ಮಡಿಕೇರಿ ಹೋಟೆಲ್‌ಗಳ ಮೇಲೆ ಅಧಿಕಾರಿಗಳ ರೇಡ್: ಗಬ್ಬು ನಾರುವ ದೃಶ್ಯ ಕಂಡು ನಗರಸಭೆ ಸದಸ್ಯರೇ ಶಾಕ್ !

ಮಡಿಕೇರಿ ಹೋಟೆಲ್‌ಗಳ ಮೇಲೆ ಅಧಿಕಾರಿಗಳ ರೇಡ್: ಗಬ್ಬು ನಾರುವ ದೃಶ್ಯ ಕಂಡು ನಗರಸಭೆ ಸದಸ್ಯರೇ ಶಾಕ್ !

Published : Nov 17, 2023, 11:32 AM IST

ಮಡಿಕೇರಿ ಅಂದ್ರೆ ಸಾಕು ಪ್ರವಾಸಿಗರ ಹಾಟ್‌ಸ್ಪಾಟ್.ಪ್ರತಿನಿತ್ಯ ಸಾವಿರಾರು ಮಂದಿ ವಿಸಿಟ್ ಮಾಡ್ತಾರೆ. ಹೋಟೆಲ್‌ಗಳಲ್ಲಿ ತಿಂಡಿ,ಊಟ ಮಾಡ್ತಾರೆ..ಆದ್ರೆ ಪ್ರತಿನಿತ್ಯ ಗ್ರಾಹಕರಿಗೆ ಆಹಾರ ನೀಡುವ ಹೋಟೆಲ್‌,ಬೇಕರಿಗಳು ಎಷ್ಟು ಶುಚಿತ್ವ ಕಾಪಾಡಿಕೊಂಡಿವೆ ಅನ್ನೋ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

