ಸಿಲಿಕಾನ್ ಸಿಟಿಯಲ್ಲಿ ಕೋಣಗಳ ಮೇಳ! ಭರ್ಜರಿಯಾಗಿದೆ ಕರಾವಳಿಯ ಕಂಬಳ..!

ಸಿಲಿಕಾನ್ ಸಿಟಿಯಲ್ಲಿ ಕೋಣಗಳ ಮೇಳ! ಭರ್ಜರಿಯಾಗಿದೆ ಕರಾವಳಿಯ ಕಂಬಳ..!

Published : Nov 26, 2023, 09:10 AM IST

ದೊಡ್ಡ ಕೆಸರು ಗದ್ದೆ. ಅಲ್ಲಿ ಕೋಣಗಳ ಭರ್ಜರಿ ಓಟ. ಕೋಣದ ಓಟಕ್ಕೆ ಆಳೆತ್ತರಕ್ಕೆ ಹಾರೋ ಕೆಸರು. ಅಲ್ಲಿದ್ದವರೆಲ್ಲಾ ಈ ಕೋಣದ ಕಂಬಳ ನೋಡಿ ಒಂದು ಕ್ಷಣ ಥ್ರಿಲ್ ಆಗಿದ್ರು. ಶಿಳ್ಳೆ ಚಪ್ಪಾಳೆ ಹೊಡೆದು ಕೋಣಗಳಿಗೆ ಫುಲ್ ಝೋಶ್ ತುಂಬುತ್ತಿದ್ರು. 
 

