ಕೋಟ್ಯಾಂತರ ರೂ. ಸ್ಮಾರ್ಟ್ ಸಿಟಿ ಯೋಜನೆ ಕಟ್ಟಡ: ಕಾಂಗ್ರೆಸ್-ಬಿಜೆಪಿ ಪಾಲಿಟಿಕ್ಸ್‌ಗೆ ಬಲಿಯಾದ ಕದ್ರಿ ಫುಡ್ ಕೋರ್ಟ್

ಕೋಟ್ಯಾಂತರ ರೂ. ಸ್ಮಾರ್ಟ್ ಸಿಟಿ ಯೋಜನೆ ಕಟ್ಟಡ: ಕಾಂಗ್ರೆಸ್-ಬಿಜೆಪಿ ಪಾಲಿಟಿಕ್ಸ್‌ಗೆ ಬಲಿಯಾದ ಕದ್ರಿ ಫುಡ್ ಕೋರ್ಟ್

Published : Nov 04, 2023, 10:28 AM IST

ಸರ್ಕಾರ ಬದಲಾದಾಗ ದೊಡ್ಡ ದೊಡ್ಡ ನಾಯಕರು ಸಚಿವ ಸ್ಥಾನ, ನಿಗಮ ಮಂಡಳಿಗಳಲ್ಲಿ ಸ್ಥಾನ ಪಡೆಯೋಕೆ ಕಸರತ್ತು ಮಾಡ್ತಾರೆ. ಕಾರ್ಯಕರ್ತರು ನಾಯಕರ ಕೈ ಕಾಲು ಹಿಡಿದು ಸಣ್ಣಪುಟ್ಟ ಕೆಲಸ ಮಾಡಿಸೋದು ಸಾಮಾನ್ಯ. ಆದರೆ ಮಂಗಳೂರಿನ ಸ್ಮಾರ್ಟ್ ಸಿಟಿ ವ್ಯಾಪಾರಿ ಮಳಿಗೆಗಳ ಹಂಚಿಕೆಯಲ್ಲೂ ರಾಜಕೀಯ ಹಸ್ತಕ್ಷೇಪದ ಆರೋಪ ಕೇಳಿ ಬಂದಿದೆ. ಕಾಂಗ್ರೆಸ್ ನಾಯಕರು ತಮ್ಮ ಆಪ್ತರಿಗೆ ಮಳಿಗೆ ಕೊಡಿಸಲು ಯತ್ನಿಸ್ತಿದಾರೆ ಅಂತ ಬಿಜೆಪಿ ಆರೋಪಿಸಿದೆ. 
 