ಗ್ರಾಹಕರ ಅಟ್ರಾಕ್ಷನ್ ಮಾಡೋಕೆ ಕಲರ್‌ಫುಲ್ ಲೈಟಿಂಗ್. ಡಿಫರೆಂಟ್ ನೇಮ್..ಮಡಿಕೇರಿ ಹೋಟೆಲ್‌ಗಳು(Hotels) ಗ್ರಾಹಕರ ಸಳೆಯೋದ್ರಲ್ಲಿ ಎತ್ತಿದ ಕೈ..ಅಷ್ಟೇ ಅಲ್ಲ ಜನರಿಗೆ ತಿಂದ್ರೆ ನಾಲಿಗೆಗೆ ರುಚಿ ಹತ್ತುವ ಅಡುಗೆ ನೀಡೋದ್ರಲ್ಲೂ ಫೇಮಸ್‌.. ಆದ್ರೆ, ಈ ಹೋಟೆಲ್ಗಳ ಕತೆ ಹೊರಗೆಲ್ಲ ಥಳುಕು.. ಒಳಗೆಲ್ಲ ಹುಳುಕು ಅನ್ನೋದು ಬಯಲಾಗಿದೆ. ಮಡಿಕೇರಿ ನಗರಸಭೆ ಸದಸ್ಯರು(Madikeri Municipal Council members), ಆರೋಗ್ಯ ಅಧಿಕಾರಿಗಳ(Health officials) ದಾಳಿ ವೇಳೆ ಹೋಟೆಲ್ಗಳ ಅಸಲಿ ರಹಸ್ಯ ಬಯಲಾಗಿದೆ. ಆಹಾ ಎಂತಹ ಬಿರಿಯಾನಿ. ಕಬಾಬ್ ಸಿಕ್ಕಾಪಟ್ಟೆ ಟೇಸ್ಟ್. ಹೀಗಂತ ಬಾಯಿ ಚಪ್ಪರಿಸಿಕೊಂಡು ತಿನ್ನೋರಿಗೆ ಇಲ್ಲಿದೆ ನೋಡಿ ಶಾಕಿಂಗ್ ರಹಸ್ಯ. ಎಲ್ಲಿ ನೋಡಿದ್ರೂ ಗಲೀಜು. ಕಳಪೆ ಚಿಕನ್,ಮಟನ್, ಗಲೀಜಾದ ಅಡುಗೆ ಮನೆ ಕಂಡು ನಗರಸಭೆ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಇದನ್ನು ಜನರು ತಿಂದ್ರೆ ಏನಾಗಬಹುದು ಅಂತಾ ಅಧಿಕಾರಿಗಳು ಪ್ರಶ್ನಿಸಿದ್ರೆ ಕೆಲ ಹೋಟೆಲ್‌ ಮಾಲೀಕರು ಅಧಿಕಾರಿಗಳ ವಿರುದ್ಧವೇ  ರೇಗಾಡಿದ್ರು.ಇದಕ್ಕೆ ಸೊಪ್ಪು ಹಾಕದ ಅಧಿಕಾರಿಗಳು  ಸ್ವಚ್ಛತೆ ಕಾಪಾಡದ ಹೋಟೆಲ್‌ಗಳಿಗೆ 5 ಸಾವಿರ ದಂಡ ಹಾಕಿ ಎಚ್ಚರಿಕೆ ನೀಡಿದ್ರು. ಹೋಟೆಲ್ಗಳು ಮಾತ್ರವಲ್ಲ.. ಸ್ವೀಟ್ ಅಂಗಡಿ, ಬೇಕರಿಗಳಲ್ಲೂ ಇಂಥದ್ದೇ ದೃರ್ಶಯ ಕಂಡು ಬಂತು.. ಬೇಕರಿಯಲ್ಲಿ ಸ್ಪೀಟ್ ಪಾತ್ರೆಗೆ ಮುತ್ತಿಕ್ಕುವ ನೋಣನೋಡಿ ಅಧಿಕಾರಿಗಳು ಕಕ್ಕಾಬಿಕ್ಕಿಯಾದ್ರು. ಮಂಜಿನ ನಗರಿ ಪ್ರವಾಸಿಗರ ಹಾಟ್ಸ್ಪಾಟ್.. ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬರ್ತಾರೆ.. ಪ್ರವಾಸಿ ತಾಣಗಳ ಸೌಂಧರ್ಯ ಸವಿಯಲು ಬರುವ ಪ್ರವಾಸಿಗರು ಇಂಥ ಹೋಟೆಲ್ಗಳಲ್ಲೇ ಊಟ, ತಿಂಡಿ ಮಾಡುತ್ತಾರೆ.. ಆದ್ರೆ, ಸ್ವಚ್ಛತೆ ಕಾಪಾಡಿಕೊಳ್ಳದ ಇಂತ ಹೋಟೆಲ್, ಬೇಕರಿಗಳಿಂದ ಪ್ರವಾಸೋದ್ಯಮದ ಮೇಲೂ ಕೆಟ್ಟು ಪರಿಣಾಮ ಬೀರುತ್ತೆ.. ಹೀಗಾಗಿ ಹೋಟೆಲ್,ಬೇಕರಿಗಳಿಗೆ ಎಚ್ಚರಿಕೆ ಕೊಟ್ಟಿರುವ ಆಯುಕ್ತರು ಪರವಾನಗಿ ರದ್ದುಗೊಳಿಸೋದಾಗಿ ವಾರ್ನ್ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಪಾಠ ಬಿಟ್ಟು ಪ್ರತಿಭಟನೆಗೆ ಇಳಿದ ಶಿಕ್ಷಕರು..! ಮೂರು ತಿಂಗಳು ಸಂಬಳವಿಲ್ಲದೇ ಪರದಾಟ..!

22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
23:26Mysuru Marriage home Tragedy: ಮದುವೆ ಮನೆಯಲ್ಲಿ ಮೂರು ಚಟ್ಟ, ರಾಕ್ಷಸ ಉಲ್ಲಾಸ್ ಗೌಡನ ಕ್ರೌರ್ಯದ ಕಥೆ!
23:26FIR video: ಭೀಮಾತೀರದ ಹಂತಕ ಅಪ್ಪುಗೌಡ ಇಬ್ಬರ ಹತ್ಯೆಗೆ ಸ್ಕೆಚ್ ಹಾಕಿದ್ದ; ಆದ್ರೆ 6 ಜನರ ಕೊಲೆ ಮಾಡಿದ್ದೇಕೆ ಹಂತಕರು?
23:22ಕೇರಳದಿಂದ ಬಂದಿತ್ತು 20 ಲಕ್ಷ, ಪೊಲೀಸರಿಗೆ ಸಿಕ್ಕಿತ್ತು ಸುಳಿವು! ಖೆಡ್ಡಾಗೆ ಬಿದ್ದಿದ್ಹೇಗೆ 'ಖಾಕಿ' ಗ್ಯಾಂಗ್?
24:322 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಕೊಲೆ: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚಿ ಸಿಕ್ಕಿಬಿದ್ದ ಹೆಂಡತಿ!
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more