ಕೆರೆಗಳ ಒಡಲಿಗೆ ಕನ್ನಹಾಕಿದ ಮಾಫಿಯಾ ಗ್ಯಾಂಗ್..! ಧನದಾಹಿಗಳಿಂದ ರೈತರ ಜೀವನಾಡಿ ಕಗ್ಗೊಲೆ !

ಕೆರೆಗಳ ಒಡಲಿಗೆ ಕನ್ನಹಾಕಿದ ಮಾಫಿಯಾ ಗ್ಯಾಂಗ್..! ಧನದಾಹಿಗಳಿಂದ ರೈತರ ಜೀವನಾಡಿ ಕಗ್ಗೊಲೆ !

Published : Nov 28, 2023, 10:26 AM IST

ಅದು ಕೆರೆಗಳ ನಾಡು ಅಂತಾನೆ ಪ್ರಖ್ಯಾತಿ ಪಡೆದಿರುವ ಜಿಲ್ಲೆ. ಮಳೆ ಇಲ್ಲದೇ ಬತ್ತಿ ಹೋಗುತ್ತಿರುವ ಆ ಕೆರೆಗಳ ಮಣ್ಣಿಗೆ ಹೊರ ರಾಜ್ಯಗಳಲ್ಲೂ ಡಿಮ್ಯಾಂಡ್‌ ಹೆಚ್ಚಿಗೆ.ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಿಡಿಗೇಡಿಗಳು ಕೆರೆಗಳ ಕೊಲೆ ಮಾಡ್ತಿದ್ದಾರೆ. ಸಕಾ೯ರಕ್ಕೆ ರಾಜಧನವನ್ನು ಪಾವತಿಸದೇ ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ ಮಾಡ್ತಿದ್ದಾರೆ.
 

