ಜನದಟ್ಟಣೆಯ ಬೆಂಗಳೂರಲ್ಲಿ ಮತ್ತೆ ಚಿರತೆ ಕಾಟ: ಅಪಾರ್ಟ್‌ಮೆಂಟ್‌ಗೆ ಚಿರತೆ ಎಂಟ್ರಿ, ಬೆಚ್ಚಿ ಬಿದ್ದ ಜನ !

ಜನದಟ್ಟಣೆಯ ಬೆಂಗಳೂರಲ್ಲಿ ಮತ್ತೆ ಚಿರತೆ ಕಾಟ: ಅಪಾರ್ಟ್‌ಮೆಂಟ್‌ಗೆ ಚಿರತೆ ಎಂಟ್ರಿ, ಬೆಚ್ಚಿ ಬಿದ್ದ ಜನ !

Published : Oct 31, 2023, 10:58 AM IST

ಹುಲಿ ಉಗುರು ಪೆಂಡೆಂಟ್ ಕೇಸ್ ತಣ್ಣಾಗ್ತಿದ್ದಂತೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಿರತೆ ಕಾಟ ಶುರುವಾಗಿದೆ. ಬೆಂಗಳೂರಿಗೆ ಚಿರತೆಯೊಂದು ಎಂಟ್ರಿ ಕೊಟ್ಟಿದ್ದು, ಅಪಾರ್ಟ್‌ಮೆಂಟ್‌ನಲ್ಲಿ ಚಿರತೆ ಓಡಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ವೈರಲ್ ಆಕ್ತಿದ್ದಂತೆ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.
 

ಬೆಂಗಳೂರು ಜನದಟ್ಟಣೆ ನಗರ.. ಹಗಲು ರಾತ್ರಿ ಜನರ ಓಡಾಟವಿರುತ್ತೆ.. ಇಂಥ ಮಹಾನಗರದಲ್ಲಿ ಈಗ ಚಿರತೆ ಕಾಟ ಶುರುವಾಗಿದೆ.. ಯೆಸ್,  ಬೊಮ್ಮನಹಳ್ಳಿ ಸಮೀಪದ ಕೂಡ್ಲು ಸೇರಿದಂತೆ ಸುತ್ತಮುತ್ತಲಿನ ಕಡೆಗಳಲ್ಲಿ ಚಿರತೆ (Leopard) ಪ್ರತ್ಯಕ್ಷವಾಗಿದೆ. ಕಳೆದ ಮೂರು ದಿನಗಳಿಂದ ಕೂಡ್ಲುವಿನ cadenza ಅಪಾರ್ಟ್ಮೆಂಟ್ ಹಾಗೂ aecs ಲೇಔಟ್ ಸುತ್ತಮುತ್ತ ಚಿರತೆ ಓಡಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ರಾತ್ರಿಯಾದ್ರೆ ಸಾಕು ಚಿರತೆ ರೌಂಡ್ಸ್ ಹೊಡೆಯುತ್ತಿದೆ. ಅಪಾರ್ಟ್ಮೆಂಟ್ಗಳ(Apartment) ಕಡೆಯೇ ಚಿರತೆ ಓಡಾಡುತ್ತಿರುವ ದೃಶ್ಯ ನೋಡಿ ಜನ ಬೆಚ್ಚಿಬಿದ್ದದಾರೆ.ರಾತ್ರಿ ಮನೆಯಿಂದ ಹೊರ ಬರೋಕು ಭಯಪಡುತ್ತಿದ್ದಾರೆ. ಕೂಡ್ಲೂಗೇಟ್ನ ಕಡನ್ಜ್ನ್ ಅಪಾರ್ಟ್ಮೆಂಟ್ ಬೇಸ್ಮೆಂಟ್, ಲಿಫ್ಟ್ ಬಳಿಯೆಲ್ಲಾ ಓಡಾಡಿದೆ. ಚಿರತೆ ಎಂಟ್ರಿ ಸುದ್ದಿ ತಿಳಿದು ಬೆಂಗಳೂರು ಜಿಲ್ಲೆ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. DCF ರವೀಂದ್ರ ಹಾಗೂ ಕೆ.ಆರ್.ಪುರಂ RFO ಶಿವಾರಾತ್ರೇಶ್ವರ ಸ್ವಾಮಿ ಮತ್ತು ಆನೇಕಲ್‌ನ RFO ಎಸ್.ಭರತ್ ಸೇರಿ 20ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆ ಹಿಡಿಯಲು ತಂತ್ರ ರೂಪಿಸಿದ್ದಾರೆ. ಚಿರತೆ ಓಡಾಡುವ ಪ್ರದೇಶಗಳಲ್ಲಿ ಎರಡು ಬೋನ್ಗಳನ್ನು ಇಟ್ಟಿದ್ದಾರೆ.ಕೂಡ್ಲು, ಸಿಂಗಸಂದ್ರ, ಸೋಮಸುಂದರ ಪಾಳ್ಯ, ಹೊಸಪಾಳ್ಯ, ಹೆಚ್ ಎಸ್ ಆರ್, ಪರಂಗಿಪಾಳ್ಯ, ಬಂಡೇಪಾಳ್ಯ ಸುತ್ತಮುತ್ತ ಅರಣ್ಯ ಇಲಾಖೆ ತಂಡ ಕಾರ್ಯಚರಣೆ ನಡೆಸ್ತಿದೆ. ಡ್ರೋಣ್  ಕ್ಯಾಮರಾ ಹಿಡಿದು ಚಿರತೆ ಬೇಟೆಗೆ ಇಳಿದಿದ್ದಾರೆ. ಚಿರತೆ ಸೆರೆ ಸಿಗೋವರೆಗೂ ಈ ಪ್ರದೇಶದ ಜನ ಎಚ್ಚರಿಕೆಯಿಂದ ಇರಬೇಕಿದೆ.

ಇದನ್ನೂ ವೀಕ್ಷಿಸಿ:  ಕನ್ನಡ ರಾಜ್ಯೋತ್ಸವಕ್ಕೆ ಯಶ್ ಕೊಡ್ತಾರೆ ಗುಡ್ ನ್ಯೂಸ್ ?ನ .01ಕ್ಕೆ ಅನೌನ್ಸ್ ಆಗೋದು ಯಶ್ 19ನಾ ? ರಾಮಾಯಣನಾ ?

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
Read more