ಕೋಟ್ಯಾಂತರ ರೂ. ಸ್ಮಾರ್ಟ್ ಸಿಟಿ ಯೋಜನೆ ಕಟ್ಟಡ: ಕಾಂಗ್ರೆಸ್-ಬಿಜೆಪಿ ಪಾಲಿಟಿಕ್ಸ್‌ಗೆ ಬಲಿಯಾದ ಕದ್ರಿ ಫುಡ್ ಕೋರ್ಟ್

ಕೋಟ್ಯಾಂತರ ರೂ. ಸ್ಮಾರ್ಟ್ ಸಿಟಿ ಯೋಜನೆ ಕಟ್ಟಡ: ಕಾಂಗ್ರೆಸ್-ಬಿಜೆಪಿ ಪಾಲಿಟಿಕ್ಸ್‌ಗೆ ಬಲಿಯಾದ ಕದ್ರಿ ಫುಡ್ ಕೋರ್ಟ್

Published : Nov 04, 2023, 10:28 AM IST

ಸರ್ಕಾರ ಬದಲಾದಾಗ ದೊಡ್ಡ ದೊಡ್ಡ ನಾಯಕರು ಸಚಿವ ಸ್ಥಾನ, ನಿಗಮ ಮಂಡಳಿಗಳಲ್ಲಿ ಸ್ಥಾನ ಪಡೆಯೋಕೆ ಕಸರತ್ತು ಮಾಡ್ತಾರೆ. ಕಾರ್ಯಕರ್ತರು ನಾಯಕರ ಕೈ ಕಾಲು ಹಿಡಿದು ಸಣ್ಣಪುಟ್ಟ ಕೆಲಸ ಮಾಡಿಸೋದು ಸಾಮಾನ್ಯ. ಆದರೆ ಮಂಗಳೂರಿನ ಸ್ಮಾರ್ಟ್ ಸಿಟಿ ವ್ಯಾಪಾರಿ ಮಳಿಗೆಗಳ ಹಂಚಿಕೆಯಲ್ಲೂ ರಾಜಕೀಯ ಹಸ್ತಕ್ಷೇಪದ ಆರೋಪ ಕೇಳಿ ಬಂದಿದೆ. ಕಾಂಗ್ರೆಸ್ ನಾಯಕರು ತಮ್ಮ ಆಪ್ತರಿಗೆ ಮಳಿಗೆ ಕೊಡಿಸಲು ಯತ್ನಿಸ್ತಿದಾರೆ ಅಂತ ಬಿಜೆಪಿ ಆರೋಪಿಸಿದೆ. 
 

ಸ್ಮಾರ್ಟ್ ಸಿಟಿ ಯೋಜನೆ(Smart City Project) ಅದೆಷ್ಟೋ ನಗರಗಳ ಅಭಿವೃದ್ಧಿಯ ದಿಕ್ಕನ್ನೇ ಬದಲಿಸಿದ ಯೋಜನೆ ಇದೆ. ಕಡಲ ತಡಿ ಮಂಗಳೂರು(Mangalore) ಕೂಡ ಹಲವು ವಿಚಾರಗಳಲ್ಲಿ ಸ್ಮಾರ್ಟ್ ಟಚ್ ಪಡೆದಿದೆ. ರಸ್ತೆ, ಪಾರ್ಕ್ ಸೇರಿದಂತೆ ಅನೇಕ ಜಾಗಗಳು ಅಭಿವೃದ್ಧಿಯಾಗಿದೆ. ಆದರೆ ಕದ್ರಿ ಪಾರ್ಕ್ ರಸ್ತೆಯ ಫುಡ್ ಕೋರ್ಟ್(Kadri Food Court) ಮಾತ್ರ ಇದಕ್ಕೆಲ್ಲಾ ವ್ಯತಿರಿಕ್ತ. 2023ರ ಮಾರ್ಚ್‌ನಲ್ಲಿ ಬಿಜೆಪಿ(BJP) ಸರ್ಕಾರ ಈ ಫುಡ್‌ ಕೋರ್ಟ್‌ನನ್ನು ಉದ್ಘಾಟಿಸಿತ್ತು. 12 ಕೋಟಿ ವೆಚ್ಚದಲ್ಲಿ 38 ಸ್ಮಾರ್ಟ್ ಸಿಟಿ ಫುಡ್ ಕೋರ್ಟ್ ಕೂಡ ಸಿದ್ಧಾಗಿತ್ತು. ಆದರೆ ಏಳೆಂಟು ತಿಂಗಳು ಕಳೆದರೂ ಇನ್ನೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ಉದ್ಯಮಿಯೊಬ್ಬರು ಟೆಂಡರ್ ಮೂಲಕ ಪಡೆದು ವ್ಯಾಪಾರ ಆರಂಭಿಸಲು ಸಿದ್ದತೆ ನಡೆಸಿದ್ದರು. ಆದರೆ ಅಷ್ಟೋತ್ತಿಗೆ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಕಾರಣಕ್ಕೆ ಎಲ್ಲವೂ ಸ್ಥಗಿತವಾಗಿತ್ತು. ಈಗ ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಹಳೆಯ ಟೆಂಡರ್ ರದ್ದುಗೊಳಿಸಿದ ಆರೋಪ ಕೇಳಿ ಬಂದಿದೆ. ಸದ್ಯ ಕಾಂಗ್ರೆಸ್ ನಾಯಕರ ಆಪ್ತರು ಕೆಲವೊಂದು ದಾಖಲೆ ತಯಾರಿಸಿ ಮಳಿಗೆ ಪಡೆಯಲು ಸಿದ್ದತೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇನ್ನು ಕದ್ರಿ ಪಾರ್ಕ್‌ ಉದ್ಯಾನವನ ರಸ್ತೆ ಮತ್ತು ಹೊರ ಆವರಣದ ಸಮಗ್ರ ಅಭಿವೃದ್ಧಿ ಸುಮಾರು 16 ಕೋ.ಟಿ. ರೂ. ವೆಚ್ಚದಲ್ಲಿ ನಡೆದಿದೆ. 850 ಮೀ. ಉದ್ದದ ಕಾಂಕೀಟ್‌ ರಸ್ತೆ ಎರಡೂ ಬದಿಗಳಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಫುಡ್ ಕೋರ್ಟ್ ಆರಂಭಕ್ಕೆ ಮಾತ್ರ ಉದ್ಘಾಟನೆ ಭಾಗ್ಯ ಬಂದಿಲ್ಲ. ಟೆಂಡರ್ ವಿಚಾರವೇ ಇಷ್ಟೆಲ್ಲಾ ಗೊಂದಲಕ್ಕೆ ಕಾರಣ ಎನ್ನುತ್ತಿದ್ದಾರೆ  ಸ್ಥಳೀಯರು. 

ಇದನ್ನೂ ವೀಕ್ಷಿಸಿ:  ದಸರಾದಲ್ಲಿ ಭಾಗಿಯಾಗಿದ್ದ ಕಲಾವಿದರ ಅಸಮಾಧಾನ: ಸ್ಪರ್ಧೆಯಲ್ಲಿ ಗೆದ್ರೂ ಸಿಗದ ಬಹುಮಾನದ ಮೊತ್ತ !

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more