ಮಡಿಕೇರಿ ಹೋಟೆಲ್‌ಗಳ ಮೇಲೆ ಅಧಿಕಾರಿಗಳ ರೇಡ್: ಗಬ್ಬು ನಾರುವ ದೃಶ್ಯ ಕಂಡು ನಗರಸಭೆ ಸದಸ್ಯರೇ ಶಾಕ್ !

ಮಡಿಕೇರಿ ಹೋಟೆಲ್‌ಗಳ ಮೇಲೆ ಅಧಿಕಾರಿಗಳ ರೇಡ್: ಗಬ್ಬು ನಾರುವ ದೃಶ್ಯ ಕಂಡು ನಗರಸಭೆ ಸದಸ್ಯರೇ ಶಾಕ್ !

Published : Nov 17, 2023, 11:32 AM IST

ಮಡಿಕೇರಿ ಅಂದ್ರೆ ಸಾಕು ಪ್ರವಾಸಿಗರ ಹಾಟ್‌ಸ್ಪಾಟ್.ಪ್ರತಿನಿತ್ಯ ಸಾವಿರಾರು ಮಂದಿ ವಿಸಿಟ್ ಮಾಡ್ತಾರೆ. ಹೋಟೆಲ್‌ಗಳಲ್ಲಿ ತಿಂಡಿ,ಊಟ ಮಾಡ್ತಾರೆ..ಆದ್ರೆ ಪ್ರತಿನಿತ್ಯ ಗ್ರಾಹಕರಿಗೆ ಆಹಾರ ನೀಡುವ ಹೋಟೆಲ್‌,ಬೇಕರಿಗಳು ಎಷ್ಟು ಶುಚಿತ್ವ ಕಾಪಾಡಿಕೊಂಡಿವೆ ಅನ್ನೋ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

ಗ್ರಾಹಕರ ಅಟ್ರಾಕ್ಷನ್ ಮಾಡೋಕೆ ಕಲರ್‌ಫುಲ್ ಲೈಟಿಂಗ್. ಡಿಫರೆಂಟ್ ನೇಮ್..ಮಡಿಕೇರಿ ಹೋಟೆಲ್‌ಗಳು(Hotels) ಗ್ರಾಹಕರ ಸಳೆಯೋದ್ರಲ್ಲಿ ಎತ್ತಿದ ಕೈ..ಅಷ್ಟೇ ಅಲ್ಲ ಜನರಿಗೆ ತಿಂದ್ರೆ ನಾಲಿಗೆಗೆ ರುಚಿ ಹತ್ತುವ ಅಡುಗೆ ನೀಡೋದ್ರಲ್ಲೂ ಫೇಮಸ್‌.. ಆದ್ರೆ, ಈ ಹೋಟೆಲ್ಗಳ ಕತೆ ಹೊರಗೆಲ್ಲ ಥಳುಕು.. ಒಳಗೆಲ್ಲ ಹುಳುಕು ಅನ್ನೋದು ಬಯಲಾಗಿದೆ. ಮಡಿಕೇರಿ ನಗರಸಭೆ ಸದಸ್ಯರು(Madikeri Municipal Council members), ಆರೋಗ್ಯ ಅಧಿಕಾರಿಗಳ(Health officials) ದಾಳಿ ವೇಳೆ ಹೋಟೆಲ್ಗಳ ಅಸಲಿ ರಹಸ್ಯ ಬಯಲಾಗಿದೆ. ಆಹಾ ಎಂತಹ ಬಿರಿಯಾನಿ. ಕಬಾಬ್ ಸಿಕ್ಕಾಪಟ್ಟೆ ಟೇಸ್ಟ್. ಹೀಗಂತ ಬಾಯಿ ಚಪ್ಪರಿಸಿಕೊಂಡು ತಿನ್ನೋರಿಗೆ ಇಲ್ಲಿದೆ ನೋಡಿ ಶಾಕಿಂಗ್ ರಹಸ್ಯ. ಎಲ್ಲಿ ನೋಡಿದ್ರೂ ಗಲೀಜು. ಕಳಪೆ ಚಿಕನ್,ಮಟನ್, ಗಲೀಜಾದ ಅಡುಗೆ ಮನೆ ಕಂಡು ನಗರಸಭೆ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಇದನ್ನು ಜನರು ತಿಂದ್ರೆ ಏನಾಗಬಹುದು ಅಂತಾ ಅಧಿಕಾರಿಗಳು ಪ್ರಶ್ನಿಸಿದ್ರೆ ಕೆಲ ಹೋಟೆಲ್‌ ಮಾಲೀಕರು ಅಧಿಕಾರಿಗಳ ವಿರುದ್ಧವೇ  ರೇಗಾಡಿದ್ರು.ಇದಕ್ಕೆ ಸೊಪ್ಪು ಹಾಕದ ಅಧಿಕಾರಿಗಳು  ಸ್ವಚ್ಛತೆ ಕಾಪಾಡದ ಹೋಟೆಲ್‌ಗಳಿಗೆ 5 ಸಾವಿರ ದಂಡ ಹಾಕಿ ಎಚ್ಚರಿಕೆ ನೀಡಿದ್ರು. ಹೋಟೆಲ್ಗಳು ಮಾತ್ರವಲ್ಲ.. ಸ್ವೀಟ್ ಅಂಗಡಿ, ಬೇಕರಿಗಳಲ್ಲೂ ಇಂಥದ್ದೇ ದೃರ್ಶಯ ಕಂಡು ಬಂತು.. ಬೇಕರಿಯಲ್ಲಿ ಸ್ಪೀಟ್ ಪಾತ್ರೆಗೆ ಮುತ್ತಿಕ್ಕುವ ನೋಣನೋಡಿ ಅಧಿಕಾರಿಗಳು ಕಕ್ಕಾಬಿಕ್ಕಿಯಾದ್ರು. ಮಂಜಿನ ನಗರಿ ಪ್ರವಾಸಿಗರ ಹಾಟ್ಸ್ಪಾಟ್.. ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬರ್ತಾರೆ.. ಪ್ರವಾಸಿ ತಾಣಗಳ ಸೌಂಧರ್ಯ ಸವಿಯಲು ಬರುವ ಪ್ರವಾಸಿಗರು ಇಂಥ ಹೋಟೆಲ್ಗಳಲ್ಲೇ ಊಟ, ತಿಂಡಿ ಮಾಡುತ್ತಾರೆ.. ಆದ್ರೆ, ಸ್ವಚ್ಛತೆ ಕಾಪಾಡಿಕೊಳ್ಳದ ಇಂತ ಹೋಟೆಲ್, ಬೇಕರಿಗಳಿಂದ ಪ್ರವಾಸೋದ್ಯಮದ ಮೇಲೂ ಕೆಟ್ಟು ಪರಿಣಾಮ ಬೀರುತ್ತೆ.. ಹೀಗಾಗಿ ಹೋಟೆಲ್,ಬೇಕರಿಗಳಿಗೆ ಎಚ್ಚರಿಕೆ ಕೊಟ್ಟಿರುವ ಆಯುಕ್ತರು ಪರವಾನಗಿ ರದ್ದುಗೊಳಿಸೋದಾಗಿ ವಾರ್ನ್ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಪಾಠ ಬಿಟ್ಟು ಪ್ರತಿಭಟನೆಗೆ ಇಳಿದ ಶಿಕ್ಷಕರು..! ಮೂರು ತಿಂಗಳು ಸಂಬಳವಿಲ್ಲದೇ ಪರದಾಟ..!

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more