ಕಂಬಳ ಅಂದ್ರೆ ನೆನಪಾಗೋದು ಕರಾವಳಿಯ ಮಂಗಳೂರು, ಉಡುಪಿ. ಆದ್ರೆ ಇನ್ಮುಂದೆ ಕಂಬಳ(Kambala) ಅಂದ್ರೆ ಕಣ್ಮುಂದೆ ಬರೋದು ನಮ್ಮ ಬೆಂಗಳೂರು. ಕಾರಾವಳಿಯ ಆಚರಣೆ ಕಂಬಳ ಫಸ್ಟ್ ದಿ ಫಸ್ಟ್ ಟೈಂ ಬೆಂಗಳೂರಿನಲ್ಲಿ(Bengaluru) ನಡೆದಿದೆ. 150 ಜೋಡಿ ಕೋಣಗಳು ಕೆಸರುಗದ್ದೆಯಲ್ಲಿ ನಾನಾ ನೀನಾ ಅಂತ ಸ್ಪರ್ಧೆಗೆ ಬಿದಿದ್ವು. ಈ ಕೋಣಗಳ ಓಟ ನೋಡೋಕೆ ಸಿಕ್ಕಾಪಟ್ಟೆ ತ್ರಿಲ್ ಆಗ್ತಿತ್ತು. ಕರಾವಳಿಗರ ಕಂಬಳ ಕಿಕ್ ಕೊಡೋಕೆ ಕಾರಣ ರಿಷಬ್ ಶೆಟ್ಟಿಯ(Rishabh Shetty) ಕಾಂತಾರ ಸಿನಿಮಾ. ಕಾಂತರದಲ್ಲಿ(Kantara) ಕಾಡುಬೆಟ್ಟದ ಶಿವ ಕಂಬಳ ಪಟುವಾಗಿದ್ದ ಶೆಟ್ರು ಕಂಬಳ ಮಾಡಿದ್ದನ್ನ ನೋಡಿ ವಾವ್ಹ್ ಅಂದಿದ್ರು. ಅಲ್ಲಿಂದ ಈ ಕಂಬಳದ ಕ್ರೇಜ್ ಹೆಚ್ಚಾಯ್ತು. ಇದರ ಫಲ ಕಂಬಳ ಈಗ ಬೆಂಗಳೂರಿಗೆ ಶಿಫ್ಟ್ ಆಗಿದೆ. ಕಂಬಳ ಕರಾವಳಿಗರ ಕ್ರೇಜ್. ಈ ಕ್ರೇಜ್ ಬೆಂಗಳೂರಿಗೆ ಶಿಫ್ಟ್ ಆಗ್ಬೇಕು ಅಂದ್ರೆ ಅದಕ್ಕೆ ಸೆಲೆಬ್ರೆಟಿಗಳ ಸಪೋರ್ಟ್ ಕೂಡ ಬೇಕು. ಈ ಕಂಬಳಕ್ಕೆ ಚಿತ್ರರಂಗದ ದಿಗ್ಗಜ ನಟ ನಟಿಯರು ಬರ್ತಾರೆ ಅಂತ ಕಂಬಳ ಆಯೋಜಕ ಅಶೋಕ್ ರೈ(Ashok Rai) ಹೇಳಿದ್ರು. ಆದ್ರೆ ಕೋಣಗಳ ಓಟದ ಮಧ್ಯೆ ನಮ್ಮ ಸ್ಟಾರ್ಸ್ಗಳನ್ನೂ ಕಣ್ತುಂಬಿಕೊಳ್ಳೋಣ ಅಂತ ಬಂದ ಹಲವರಿಗೆ ನಿರಾಸೆಯಾಗಿತ್ತು. ಎಷ್ಟೇ ಝೂಮ್ ಹಾಕಿದ್ರು ಕಂಬಳದಲ್ಲಿ ದೀಪಿಕಾ, ಐಶ್ವರ್ಯ, ಅನುಷ್ಕಾ ಶೆಟ್ಟಿ, ಶಿಲ್ಪಾ ಶೆಟ್ಟಿ, ಶ್ರೀನಿಧಿ ಶೆಟ್ಟಿ, ಕೆ ಎಲ್ ರಾಹುಲ್  ರಜನಿಕಾಂತ್ ಯಾರು ಕಾಣ್ಲೇ ಇಲ್ಲ.. ಅಶ್ವೀನಿ ಪುನೀತ್ ರಾಜ್ಕುಮಾರ್ ಕಂಬಳ ಉದ್ಘಾಟಿಸಿದ್ರು.ಎರಡು ದಿನ ನಡೆಯೋ ಕಂಬಳದಲ್ಲಿ ಬರೀ ಕೋ ಣಗಳು ಬಿಟ್ರೆ ಯಾವೊಬ್ಬ ಸ್ಟಾರ್ಸ್ಗಳು ಕಣ್ಣಿಗೆ ಬೀಳಲಿಲ್ಲ. ಆದ್ರೆ ನಾಳೆಯೂ ಕೋಣಗಳ ಓಟ ಇರೋದ್ರಿಂದ ಕೆಲ ಸ್ಟಾರ್ಗಳು ಬಂದ್ರು ಆಶ್ಚರ್ಯವೇನಿಲ್ಲ.

ಇದನ್ನೂ ವೀಕ್ಷಿಸಿ:  ಕೆಮಿಕಲ್ ಎಂಜಿನಿಯರಿಂಗ್ ಬಿಟ್ಟು ಯೋಧರಾಗಿದ್ದು ಯಾಕೆ..? 23 ಕಿಮೀ ಅಂತಿಮಯಾತ್ರೆ..ಎಲ್ಲೆಲ್ಲೂ ಜನಸಾಗರ..!

27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
15:11ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
45:33ಕನ್ನಡಪ್ರಭ- ಸುವರ್ಣನ್ಯೂಸ್‌ ವನ್ಯಜೀವಿ ಸಂರಕ್ಷಣಾ ಅಭಿಯಾನ: ಮಲೆ ಮಹದೇಶ್ವರ ಕಾಡಲ್ಲಿ ರಾಯಭಾರಿ ಗಣೇಶ್!
26:32ದೆಹಲಿ ಗಲಭೆ ಸಂಚುಕೋರನ ಪರ ಬೆಂಗಳೂರಲ್ಲಿ ವಿಚಾರ ಸಂಕಿರಣ: ಮಾಸ್ಟರ್​ ಮೈಂಡ್​ ಹೆಸರಲ್ಲಿ ಕಾರ್ಯಕ್ರಮ ಬೇಕಿತ್ತಾ?
25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!
Read more