ಎದುರಿಗಿರುವ ವಸ್ತುಗಳನ್ನು ಸೆನ್ಸ್‌ ಮಾಡುತ್ತೆ, ಅಂಧರಿಗಾಗಿ ವಿಶೇಷ ಕನ್ನಡಕ ತಯಾರಿಸಿದ ವಿದ್ಯಾರ್ಥಿ

ಎದುರಿಗಿರುವ ವಸ್ತುಗಳನ್ನು ಸೆನ್ಸ್‌ ಮಾಡುತ್ತೆ, ಅಂಧರಿಗಾಗಿ ವಿಶೇಷ ಕನ್ನಡಕ ತಯಾರಿಸಿದ ವಿದ್ಯಾರ್ಥಿ

Suvarna News   | Asianet News
Published : Mar 11, 2022, 01:21 PM ISTUpdated : Mar 11, 2022, 01:59 PM IST

ವೀರಾಜಪೇಟೆ ತಾಲೂಕಿನ ಸಿದ್ದಾಪುರದಲ್ಲಿರುವ ಶ್ರೀ ಕೃಷ್ಣ ಮಂದಿರದಲ್ಲಿ 9 ನೇ ವ್ಯಾಸಂಗ ಮಾಡುತ್ತಿರುವ ದೀಕ್ಷಿತ್ ಕಳೆದ ಎರಡು ತಿಂಗಳಿಂದ ಈ ಕನ್ನಡಕ ತಯಾರಿಸಲು ಸಾಕಷ್ಟು ಶ್ರಮ ಪಟ್ಟಿದ್ದಾನೆ. ಅದರ ಫಲವಾಗಿ ಕೊನೆಗೂ ಕಣ್ಣಿಲ್ಲದವರಿಗೆ ಈ ವಿನೂತನವಾದ ಕನ್ನಡಕ ಕಂಡು ಹಿಡಿದಿದ್ದಾನೆ. 

ಮಡಿಕೇರಿ (ಮಾ. 11): ಸಾಮಾನ್ಯವಾಗಿ ಅಂದರು ಕಣ್ಣಿಗೆ ಕಪ್ಪು ಕನ್ನಡಕ ಹಾಕಿರುತ್ತಾರೆ. ಆದರೆ ಅದರಿಂದ ಯಾವುದೇ ಪ್ರಯೋಜನವಾಗಲ್ಲ.ಆದರೆ ಇಲ್ಲಿ ವಿದ್ಯಾರ್ಥಿಯೊಬ್ಬ ಅಂದರಿಗಾಗಿ ಕನ್ನಡಕವೊಂದನ್ನು ಕಂಡು ಹಿಡಿದಿದ್ದಾನೆ.ಈ ಕನ್ನಡಕ ಹಾಕಿಕೊಂಡರೆ ಎದುರಿಗೆ ಏನೇ ಇದ್ದರು ಅಂದರಿಗೆ ಸೂಚನೆ ನೀಡುತ್ತದೆ. 

