ಜೋಗಿ ಮಠದಲ್ಲಿ ಜೋರಾಯ್ತು ‘ವಿಗ್ರಹ’ ವಿವಾದ: ಪೀಠಾಧಿಪತಿ ವಿರುದ್ಧವೇ ತಿರುಗಿಬಿದ್ದ ಸಮುದಾಯ !

ಜೋಗಿ ಮಠದಲ್ಲಿ ಜೋರಾಯ್ತು ‘ವಿಗ್ರಹ’ ವಿವಾದ: ಪೀಠಾಧಿಪತಿ ವಿರುದ್ಧವೇ ತಿರುಗಿಬಿದ್ದ ಸಮುದಾಯ !

Published : Aug 29, 2023, 11:28 AM IST

ಮಂಗಳೂರಿನ ಕದ್ರಿಯ ಜೋಗಿ ಮಠಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ಮಠಕ್ಕೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ರೇ ಪೀಠಾಧಿಪತಿ ಆಯ್ಕೆ ಮಾಡ್ತಾರೆ. ಆದ್ರೆ ಇಂತಹ ಮಠದಲ್ಲಿ ವಿವಾದ ಭುಗಿಲೆದಿದ್ದು, ಸಮುದಾಯದ ಮಂದಿಯೇ ತಿರುಗಿಬಿದ್ದಿದ್ದಾರೆ.
 


ಮಂಗಳೂರಿನ ಕದ್ರಿ ಗುಡ್ಡದ ತುದಿಯಲ್ಲಿರೋ ಜೋಗಿ ಮಠ. ಈ ಮಠಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇದೀಗ ಈ ಮಠದಲ್ಲಿ ವಿವಾದವೊಂದು ಭುಗಿಲೆದ್ದಿದ್ದು..ಸಮಾಜದ ಭಕ್ತರೇ ತಿರುಗಿಬಿದ್ದಿದ್ದಾರೆ. ಜೋಗಿ ಮಠದಲ್ಲಿ(Jogi math) ದೇವರ ಮೂಲ ವಿಗ್ರಹವನ್ನೇ ಪೀಠಾಧಿಪತಿ ನಿರ್ಮಲ್ ನಾಥ್ ಜೀ (Nirmal Nath Ji) ಕಿತ್ತುಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ದೇವಸ್ಥಾನದ ಜೀರ್ಣೋದ್ಧಾರದ ನೆಪದಲ್ಲಿ ಎರಡು ಸಾವಿರ ವರ್ಷಗಳ ಹಳೆಯ ಕಾಲಭೈರವ ಮೂರ್ತಿ ಹೊರಗಿಟ್ಟು, ರಾಜಸ್ಥಾನದ ಮಾರ್ವಾಡಿಗಳು ತಂದ ಸಣ್ಣ ಹೊಸ ಕಾಲಭೈರವ ಮೂರ್ತಿ(Kalabhairava Murthy) ಪ್ರತಿಷ್ಠಾಪನೆ ಮಾಡಿದ್ದಾರಂತೆ. ಹೀಗಾಗಿ ನಾಥ ಪರಂಪರೆಯ ಜೋಗಿ ಸಮುದಾಯ ಆಕ್ರೋಶ ಹೊರಹಾಕಿದೆ..ಅಲ್ದೆ ಹಳೇ ವಿಗ್ರಹ ಪ್ರತಿಷ್ಠಾಪಿಸದಿದ್ರೆ ಉಗ್ರ ಹೋರಾಟ ಎಚ್ಚರಿಕೆ ಕೊಟ್ಟಿದ್ದಾರೆ. ಈ ಮಠಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಉಸ್ತುವಾರಿ. ಅಷ್ಟೇ ಅಲ್ಲ ಗೋರಖ್‌ಪುರ ಮಠಕ್ಕೂ ಈ ಜೋಗಿ ಮಠಕ್ಕೂ ಅವಿನಾಭಾವ ಸಂಬಂಧವಿದೆ. 12 ವರ್ಷಕ್ಕೊಮ್ಮೆ ಯೋಗಿ ಆದಿತ್ಯ ನಾಥ್‌ ಜೋಗಿ ಮಠಕ್ಕೆ ಮಠಾಧಿಪತಿ ಆಯ್ಕೆ ಮಾಡ್ತಾರೆ. 2016ರ ಮಾರ್ಚ್ 7ರಂದು ನೂತನ ಪೀಠಾಧಿಪತಿ ನಿರ್ಮಲ ನಾಥಜೀಗೆ ಪಟ್ಟಾಭಿಷೇಕ ಮಾಡಿದ್ರು. ಮಠಕ್ಕೆ ಯಘಿ ಆದಿತ್ಯನಾಥ್ ಹಲವು ಬಾರೀ ಭೇಟಿ ನೀಡಿದ್ರು..ಆದ್ರೆ ಈ ಮಠದಲ್ಲಿ ಜೋಗಿ ಸಮುದಾಯವನ್ನ ದೂರವಿಟ್ಟು ಮಾರ್ವಾಡಿಗಳಿಗೆ ಮಣೆ ಹಾಕಿದ್ದರೆ ಅಂತಾ ಆರೋಪ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಸಂಸ್ಕಾರವಿಲ್ಲದ ವಿದ್ಯೆ..ಅಪ್ಪ ಅಗಲಿದರೂ ಸಂಬಂಧವೇ ಇಲ್ಲ ಎಂದ ಮಕ್ಕಳು !

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more