ಹೀರೋಗಳ ಹೆಸರಿನಲ್ಲಿ ದತ್ತು; ಯಾರ ಹೆಸರಲ್ಲಿ ಯಾವ ಪ್ರಾಣಿ? ಇದು ಮೈಸೂರು ಝೂ ಕಹಾನಿ

Jun 11, 2020, 7:25 PM IST

ಮೈಸೂರು (ಜೂ. 11): ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅಗ್ರಮಾನ್ಯ ಸ್ಥಾನದಲ್ಲಿ ನಿಲ್ಲುವ ಡಾ.ರಾಜ್ ಕುಮಾರ್, ವಿಷ್ಣುವರ್ಧನ್ ಹಾಗೂ ಅಂಬರೀಶ್ ಈಗ ಬದುಕಿಲ್ಲ. ಅವರ ಹೆಸರು ಸಿನಿಮಾಗಳಲ್ಲಿ ಮಾತ್ರವಲ್ಲ, ಮೈಸೂರು ಮೃಗಾಲಯದಲ್ಲೂ ಹಸಿರಾಗಿದೆ. ಮೃಗಾಲಯ, ವನ್ಯಜೀವಿಗಳು, ಕಾಡು ಪ್ರಾಣಿಗಳ ಬಗ್ಗೆ ಮೂವರೂ ನಾಯಕರು ಸಾಕಷ್ಟು ಚಿತ್ರಗಳನ್ನು ಮಾಡಿದ್ದಾರೆ.

ಇದನ್ನೂ ನೋಡಿ | ಜೊತೆ ಜೊತೆಯಲಿ 'ನೂರು ಜನ್ಮ'ಕ್ಕೂ ಮಾಡಿದ 1 ಕೋಟಿ ರೆಕಾರ್ಡ್‌!...

ಈಗ ಅಂತಹ ನಾಯಕರ ಹೆಸರಿನಲ್ಲಿ ಪ್ರಾಣಿಗಳನ್ನು ದತ್ತು ಪಡೆಯಲಾಗಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಇತ್ತೀಚೆಗೆ ಮೂರು ಪ್ರಾಣಿಗಳನ್ನು ದತ್ತು ಪಡೆದುಕೊಂಡಿದ್ದಾರೆ.