ಮಹಾಲಕ್ಷ್ಮಿ ಲೇಔಟ್ ಸಂಭ್ರಮ: ಘಮಘಮ ಖಾದ್ಯಗಳು..ಖಾದ್ಯಪ್ರಿಯರು ಫುಲ್‌ ಖುಷ್‌

ಮಹಾಲಕ್ಷ್ಮಿ ಲೇಔಟ್ ಸಂಭ್ರಮ: ಘಮಘಮ ಖಾದ್ಯಗಳು..ಖಾದ್ಯಪ್ರಿಯರು ಫುಲ್‌ ಖುಷ್‌

Published : Sep 23, 2023, 11:44 AM IST

ವೀಕೆಂಡ್ ಬಂದ್ರೆ ಸಾಕು ಸಿಲಿಕಾನ್ ಸಿಟಿ ಮಂದಿ ಎಲ್ಲಿಗೆ ಹೋಗದಪ್ಪಾ ಅಂತಾ ಹೊಸ ಹೊಸ ಪ್ಲಾನ್ ಮಾಡ್ತಾರೆ. ಅದರಲ್ಲೂ ಆಹಾರ ಪ್ರಿಯರಂತೂ ಎಂಜಾಯ್ಮೆಂಟ್ ಜೊತೆಗೆ ವಿವಿಧ ಬಗೆಯ ತಿಂಡಿ ತಿನಿಸು ಸವಿಯಲು ಇಷ್ಟಪಡ್ತಾರೆ. ಅಂತವರಿಗಾಗಿಯೇ ಮಹಾಲಕ್ಷ್ಮಿ ಲೇಔಟ್ ಸಂಭ್ರಮ ಆಯೋಜಿಸಲಾಗಿದೆ.
 

ಒಂದೆಡೆ ದಾವಣಗೆರೆ ಬೆಣ್ಣೆ ದೋಸೆ, ಮೇಲುಕೋಟೆ ಪುಲಿಯೋಗರೆ,ಚಳಿಗೆ ಬಿಸಿ ಬಿಸಿ ಬಜ್ಜಿ, ಅವರೆಕಾಳು ದೋಸೆ, ಉಪ್ಪಿಟ್ಟು, ಮಶ್ರೂಮ್ ಬಿರಿಯಾನಿ, ಶಿಮ್ಲಾ ಮಿರ್ಚಿ ಬಜ್ಜಿ   ಇನ್ನೊಂಡೆದೆ  ವೆರೈಟಿ ವೆರೈಟಿ ಫುಡ್ ಟೆಸ್ಟ್ ಮಾಡ್ತಿರೋ ಮಂದಿ. ಒಂದಕ್ಕಿಂತಲೂ ಒಂದು ತಿಂಡಿ ಸೂಪರೋ ಸೂಪರ್‌. ನೋಡ್ತಿದ್ರೆ ಹಾಗೇ ಬಾಯಲ್ಲಿ ನೀರುರಿಸುತ್ತೆ. ಹೌದು ಮಹಾಲಕ್ಷ್ಮಿ ಲೇಔಟ್ ನ(Mahalakshmi Layout) ಸುತ್ತಮುತ್ತಲಿನ ಸಾರ್ವಜನಿಕರಿಗಾಗಿ ಏಷ್ಯಾನೆಟ್ ಸುವರ್ಣನ್ಯೂಸ್ ಮತ್ತು ಕನ್ನಡಪ್ರಭ ವತಿಯಿಂದ ಮಹಾಲಕ್ಷ್ಮಿ ಲೇಔಟ್ ಸಂಭ್ರಮ(Mahalakshmi Layout Celebration) ಆಯೋಜಿಸಲಾಗಿದೆ. ಮಹಾಲಕ್ಷ್ಮಿ ಲೇಔಟ್ ನ ನಾಗಪುರ ವಾರ್ಡ್ ನಲ್ಲಿರುವ ರಾಣಿ ಅಬ್ಬಕ್ಕ ಗ್ರೌಂಡ್ ನಲ್ಲಿ ಆಯೋಜಿಸಿರುವ ಸಂಭ್ರಮದಲ್ಲಿ ವಿವಿಧ ಬಗೆಯ ಆಹಾರ ಪದಾರ್ಥಗಳ ಜೊತೆಗೆ ಫ್ಯಾಷನ್ ಗೆ(Fashion) ಸಂಬಂಧಪಟ್ಟ ವಸ್ತುಗಳನ್ನಾ ಅನಾವರಣಗೊಳಿಸಲಾಗಿದೆ.‌ ಮೂರು ದಿನಗಳ ಕಾಲ ನಡೆಯುವ ಸಂಭ್ರಮಕ್ಕೆ ನಟಿ ಪ್ರಣೀತ ಸುಭಾಷ್ ಹಾಗೂ ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ ಚಾಲನೆ ನೀಡಿದ್ರು. ಇನ್ನು ಮಹಾಲಕ್ಷ್ಮಿ ಲೇಔಟ್ ಸಂಭ್ರಮದಲ್ಲಿ ಶಾಸಕ ಗೋಪಾಲಯ್ಯ , ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಹೇಮಲತ ಗೋಪಾಲಯ್ಯ, ಮಾಜಿ ಉಪಮೇಯರ್ ಎಸ್.ಹರೀಶ್ ಸೇರಿದಂತೆ ಇನ್ನಿತರರು ಭಾಗಿಯಾಗಿದ್ರು.

ಇದನ್ನೂ ವೀಕ್ಷಿಸಿ:  ಆಕಾರ ಬದಲಿಸಿತಾ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಮರಳಿನ ಮೂರ್ತಿ..!

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
Read more