ವೀರಾಜಪೇಟೆ ತಾಲೂಕಿನ ಸಿದ್ದಾಪುರದಲ್ಲಿರುವ ಶ್ರೀ ಕೃಷ್ಣ ಮಂದಿರದಲ್ಲಿ 9 ನೇ ವ್ಯಾಸಂಗ ಮಾಡುತ್ತಿರುವ ದೀಕ್ಷಿತ್ ಕಳೆದ ಎರಡು ತಿಂಗಳಿಂದ ಈ ಕನ್ನಡಕ ತಯಾರಿಸಲು ಸಾಕಷ್ಟು ಶ್ರಮ ಪಟ್ಟಿದ್ದಾನೆ. ಅದರ ಫಲವಾಗಿ ಕೊನೆಗೂ ಕಣ್ಣಿಲ್ಲದವರಿಗೆ ಈ ವಿನೂತನವಾದ ಕನ್ನಡಕ ಕಂಡು ಹಿಡಿದಿದ್ದಾನೆ. ಈ ಕನ್ನಡಕದ ವಿಶೇಷತೆ ಏನು ಅಂತ ನೋಡೋದಾದರೆ, ಇದನ್ನು ಹಾಕಿ ನಡೆಯುತ್ತಿದ್ದರೆ ಮುಂದೆ ಏನೇ ಇದ್ದರೂ ಒಂದು ಮೀಟರ್ ದೂರದಲ್ಲಿಯೇ ವಿಶಲ್ ಹಾಕುತ್ತೆ ಅಂದರೆ ಬೀಪ್ ಶಬ್ದ ಬರುತ್ತದೆ. ಇದರಿಂದ ಮುಂದೆ ಏನೋ ಅಡೆತಡೆ ಇದೆ ಎಂದು ಅಂದರಿಗೆ ಅರಿವಾಗುತ್ತದೆ. ಈ ಕನ್ನಡಕಕ್ಕೆ ಚಾರ್ಜಿಂಗ್ ವ್ಯವಸ್ಥೆ ಇದೆ. ಜೊತೆಗೆ ಐದು ಗಂಟೆ ಬಿಸಿಲಿನಲ್ಲಿಟ್ಟರೆ ಸೂರ್ಯನ ಕಿರಣಗಳಿಂದಲೂ ಚಾರ್ಜ್ ಆಗುತ್ತದೆ. ಆದ್ದರಿಂದ ಅಂಧರು  ಈ ಕನ್ನಡಕ ಹಾಕಿಕೊಂಡರೆ ಯಾವುದೇ ಅಪಾಯವಿಲ್ಲದೆ ಮುಂದೆ ಸಾಗಬಹುದಾಗಿದೆ.

 ಇನ್ನೂ  ಈ ಕನ್ನಡಕ ತಯಾರಿಸಲು ಬೇಕಾದ ಪರಿಕರಗಳನ್ನು ಆನ್​ಲೈನ್ ಮೂಲಕ ತರಿಸಲಾಗಿದೆ. ಒಂದು ಕನ್ನಡಕ ತಯಾರಿಕೆಗೆ ಸುಮಾರು ಒಂದು ಸಾವಿರ ರೂ ಖರ್ಚಾಗುತ್ತದೆ. ಮಗನ ಈ ಸಾಧನೆಗೆ ಪೋಷಕರು ಹರ್ಷ ವ್ಯಕ್ತಪಡಿಸಿದರೆ ನಮ್ಮ ಶಾಲೆಯಲ್ಲಿ ಇಂತಹ ಪ್ರತಿಭೆ ಇರೋದು ಗೊತ್ತಿರಲಿಲ್ಲ.ಈಗ ತುಂಬಾ ಹೆಮ್ಮೆಯಾಗುತ್ತಿದೆ ಎನ್ನುತ್ತಿದ್ದಾರೆ ಶಿಕ್ಷಕ ವೃಂದದವರು. ಈ ಕನ್ನಡಕವನ್ನು ಮತ್ತಷ್ಟು ಅಭಿವೃದ್ದಿಪಡಿಸಲು ಈ ಯುವಕ ಮುಂದಾಗಿದ್ದಾನೆ. ಶಾಲೆ ಎಂದರೆ ಕೇವಲ ಓದು ಮಾತ್ರ ಅಲ್ಲ. ಅದರ ಜೊತೆಗೆ ಇಂತಹ ವಿಶೇಷ ಪ್ರತಿಭೆಗಳಿಗೆ ಶಾಲೆ ಒಂದು ಉತ್ತಮ ವೇದಿಕೆಯನ್ನು ನೀಡುತ್ತದೆ. ಅದಕ್ಕೆ  ಈ ವಿದ್ಯಾರ್ಥಿ ಸಾಕ್ಷಿಯಾಗಿದ್ದಾನೆ ಎನ್ನುತ್ತಾರೆ ಶಿಕ್ಷಕರು.

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
Read more