ಕುರುಗೋಡು ಪುರಸಭೆಯಲ್ಲಿ ದಾಖಲೆಗಳ ಗೋಲ್ಮಾಲ್..? ಪುರಸಭೆ ಸದಸ್ಯರಿಂದಲೇ ಬಯಲಾಯ್ತು ಕರಾಳ ಸತ್ಯ !

ಕುರುಗೋಡು ಪುರಸಭೆಯಲ್ಲಿ ದಾಖಲೆಗಳ ಗೋಲ್ಮಾಲ್..? ಪುರಸಭೆ ಸದಸ್ಯರಿಂದಲೇ ಬಯಲಾಯ್ತು ಕರಾಳ ಸತ್ಯ !

Published : Dec 07, 2023, 10:11 AM IST

ಸರ್ಕಾರಿ ದಾಖಲೆಗಳು ಅಂದ್ರೆ ಸರ್ಕಾರಿ ಕಚೇರಿಯಲ್ಲಿರಬೇಕು. ಏನೇ ವ್ಯವಹಾರ ಇದ್ರೂ ಸರ್ಕಾರಿ ಕಚೇರಿಯಿಂದಲೇ ಆಗಬೇಕು. ಆದ್ರೆ ಕುರುಗೋಡು ಪುರಸಭೆ ದಾಖಲೆಗಳು ಕಂಪ್ಯೂಟರ್ ಸೆಂಟರ್‌ನಲ್ಲಿ ಪತ್ತೆಯಾಗಿದೆ.

ಕಂಪ್ಲಿ ಪಟ್ಟಣದ ಖಾಸಗಿ ಕಂಪ್ಯೂಟರ್ ಸೆಂಟರ್. ಆದ್ರೆ ಇಲ್ಲಿ ಮಾಡ್ತಿರೋದು ಮಾತ್ರ ಕುರುಗೋಡು ಪುರಸಭೆ ದಾಖಲೆ(Municipal documents) ಪತ್ರಗಳ ತಿದ್ದುಪಡಿ ಕೆಲಸ. ಪುರಸಭೆ ಕಾರ್ಯಾಲಯದಲ್ಲಿ ನಡೆಯಬೇಕಾದ ಎಲ್ಲಾ ಕೆಲಸಗಳೂ ಕಂಪ್ಲಿ ಕಂಪ್ಯೂಟರ್ ಸೆಂಟರ್‌ನಲ್ಲಿ(Kampli Computer Center) ಮಾಡಲಾಗ್ತಿದೆ. ಪುರಸಭೆ ಚೀಫ್ ಆಫೀಸರ್ ಲಾಗಿನ್ ಇಲ್ಲದೆ ಯಾವುದೇ ಸಾಫ್ಟ್‌ವೇರ್ ಓಪನ್ ಆಗಲ್ಲ. ಆದ್ರೂ ಕುರುಗೋಡಿನಿಂದ 30 ಕಿಲೋಮೀಟರ್ ದೂರವಿರೋ ಕಂಪ್ಯೂಟರ್ ಸೆಂಟರ್‌ನಲ್ಲಿ ದಾಖಲೆಗಳ ತಿದ್ದುಪಡಿ ಮಾಡಲಾಗ್ತಿದೆ. ಪುರಸಭೆ ಚೀಫ್ ಆಫೀಸರ್ ವಿಜಯಲಕ್ಷ್ಮಿಗೆ ಗೊತ್ತಿಲ್ಲದೇ ಇಷ್ಟೆಲ್ಲಾ ನಡೆಯಲು ಸಾಧ್ಯವಿಲ್ಲ. ಹಿರಿಯ ಅಧಿಕಾರಿಗಳ ಕುಮ್ಮಕ್ಕಿನಿಂದಲೇ ದಾಖಲೆಗಳ ಗೋಲ್ಮಾಲ್ ಕೆಲಸ ನಡೀತಿದೆ ಅನ್ನೋದು ಪುರಸಭೆ ಸದಸ್ಯರ ಆರೋಪ. ಕಳ್ಳ ವ್ಯವಹಾರ ಇರುವ ಕಾರಣಕ್ಕೆ ದಾಖಲೆಗಳನ್ನು ಹೊರಗೆ ಕಳಿಸಿ ತಿದ್ದುಪಡಿ ಮಾಡಿಸುತ್ತಿದ್ದಾರೆ ಅನ್ನೋದು ಪುರಸಭೆ ಸದಸ್ಯರ ಆರೋಪ. ಆದ್ರೆ, ಪುರಸಭೆಯಲ್ಲಿ ಕಂಪ್ಯೂಟರ್ ಆಪರೇಟರ್ ಇಲ್ಲದ ಕಾರಣ ಹೊರಗೆ ಕಳಿಸಿದ್ದೇವೆ ಅಂತ ಅಧಿಕಾರಿಗಳು ಸಮಜಾಯಿಷಿ ಕೊಡ್ತಿದ್ದಾರೆ. ಅನಿವಾರ್ಯವಿದ್ರೆ ಕುರುಗೋಡು ಕಂಪ್ಯೂಟರ್ ಸೆಂಟರ್ನಲ್ಲೇ ಕಫ್ಯೂಟರ್ ಆಪರೇಟರ್‌ ಕರೆಯಿಸಿ ಮಾಡಿಸಬಹುದಿತ್ತಲ್ವಾ..? ಕಂಪ್ಲಿ ಕಂಪ್ಯೂಟರ್ ಸೆಂಟರ್‌ಗೆ ಕಳಿಸಿದ್ದೇಕೆ ಅಂದ್ರೆ ಅಧಿಕಾರಿಗಳ ಬಳಿ ಉತ್ತರವಿಲ್ಲ. ಇದನ್ನೆಲ್ಲಾ ನೋಡ್ತಿದ್ರೆ ಇಲ್ಲೇನೋ ನಡೀತಿದೆ. ಪುರಸಭೆ ವ್ಯಾಪ್ತಿಯಲ್ಲಿ ಬಾರೀ ಗೋಲ್ಮಾಲ್ ವಾಸನೆ ಹೊಡೀತಿದೆ. ಈ ಬಗ್ಗೆ ತನಿಖೆ ನಡೆಸಿ, ಸತ್ಯ ಹೊರಬರಲಿ ಅನ್ನೋದು ಸಾರ್ವಜನಿಕರ ಒತ್ತಾಯ.

ಇದನ್ನೂ ವೀಕ್ಷಿಸಿ:  ಟಾಲಿವುಡ್‌ನಲ್ಲಿ ಶುರುವಾಯ್ತು ಆಶಿಕಾ ಕ್ರೇಜ್..! ರಶ್ಮಿಕಾರಂತೆ ಮಿಂಚಿದ ಪಟಾಕಿ ಪೋರಿ !

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more