ಎದುರಿಗಿರುವ ವಸ್ತುಗಳನ್ನು ಸೆನ್ಸ್‌ ಮಾಡುತ್ತೆ, ಅಂಧರಿಗಾಗಿ ವಿಶೇಷ ಕನ್ನಡಕ ತಯಾರಿಸಿದ ವಿದ್ಯಾರ್ಥಿ

ಎದುರಿಗಿರುವ ವಸ್ತುಗಳನ್ನು ಸೆನ್ಸ್‌ ಮಾಡುತ್ತೆ, ಅಂಧರಿಗಾಗಿ ವಿಶೇಷ ಕನ್ನಡಕ ತಯಾರಿಸಿದ ವಿದ್ಯಾರ್ಥಿ

Suvarna News   | Asianet News
Published : Mar 11, 2022, 01:21 PM ISTUpdated : Mar 11, 2022, 01:59 PM IST

ವೀರಾಜಪೇಟೆ ತಾಲೂಕಿನ ಸಿದ್ದಾಪುರದಲ್ಲಿರುವ ಶ್ರೀ ಕೃಷ್ಣ ಮಂದಿರದಲ್ಲಿ 9 ನೇ ವ್ಯಾಸಂಗ ಮಾಡುತ್ತಿರುವ ದೀಕ್ಷಿತ್ ಕಳೆದ ಎರಡು ತಿಂಗಳಿಂದ ಈ ಕನ್ನಡಕ ತಯಾರಿಸಲು ಸಾಕಷ್ಟು ಶ್ರಮ ಪಟ್ಟಿದ್ದಾನೆ. ಅದರ ಫಲವಾಗಿ ಕೊನೆಗೂ ಕಣ್ಣಿಲ್ಲದವರಿಗೆ ಈ ವಿನೂತನವಾದ ಕನ್ನಡಕ ಕಂಡು ಹಿಡಿದಿದ್ದಾನೆ. 

ಮಡಿಕೇರಿ (ಮಾ. 11): ಸಾಮಾನ್ಯವಾಗಿ ಅಂದರು ಕಣ್ಣಿಗೆ ಕಪ್ಪು ಕನ್ನಡಕ ಹಾಕಿರುತ್ತಾರೆ. ಆದರೆ ಅದರಿಂದ ಯಾವುದೇ ಪ್ರಯೋಜನವಾಗಲ್ಲ.ಆದರೆ ಇಲ್ಲಿ ವಿದ್ಯಾರ್ಥಿಯೊಬ್ಬ ಅಂದರಿಗಾಗಿ ಕನ್ನಡಕವೊಂದನ್ನು ಕಂಡು ಹಿಡಿದಿದ್ದಾನೆ.ಈ ಕನ್ನಡಕ ಹಾಕಿಕೊಂಡರೆ ಎದುರಿಗೆ ಏನೇ ಇದ್ದರು ಅಂದರಿಗೆ ಸೂಚನೆ ನೀಡುತ್ತದೆ. 

ವೀರಾಜಪೇಟೆ ತಾಲೂಕಿನ ಸಿದ್ದಾಪುರದಲ್ಲಿರುವ ಶ್ರೀ ಕೃಷ್ಣ ಮಂದಿರದಲ್ಲಿ 9 ನೇ ವ್ಯಾಸಂಗ ಮಾಡುತ್ತಿರುವ ದೀಕ್ಷಿತ್ ಕಳೆದ ಎರಡು ತಿಂಗಳಿಂದ ಈ ಕನ್ನಡಕ ತಯಾರಿಸಲು ಸಾಕಷ್ಟು ಶ್ರಮ ಪಟ್ಟಿದ್ದಾನೆ. ಅದರ ಫಲವಾಗಿ ಕೊನೆಗೂ ಕಣ್ಣಿಲ್ಲದವರಿಗೆ ಈ ವಿನೂತನವಾದ ಕನ್ನಡಕ ಕಂಡು ಹಿಡಿದಿದ್ದಾನೆ. ಈ ಕನ್ನಡಕದ ವಿಶೇಷತೆ ಏನು ಅಂತ ನೋಡೋದಾದರೆ, ಇದನ್ನು ಹಾಕಿ ನಡೆಯುತ್ತಿದ್ದರೆ ಮುಂದೆ ಏನೇ ಇದ್ದರೂ ಒಂದು ಮೀಟರ್ ದೂರದಲ್ಲಿಯೇ ವಿಶಲ್ ಹಾಕುತ್ತೆ ಅಂದರೆ ಬೀಪ್ ಶಬ್ದ ಬರುತ್ತದೆ. ಇದರಿಂದ ಮುಂದೆ ಏನೋ ಅಡೆತಡೆ ಇದೆ ಎಂದು ಅಂದರಿಗೆ ಅರಿವಾಗುತ್ತದೆ. ಈ ಕನ್ನಡಕಕ್ಕೆ ಚಾರ್ಜಿಂಗ್ ವ್ಯವಸ್ಥೆ ಇದೆ. ಜೊತೆಗೆ ಐದು ಗಂಟೆ ಬಿಸಿಲಿನಲ್ಲಿಟ್ಟರೆ ಸೂರ್ಯನ ಕಿರಣಗಳಿಂದಲೂ ಚಾರ್ಜ್ ಆಗುತ್ತದೆ. ಆದ್ದರಿಂದ ಅಂಧರು  ಈ ಕನ್ನಡಕ ಹಾಕಿಕೊಂಡರೆ ಯಾವುದೇ ಅಪಾಯವಿಲ್ಲದೆ ಮುಂದೆ ಸಾಗಬಹುದಾಗಿದೆ.