ಕೋಲಾರ ಜಿಲ್ಲೆ ಕೆರೆಗಳ ನಾಡು ಅಂತಾನೆ ಪ್ರಖ್ಯಾತಿ. ಮಳೆ ಬಂದಾಗಲೆಲ್ಲ ತುಬಿಕೊಳ್ಲುವ ಕೆರೆಗಳು(Ponds) ಬೇಸಿಗೆಯಲ್ಲಿ ನೀರಿನ ದಾಹ ತಣಿಸುತ್ತವೆ. ರೈತರ(Farmers) ಜೀವನಾಡಿ ಈ ಕೆರೆಗಳು. ಆದ್ರೆ, ಇತ್ತಿಚಿನ ವರ್ಷಗಳಲ್ಲಿ ಸರಿಯಾದ ಪ್ರಮಾಣದಲ್ಲಿ ಮಳೆಯಿಲ್ಲದೇ ಕೆರೆಗಳು ತುಂಬಿಕೊಳ್ತಿಲ್ಲ. ಬತ್ತಿಹೋಗಿರೋ ಈ ಕೆರೆಗಳು ಈಗ ಮಣ್ಣು ಮಾರಾಟ(Soil Sale) ದಂಧೆಕೋರರ ಖಜಾನೆ ತುಂಬಿಸುತ್ತಿವೆ. ಇಲ್ನೋಡಿ ಕೆರೆಯ ಆಕಾರವನ್ನೇ ಕೆಡಿಸಿಬಿಟ್ಟಿದ್ದಾರೆ. ಕೋಲಾರ(Kolar) ತಾಲೂಕಿನ ತೊಟ್ಲಿ ಗ್ರಾಮದ ಶೆಟ್ಟಿ ಕೆರೆ ಇದು. ಕೆರೆಗಳ್ಳರು ಹಗಲು,ರಾತ್ರಿ ಅಂತ ಲೆಕ್ಕಿಸದೇ ಜೆಸಿಬಿ, ಟ್ರಾಕ್ಟರ್‌ ಬಳಸಿಕೊಂಡು ಮಣ್ಣನ್ನು ಅಕ್ರಮವಾಗಿ ಅಗೆದು ಮಾರಾಟ ಮಾಡುತ್ತಿದ್ದಾರೆ. ಸುಮಾರು 30 ಅಡಿ ಆಳದವರೆಗೂ ಕೆರೆಯ ಮಣ್ಣು ತೆಗೆದು ಮಾರಾಟ ಮಾಡಿದ್ದಾರೆ. ಇಷ್ಟಾದರೂ ಯಾರೊಬ್ಬರು ಹೇಳೋರಿಲ್ಲ ಕೇಳೋರಿಲ್ಲ.ಕೆರೆ ಮಣ್ಣು ತೆಗೆಯಬೇಕಾದ್ರೆ ಸ್ಥಳೀಯ ಗ್ರಾಮ ಪಂಚಾಯ್ತಿ ಹಾಗೂ ಗಣಿ ಇಲಾಖೆ ಅನುಮತಿ ಕಡ್ಡಾಯ. ಆದ್ರೆ, ತೊಟ್ಟಿ ಕೆರೆಯಲ್ಲಿ ಯಾರ ಅನುಮತಿಯನ್ನು ಪಡೆಯದೇ ಎಗ್ಗಿಲ್ಲದೇ ಬೇರೆ ಬೇರೆ ರಾಜ್ಯಗಳಿಗೆ ಮಣ್ಣು ಸಾಗಿಸುತ್ತಿದ್ದಾರೆ. ಸಕಾ೯ರಕ್ಕೂ ರಾಜಧಾನವನ್ನು ಪಾವತಿಸದೇ ರಾಜಾರೋಷವಾಗಿ ಕೆರೆ ಒಡಲಿಗೆ ಕನ್ನಹಾಕುತ್ತಿದ್ದಾರೆ. ಇನ್ನು ತೊಟ್ಲಿ ಗ್ರಾಮ ಪಂಚಾಯ್ತಿಯ ಕೆಲ ಸದಸ್ಯರು ಹಾಗೂ ಜಲಗಾರರೇ ಮಣ್ಣು ಸಾಗಾಣೆಯಲ್ಲಿ ತೊಡಗಿರುವ ಆರೋಪ ಕೇಳಿ ಬಂದಿದೆ.ಕೆರೆ ಮಣ್ಣು ತೆಗೆಯಲು ಅನುಮತಿ ಪಡೆದರು ಕೂಡ ಅದಕ್ಕೊಂದು ನಿಧಿ೯ಷ್ಟ ಸಮಯ ನಿಡಲಾಗುತ್ತೆ.. ಎಷ್ಟು ಆಳ ಹಾಗೂ ಅಗಲ ಅಗೆಯಬೇಕು ಅನ್ನೋ ಸೂಚನೆ ನೀಡಲಾಗುತ್ತೆ.. ಹೀಗೆ ತೆಗೆದ ಕೆರೆ ಮಣ್ಣುನ್ನು ಕೇವಲ ಕೃಷಿ ಚಟುವಟಿಕೆಗಳಿಗೆ ಮಾತ್ರ ಬಳಸಬೇಕು ಅಂತ ಸಕಾ೯ರದ ಆದೇಶವಿದೆ. ಆದ್ರಿಲ್ಲಿ ಎಲ್ಲಾ ನಿಯಮ ಗಾಳಿಗೆ ತೂರಿ ಮನೆಗಳ ಪಾಯದ ಕೆಲಸಕ್ಕೆ, ಇಟ್ಟಿಗೆ ಕಾಖಾ೯ನೆ ಹಾಗೂ ಇನ್ನಿತರ ಖಾಸಗಿ ಕೆಲಸಗಳಿಗೆ ಕೆರೆ ಮಣ್ಣು ಮಾರಾಟಮಾಡಿ ಹಣ ಮಾಡುತ್ತಿದ್ದಾರೆ. ಆಂಧ್ರ, ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಂದ ವಿವಿಧ ಕೆಲಸಗಳಿಗೆ ಈ ಮಣ್ಣಿಗೆ ಭಾರೀ ಬೇಡಿಕೆ ಇದೆ.

ಇದನ್ನೂ ವೀಕ್ಷಿಸಿ:  ಸರ್ಕಾರಿ ಶಾಲೆ ಮೇಲೆ ಬಿತ್ತು ಭೂ ಬಕಾಸುರರ ಕಣ್ಣು..? ಶಾಲೆ ಭೂಮಿ ಕಬಳಿಸಿ ಬಡಾವಣೆ ನಿರ್ಮಾಣಕ್ಕೆ ಪ್ಲಾನ್!

25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
24:13ಹಿಂದೂ ಹುಡುಗಿಯರೇ ಹುಷಾರ್​​! ಲವ್​​​ ನೆಪದಲ್ಲಿ ದೈಹಿಕ ಸಂಪರ್ಕ, ಅವನ ಜೇಬಿನಲ್ಲಿ ಸಿಕ್ಕಿದ್ದು ಭ್ರೂಣಹತ್ಯೆ ಮಾತ್ರೆ!
02:04ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ಆಗಮನ ಹಿನ್ನಲೆ, ಭದ್ರತಾ ತಪಾಸಣೆ ನಡುವೆ ಶ್ರೀಗಳಿಗೆ ಸಲ್ಯೂಟ್ ಹೊಡೆದ ಶ್ವಾನ
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
24:50ಮದ್ವೆಯಾದ ವರ್ಷಕ್ಕೆ ಪತ್ನಿಯನ್ನೇ ಕೊಂದುಬಿಟ್ಟನಾ ಪತಿ? 24ರ ಯುವತಿಗೆ ಸತ್ತಮೇಲೂ ಸಿಗಲಿಲ್ಲ ಶಾಂತಿ
Read more