ಸಿಲಿಕಾನ್ ಸಿಟಿಯಲ್ಲಿ ಕೋಣಗಳ ಮೇಳ! ಭರ್ಜರಿಯಾಗಿದೆ ಕರಾವಳಿಯ ಕಂಬಳ..!

ಸಿಲಿಕಾನ್ ಸಿಟಿಯಲ್ಲಿ ಕೋಣಗಳ ಮೇಳ! ಭರ್ಜರಿಯಾಗಿದೆ ಕರಾವಳಿಯ ಕಂಬಳ..!

Published : Nov 26, 2023, 09:10 AM IST

ದೊಡ್ಡ ಕೆಸರು ಗದ್ದೆ. ಅಲ್ಲಿ ಕೋಣಗಳ ಭರ್ಜರಿ ಓಟ. ಕೋಣದ ಓಟಕ್ಕೆ ಆಳೆತ್ತರಕ್ಕೆ ಹಾರೋ ಕೆಸರು. ಅಲ್ಲಿದ್ದವರೆಲ್ಲಾ ಈ ಕೋಣದ ಕಂಬಳ ನೋಡಿ ಒಂದು ಕ್ಷಣ ಥ್ರಿಲ್ ಆಗಿದ್ರು. ಶಿಳ್ಳೆ ಚಪ್ಪಾಳೆ ಹೊಡೆದು ಕೋಣಗಳಿಗೆ ಫುಲ್ ಝೋಶ್ ತುಂಬುತ್ತಿದ್ರು. 
 

ಕಂಬಳ ಅಂದ್ರೆ ನೆನಪಾಗೋದು ಕರಾವಳಿಯ ಮಂಗಳೂರು, ಉಡುಪಿ. ಆದ್ರೆ ಇನ್ಮುಂದೆ ಕಂಬಳ(Kambala) ಅಂದ್ರೆ ಕಣ್ಮುಂದೆ ಬರೋದು ನಮ್ಮ ಬೆಂಗಳೂರು. ಕಾರಾವಳಿಯ ಆಚರಣೆ ಕಂಬಳ ಫಸ್ಟ್ ದಿ ಫಸ್ಟ್ ಟೈಂ ಬೆಂಗಳೂರಿನಲ್ಲಿ(Bengaluru) ನಡೆದಿದೆ. 150 ಜೋಡಿ ಕೋಣಗಳು ಕೆಸರುಗದ್ದೆಯಲ್ಲಿ ನಾನಾ ನೀನಾ ಅಂತ ಸ್ಪರ್ಧೆಗೆ ಬಿದಿದ್ವು. ಈ ಕೋಣಗಳ ಓಟ ನೋಡೋಕೆ ಸಿಕ್ಕಾಪಟ್ಟೆ ತ್ರಿಲ್ ಆಗ್ತಿತ್ತು. ಕರಾವಳಿಗರ ಕಂಬಳ ಕಿಕ್ ಕೊಡೋಕೆ ಕಾರಣ ರಿಷಬ್ ಶೆಟ್ಟಿಯ(Rishabh Shetty) ಕಾಂತಾರ ಸಿನಿಮಾ. ಕಾಂತರದಲ್ಲಿ(Kantara) ಕಾಡುಬೆಟ್ಟದ ಶಿವ ಕಂಬಳ ಪಟುವಾಗಿದ್ದ ಶೆಟ್ರು ಕಂಬಳ ಮಾಡಿದ್ದನ್ನ ನೋಡಿ ವಾವ್ಹ್ ಅಂದಿದ್ರು. ಅಲ್ಲಿಂದ ಈ ಕಂಬಳದ ಕ್ರೇಜ್ ಹೆಚ್ಚಾಯ್ತು. ಇದರ ಫಲ ಕಂಬಳ ಈಗ ಬೆಂಗಳೂರಿಗೆ ಶಿಫ್ಟ್ ಆಗಿದೆ. ಕಂಬಳ ಕರಾವಳಿಗರ ಕ್ರೇಜ್. ಈ ಕ್ರೇಜ್ ಬೆಂಗಳೂರಿಗೆ ಶಿಫ್ಟ್ ಆಗ್ಬೇಕು ಅಂದ್ರೆ ಅದಕ್ಕೆ ಸೆಲೆಬ್ರೆಟಿಗಳ ಸಪೋರ್ಟ್ ಕೂಡ ಬೇಕು. ಈ ಕಂಬಳಕ್ಕೆ ಚಿತ್ರರಂಗದ ದಿಗ್ಗಜ ನಟ ನಟಿಯರು ಬರ್ತಾರೆ ಅಂತ ಕಂಬಳ ಆಯೋಜಕ ಅಶೋಕ್ ರೈ(Ashok Rai) ಹೇಳಿದ್ರು. ಆದ್ರೆ ಕೋಣಗಳ ಓಟದ ಮಧ್ಯೆ ನಮ್ಮ ಸ್ಟಾರ್ಸ್ಗಳನ್ನೂ ಕಣ್ತುಂಬಿಕೊಳ್ಳೋಣ ಅಂತ ಬಂದ ಹಲವರಿಗೆ ನಿರಾಸೆಯಾಗಿತ್ತು. ಎಷ್ಟೇ ಝೂಮ್ ಹಾಕಿದ್ರು ಕಂಬಳದಲ್ಲಿ ದೀಪಿಕಾ, ಐಶ್ವರ್ಯ, ಅನುಷ್ಕಾ ಶೆಟ್ಟಿ, ಶಿಲ್ಪಾ ಶೆಟ್ಟಿ, ಶ್ರೀನಿಧಿ ಶೆಟ್ಟಿ, ಕೆ ಎಲ್ ರಾಹುಲ್  ರಜನಿಕಾಂತ್ ಯಾರು ಕಾಣ್ಲೇ ಇಲ್ಲ.. ಅಶ್ವೀನಿ ಪುನೀತ್ ರಾಜ್ಕುಮಾರ್ ಕಂಬಳ ಉದ್ಘಾಟಿಸಿದ್ರು.ಎರಡು ದಿನ ನಡೆಯೋ ಕಂಬಳದಲ್ಲಿ ಬರೀ ಕೋ ಣಗಳು ಬಿಟ್ರೆ ಯಾವೊಬ್ಬ ಸ್ಟಾರ್ಸ್ಗಳು ಕಣ್ಣಿಗೆ ಬೀಳಲಿಲ್ಲ. ಆದ್ರೆ ನಾಳೆಯೂ ಕೋಣಗಳ ಓಟ ಇರೋದ್ರಿಂದ ಕೆಲ ಸ್ಟಾರ್ಗಳು ಬಂದ್ರು ಆಶ್ಚರ್ಯವೇನಿಲ್ಲ.