 ಇನ್ನೂ  ಈ ಕನ್ನಡಕ ತಯಾರಿಸಲು ಬೇಕಾದ ಪರಿಕರಗಳನ್ನು ಆನ್​ಲೈನ್ ಮೂಲಕ ತರಿಸಲಾಗಿದೆ. ಒಂದು ಕನ್ನಡಕ ತಯಾರಿಕೆಗೆ ಸುಮಾರು ಒಂದು ಸಾವಿರ ರೂ ಖರ್ಚಾಗುತ್ತದೆ. ಮಗನ ಈ ಸಾಧನೆಗೆ ಪೋಷಕರು ಹರ್ಷ ವ್ಯಕ್ತಪಡಿಸಿದರೆ ನಮ್ಮ ಶಾಲೆಯಲ್ಲಿ ಇಂತಹ ಪ್ರತಿಭೆ ಇರೋದು ಗೊತ್ತಿರಲಿಲ್ಲ.ಈಗ ತುಂಬಾ ಹೆಮ್ಮೆಯಾಗುತ್ತಿದೆ ಎನ್ನುತ್ತಿದ್ದಾರೆ ಶಿಕ್ಷಕ ವೃಂದದವರು. ಈ ಕನ್ನಡಕವನ್ನು ಮತ್ತಷ್ಟು ಅಭಿವೃದ್ದಿಪಡಿಸಲು ಈ ಯುವಕ ಮುಂದಾಗಿದ್ದಾನೆ. ಶಾಲೆ ಎಂದರೆ ಕೇವಲ ಓದು ಮಾತ್ರ ಅಲ್ಲ. ಅದರ ಜೊತೆಗೆ ಇಂತಹ ವಿಶೇಷ ಪ್ರತಿಭೆಗಳಿಗೆ ಶಾಲೆ ಒಂದು ಉತ್ತಮ ವೇದಿಕೆಯನ್ನು ನೀಡುತ್ತದೆ. ಅದಕ್ಕೆ  ಈ ವಿದ್ಯಾರ್ಥಿ ಸಾಕ್ಷಿಯಾಗಿದ್ದಾನೆ ಎನ್ನುತ್ತಾರೆ ಶಿಕ್ಷಕರು.

24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
24:13ಹಿಂದೂ ಹುಡುಗಿಯರೇ ಹುಷಾರ್​​! ಲವ್​​​ ನೆಪದಲ್ಲಿ ದೈಹಿಕ ಸಂಪರ್ಕ, ಅವನ ಜೇಬಿನಲ್ಲಿ ಸಿಕ್ಕಿದ್ದು ಭ್ರೂಣಹತ್ಯೆ ಮಾತ್ರೆ!
02:04ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ಆಗಮನ ಹಿನ್ನಲೆ, ಭದ್ರತಾ ತಪಾಸಣೆ ನಡುವೆ ಶ್ರೀಗಳಿಗೆ ಸಲ್ಯೂಟ್ ಹೊಡೆದ ಶ್ವಾನ
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
24:50ಮದ್ವೆಯಾದ ವರ್ಷಕ್ಕೆ ಪತ್ನಿಯನ್ನೇ ಕೊಂದುಬಿಟ್ಟನಾ ಪತಿ? 24ರ ಯುವತಿಗೆ ಸತ್ತಮೇಲೂ ಸಿಗಲಿಲ್ಲ ಶಾಂತಿ
23:42ಕೊಡಗಿನ ಬೆಡಗಿ ರಂಜಿತಾ ಪ್ರೀತಿಗೆ 2 ತಿಂಗಳಷ್ಟೇ ವ್ಯಾಲಿಡಿಟಿ; ಬೆಂಗಳೂರು ಬಾಡಿಗೆ ಮನೆಯಲ್ಲಿ ಲವ್ವರ್ ಕೈಯಲ್ಲೇ ಮರ್ಡರ್!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
25:29ಮುಟ್ಟಿ ಕೆಟ್ಟ ಮುತ್ಯಾ: ಲೈಂಗಿಕ ದೌರ್ಜನ್ಯವೆಸಗಿದನಾ ಮುತ್ಯಾ..? ಯಾರು ಈ ದೇವಮಾನವ
Read more