ಸ್ಮಾರ್ಟ್ ಸಿಟಿ ಯೋಜನೆ(Smart City Project) ಅದೆಷ್ಟೋ ನಗರಗಳ ಅಭಿವೃದ್ಧಿಯ ದಿಕ್ಕನ್ನೇ ಬದಲಿಸಿದ ಯೋಜನೆ ಇದೆ. ಕಡಲ ತಡಿ ಮಂಗಳೂರು(Mangalore) ಕೂಡ ಹಲವು ವಿಚಾರಗಳಲ್ಲಿ ಸ್ಮಾರ್ಟ್ ಟಚ್ ಪಡೆದಿದೆ. ರಸ್ತೆ, ಪಾರ್ಕ್ ಸೇರಿದಂತೆ ಅನೇಕ ಜಾಗಗಳು ಅಭಿವೃದ್ಧಿಯಾಗಿದೆ. ಆದರೆ ಕದ್ರಿ ಪಾರ್ಕ್ ರಸ್ತೆಯ ಫುಡ್ ಕೋರ್ಟ್(Kadri Food Court) ಮಾತ್ರ ಇದಕ್ಕೆಲ್ಲಾ ವ್ಯತಿರಿಕ್ತ. 2023ರ ಮಾರ್ಚ್‌ನಲ್ಲಿ ಬಿಜೆಪಿ(BJP) ಸರ್ಕಾರ ಈ ಫುಡ್‌ ಕೋರ್ಟ್‌ನನ್ನು ಉದ್ಘಾಟಿಸಿತ್ತು. 12 ಕೋಟಿ ವೆಚ್ಚದಲ್ಲಿ 38 ಸ್ಮಾರ್ಟ್ ಸಿಟಿ ಫುಡ್ ಕೋರ್ಟ್ ಕೂಡ ಸಿದ್ಧಾಗಿತ್ತು. ಆದರೆ ಏಳೆಂಟು ತಿಂಗಳು ಕಳೆದರೂ ಇನ್ನೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ಉದ್ಯಮಿಯೊಬ್ಬರು ಟೆಂಡರ್ ಮೂಲಕ ಪಡೆದು ವ್ಯಾಪಾರ ಆರಂಭಿಸಲು ಸಿದ್ದತೆ ನಡೆಸಿದ್ದರು. ಆದರೆ ಅಷ್ಟೋತ್ತಿಗೆ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಕಾರಣಕ್ಕೆ ಎಲ್ಲವೂ ಸ್ಥಗಿತವಾಗಿತ್ತು. ಈಗ ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಹಳೆಯ ಟೆಂಡರ್ ರದ್ದುಗೊಳಿಸಿದ ಆರೋಪ ಕೇಳಿ ಬಂದಿದೆ. ಸದ್ಯ ಕಾಂಗ್ರೆಸ್ ನಾಯಕರ ಆಪ್ತರು ಕೆಲವೊಂದು ದಾಖಲೆ ತಯಾರಿಸಿ ಮಳಿಗೆ ಪಡೆಯಲು ಸಿದ್ದತೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇನ್ನು ಕದ್ರಿ ಪಾರ್ಕ್‌ ಉದ್ಯಾನವನ ರಸ್ತೆ ಮತ್ತು ಹೊರ ಆವರಣದ ಸಮಗ್ರ ಅಭಿವೃದ್ಧಿ ಸುಮಾರು 16 ಕೋ.ಟಿ. ರೂ. ವೆಚ್ಚದಲ್ಲಿ ನಡೆದಿದೆ. 850 ಮೀ. ಉದ್ದದ ಕಾಂಕೀಟ್‌ ರಸ್ತೆ ಎರಡೂ ಬದಿಗಳಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಫುಡ್ ಕೋರ್ಟ್ ಆರಂಭಕ್ಕೆ ಮಾತ್ರ ಉದ್ಘಾಟನೆ ಭಾಗ್ಯ ಬಂದಿಲ್ಲ. ಟೆಂಡರ್ ವಿಚಾರವೇ ಇಷ್ಟೆಲ್ಲಾ ಗೊಂದಲಕ್ಕೆ ಕಾರಣ ಎನ್ನುತ್ತಿದ್ದಾರೆ  ಸ್ಥಳೀಯರು. 

ಇದನ್ನೂ ವೀಕ್ಷಿಸಿ:  ದಸರಾದಲ್ಲಿ ಭಾಗಿಯಾಗಿದ್ದ ಕಲಾವಿದರ ಅಸಮಾಧಾನ: ಸ್ಪರ್ಧೆಯಲ್ಲಿ ಗೆದ್ರೂ ಸಿಗದ ಬಹುಮಾನದ ಮೊತ್ತ !

22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
23:26Mysuru Marriage home Tragedy: ಮದುವೆ ಮನೆಯಲ್ಲಿ ಮೂರು ಚಟ್ಟ, ರಾಕ್ಷಸ ಉಲ್ಲಾಸ್ ಗೌಡನ ಕ್ರೌರ್ಯದ ಕಥೆ!
23:26FIR video: ಭೀಮಾತೀರದ ಹಂತಕ ಅಪ್ಪುಗೌಡ ಇಬ್ಬರ ಹತ್ಯೆಗೆ ಸ್ಕೆಚ್ ಹಾಕಿದ್ದ; ಆದ್ರೆ 6 ಜನರ ಕೊಲೆ ಮಾಡಿದ್ದೇಕೆ ಹಂತಕರು?
23:22ಕೇರಳದಿಂದ ಬಂದಿತ್ತು 20 ಲಕ್ಷ, ಪೊಲೀಸರಿಗೆ ಸಿಕ್ಕಿತ್ತು ಸುಳಿವು! ಖೆಡ್ಡಾಗೆ ಬಿದ್ದಿದ್ಹೇಗೆ 'ಖಾಕಿ' ಗ್ಯಾಂಗ್?
24:322 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಕೊಲೆ: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚಿ ಸಿಕ್ಕಿಬಿದ್ದ ಹೆಂಡತಿ!
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more