ಇದನ್ನೂ ವೀಕ್ಷಿಸಿ:  ಕೆಮಿಕಲ್ ಎಂಜಿನಿಯರಿಂಗ್ ಬಿಟ್ಟು ಯೋಧರಾಗಿದ್ದು ಯಾಕೆ..? 23 ಕಿಮೀ ಅಂತಿಮಯಾತ್ರೆ..ಎಲ್ಲೆಲ್ಲೂ ಜನಸಾಗರ..!

22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
23:26Mysuru Marriage home Tragedy: ಮದುವೆ ಮನೆಯಲ್ಲಿ ಮೂರು ಚಟ್ಟ, ರಾಕ್ಷಸ ಉಲ್ಲಾಸ್ ಗೌಡನ ಕ್ರೌರ್ಯದ ಕಥೆ!
23:26FIR video: ಭೀಮಾತೀರದ ಹಂತಕ ಅಪ್ಪುಗೌಡ ಇಬ್ಬರ ಹತ್ಯೆಗೆ ಸ್ಕೆಚ್ ಹಾಕಿದ್ದ; ಆದ್ರೆ 6 ಜನರ ಕೊಲೆ ಮಾಡಿದ್ದೇಕೆ ಹಂತಕರು?
23:22ಕೇರಳದಿಂದ ಬಂದಿತ್ತು 20 ಲಕ್ಷ, ಪೊಲೀಸರಿಗೆ ಸಿಕ್ಕಿತ್ತು ಸುಳಿವು! ಖೆಡ್ಡಾಗೆ ಬಿದ್ದಿದ್ಹೇಗೆ 'ಖಾಕಿ' ಗ್ಯಾಂಗ್?
24:322 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಕೊಲೆ: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚಿ ಸಿಕ್ಕಿಬಿದ್ದ ಹೆಂಡತಿ!
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more