ಜೋಗಿ ಮಠದಲ್ಲಿ ಜೋರಾಯ್ತು ‘ವಿಗ್ರಹ’ ವಿವಾದ: ಪೀಠಾಧಿಪತಿ ವಿರುದ್ಧವೇ ತಿರುಗಿಬಿದ್ದ ಸಮುದಾಯ !

ಜೋಗಿ ಮಠದಲ್ಲಿ ಜೋರಾಯ್ತು ‘ವಿಗ್ರಹ’ ವಿವಾದ: ಪೀಠಾಧಿಪತಿ ವಿರುದ್ಧವೇ ತಿರುಗಿಬಿದ್ದ ಸಮುದಾಯ !

Published : Aug 29, 2023, 11:28 AM IST

ಮಂಗಳೂರಿನ ಕದ್ರಿಯ ಜೋಗಿ ಮಠಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ಮಠಕ್ಕೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ರೇ ಪೀಠಾಧಿಪತಿ ಆಯ್ಕೆ ಮಾಡ್ತಾರೆ. ಆದ್ರೆ ಇಂತಹ ಮಠದಲ್ಲಿ ವಿವಾದ ಭುಗಿಲೆದಿದ್ದು, ಸಮುದಾಯದ ಮಂದಿಯೇ ತಿರುಗಿಬಿದ್ದಿದ್ದಾರೆ.
 


ಮಂಗಳೂರಿನ ಕದ್ರಿ ಗುಡ್ಡದ ತುದಿಯಲ್ಲಿರೋ ಜೋಗಿ ಮಠ. ಈ ಮಠಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇದೀಗ ಈ ಮಠದಲ್ಲಿ ವಿವಾದವೊಂದು ಭುಗಿಲೆದ್ದಿದ್ದು..ಸಮಾಜದ ಭಕ್ತರೇ ತಿರುಗಿಬಿದ್ದಿದ್ದಾರೆ. ಜೋಗಿ ಮಠದಲ್ಲಿ(Jogi math) ದೇವರ ಮೂಲ ವಿಗ್ರಹವನ್ನೇ ಪೀಠಾಧಿಪತಿ ನಿರ್ಮಲ್ ನಾಥ್ ಜೀ (Nirmal Nath Ji) ಕಿತ್ತುಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ದೇವಸ್ಥಾನದ ಜೀರ್ಣೋದ್ಧಾರದ ನೆಪದಲ್ಲಿ ಎರಡು ಸಾವಿರ ವರ್ಷಗಳ ಹಳೆಯ ಕಾಲಭೈರವ ಮೂರ್ತಿ ಹೊರಗಿಟ್ಟು, ರಾಜಸ್ಥಾನದ ಮಾರ್ವಾಡಿಗಳು ತಂದ ಸಣ್ಣ ಹೊಸ ಕಾಲಭೈರವ ಮೂರ್ತಿ(Kalabhairava Murthy) ಪ್ರತಿಷ್ಠಾಪನೆ ಮಾಡಿದ್ದಾರಂತೆ. ಹೀಗಾಗಿ ನಾಥ ಪರಂಪರೆಯ ಜೋಗಿ ಸಮುದಾಯ ಆಕ್ರೋಶ ಹೊರಹಾಕಿದೆ..ಅಲ್ದೆ ಹಳೇ ವಿಗ್ರಹ ಪ್ರತಿಷ್ಠಾಪಿಸದಿದ್ರೆ ಉಗ್ರ ಹೋರಾಟ ಎಚ್ಚರಿಕೆ ಕೊಟ್ಟಿದ್ದಾರೆ. ಈ ಮಠಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಉಸ್ತುವಾರಿ. ಅಷ್ಟೇ ಅಲ್ಲ ಗೋರಖ್‌ಪುರ ಮಠಕ್ಕೂ ಈ ಜೋಗಿ ಮಠಕ್ಕೂ ಅವಿನಾಭಾವ ಸಂಬಂಧವಿದೆ. 12 ವರ್ಷಕ್ಕೊಮ್ಮೆ ಯೋಗಿ ಆದಿತ್ಯ ನಾಥ್‌ ಜೋಗಿ ಮಠಕ್ಕೆ ಮಠಾಧಿಪತಿ ಆಯ್ಕೆ ಮಾಡ್ತಾರೆ. 2016ರ ಮಾರ್ಚ್ 7ರಂದು ನೂತನ ಪೀಠಾಧಿಪತಿ ನಿರ್ಮಲ ನಾಥಜೀಗೆ ಪಟ್ಟಾಭಿಷೇಕ ಮಾಡಿದ್ರು. ಮಠಕ್ಕೆ ಯಘಿ ಆದಿತ್ಯನಾಥ್ ಹಲವು ಬಾರೀ ಭೇಟಿ ನೀಡಿದ್ರು..ಆದ್ರೆ ಈ ಮಠದಲ್ಲಿ ಜೋಗಿ ಸಮುದಾಯವನ್ನ ದೂರವಿಟ್ಟು ಮಾರ್ವಾಡಿಗಳಿಗೆ ಮಣೆ ಹಾಕಿದ್ದರೆ ಅಂತಾ ಆರೋಪ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಸಂಸ್ಕಾರವಿಲ್ಲದ ವಿದ್ಯೆ..ಅಪ್ಪ ಅಗಲಿದರೂ ಸಂಬಂಧವೇ ಇಲ್ಲ ಎಂದ ಮಕ್ಕಳು !

03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
Read more