ಚಿರತೆಯ ವಿರುದ್ಧ ಹೋರಾಡಿ ಜೀವ ಉಳಿಸಿಕೊಂಡ ನಾಯಿ: ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ

Jan 23, 2023, 4:09 PM IST

ಮೈಸೂರು ಬಳಿಕ ರಾಮನಗರದಲ್ಲಿ ಚಿರತೆ ಕಾಟ ಶುರುವಾಗಿದೆ. ಮನೆ ಮುಂದೆ ಕಟ್ಟಿದ್ದ ನಾಯಿ ಮೇಲೆ ಚಿರತೆ ದಾಳಿ ಮಾಡಿದ್ದು, ಚಿರತೆಯ ವಿರುದ್ಧವೇ ಹೋರಾಡಿ ನಾಯಿ ಜೀವ ಉಳಿಸಿಕೊಂಡಿದೆ. ನಾಯಿಯು ಬೇಟೆ ಆಡಲು ಬಂದ ಚಿರತೆಯನ್ನೇ ಓಡಿಸಿದ್ದು, ಗೋವಿಂದರಾಜು ಎಂಬುವವರ ಮನೆ ಮುಂದೆ ಕಟ್ಟಿದ್ದ ನಾಯಿ ಮೇಲೆ ಚಿರತೆ ದಾಳಿ ಮಾಡಿದೆ. ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.