ಯಾದಗಿರಿ: ಭಾರೀ ಮಳೆ, ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಣೆ

Sep 27, 2020, 10:23 AM IST

ಯಾದಗಿರಿ(ಸೆ.27): ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಜಿಲ್ಲೆಯ ನದಿ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯ ಗುರುಮಠಕಲ್ ತಾಲೂಕಿನ ಎಲ್ಲೇರಿ ಗ್ರಾಮದಲ್ಲಿ ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನೊಬ್ಬನನ್ನು ಸ್ಥಳೀಯರು ರಕ್ಷಿಸಿದ್ದಾರೆ. 

ನಂದಿಬೆಟ್ಟಕ್ಕೆ ಹೋದೋರು ಈ ಜಾಗ ಮಿಸ್ ಮಾಡದಿರಿ! ಅಚ್ಚರಿ ಪಡೋದು ಖಚಿತ

ಇನ್ನು ಈ ವೇಳೆ ಬೈಕ್ ಮೂಲಕ ಹಳ್ಳ ದಾಟಲು ಯತ್ನಿಸಿದ ಇಬ್ಬರು ಯುವಕರಲ್ಲಿ ಓರ್ವ ಯುವಕ ಬೈಕ್‌ ಸಹಿತ ನೀರಿನಲ್ಲಿ ಕೊಟ್ಟಿ ಹೋಗಿದ್ದಾನೆ.  ಸೇತುವೆ ಮೇಲೆ ನೀರಿನ ರಭಸ ಹೆಚ್ಚಾಗಿದ್ದರಿಂದ ಬೈಕ್ ಸ್ಕಿಡ್ ಆದ ಪರಿಣಾಮ ಈ ದರ್ಘಟನೆ ನಡೆದಿದೆ.