ಯಾದಗಿರಿಯಲ್ಲಿ ಭಾರೀ ಮಳೆ: ಗುರುಸಣಗಿ ಬ್ಯಾರೇಜ್‌ನ 4 ಗೋಡೆಗಳು ಜಖಂ

Sep 21, 2020, 9:19 AM IST

ಬೆಂಗಳೂರು (ಸೆ. 21):  ಯಾದಗಿರಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಗುರುಸಣಗಿ ಬ್ಯಾರೇಜ್‌ಗೆ ಅಳವಡಿಸಿರುವ 4 ಗೋಡೆಗಳಿಗೆ ಹಾನಿಯಾಗಿದೆ. ಕಳೆದ ವರ್ಷವಷ್ಟೇ ಈ ಗೋಡೆಗಳನ್ನು ನಿರ್ಮಿಸಲಾಗಿತ್ತು. ಅದೀಗ ಜಖಂ ಆಗಿದೆ. 

ಯಾದಗಿರಿ ಮಾತ್ರವಲ್ಲ ರಾಜ್ಯದ ಬಹುತೇಕ ಕಡೆ ಇದೇ ರೀತಿ ಅವಾಂತರಗಳಾಗಿವೆ. ಎಲ್ಲಾ ಕಡೆ ಭಾರೀ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಂಗಾರು ಅವಧಿಯಲ್ಲಿ ದೇಶದಲ್ಲಿಯೇ ಅತ್ಯಧಿಕ ಮಳೆಯಾಗುತ್ತಿದೆ. ಜೂನ್ 1 ರಿಂದ ಸೆ. 20 ರವರೆಗೆ ವಾಡಿಕೆಯ 791 ಮಿಮಿ ಬದಲು 911 ಮಿಮಿ ಮಳೆ ಸುರಿದಿದೆ. ಅಂದರೆ ಶೇ. 15 ರಷ್ಟು ಮಳೆ ಬಿದ್ದಿದೆ. 

ಮುಂದಿನ ವಾರ ಭಾರೀ ಮಳೆ ಸಾಧ್ಯತೆ: ರೆಡ್ ಅಲರ್ಟ್ ಘೋಷಣೆ