, ಕೈಯಿಂದಲೇ ಅದನ್ನು ನಿಯಂತ್ರಿಸುತ್ತಾ, ಪ್ರತಿದಿನ ಹತ್ತಾರು ಕಿಲೋಮೀಟರ್ ಅಲೆದಾಡುವುದು ಸುಲಭದ ಮಾತಲ್ಲ. ಅದು ಕೂಡ ಒಬ್ಬಂಟಿಯಾಗಿ ತೀರ್ಥಕ್ಷೇತ್ರಗಳ ಸಂದರ್ಶನ ಮಾಡುತ್ತಾ ಉಡುಪಿಗೆ ಬಂದಿದ್ದ ಮಂಜುನಾಥ್ ತನ್ನ ಆಸೆ ಹೇಳಿಕೊಂಡರು. ಅಯೋಧ್ಯೆಗೆ(Ayodhya) ಹೊರಟಿದ್ದೇನೆ, ಉದ್ಘಾಟನೆಗೆ ತಲುಪುತ್ತೇನೋ ಇಲ್ಲವೋ ಗೊತ್ತಿಲ್ಲ. ಅಂತೂ ರಾಮನ ದರ್ಶನ ಮಾಡಿನೇ ವಾಪಸ್ ಬರೋದು ಎಂದು ಹೇಳಿಕೊಂಡರು. ಮಂಜುನಾಥ್ ಈ ಮೊದಲು ಕೂಡ ಅಯೋಧ್ಯೆಗೆ ಹೋಗಿದ್ದರಂತೆ. ಕೇವಲ ಅಯೋಧ್ಯ ಮಾತ್ರವಲ್ಲ ಈಗಾಗಲೇ ಮಥುರಾ, ಹರಿದ್ವಾರ, ಕಾಶಿ, ತಿರುಪತಿ ಸೇರಿದಂತೆ ದೇಶದ ಎಲ್ಲಾ ಸುಪ್ರಸಿದ್ಧ ಕ್ಷೇತ್ರಗಳಿಗೆ ಮಂಜುನಾಥ್ ಭೇಟಿ ಕೊಟ್ಟಿದ್ದಾರೆ. ಬೈಕ್, ಸೈಕಲ್‌ಗಳಲ್ಲಿ ದೇಶ ಸಂಚಾರ ನಡೆಸ್ತಿದ್ದ ಮಂಜುನಾಥ್, ಇದೀಗ ಕಾಲಿನ ಬಲ ಕಳೆದುಕೊಂಡ ನಂತರ ವ್ಹೀಲ್‌ಚೇರ್‌ನಲ್ಲಿ ತೀರ್ಥಯಾತ್ರೆ ನಡೆಸ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಐಟಿ ದಾಳಿ..‘ಕೈ’ MP ಮನೆಯಲ್ಲಿ ಕಂತೆ ಕಂತೆ ನೋಟು..! 5 ದಿನ, 150 ಅಧಿಕಾರಿಗಳು, 40 ಹಣ ಎಣಿಸುವ ಮಷಿನ್..!

21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
Read more