ಜೈಲಿಗೆ ಹೋಗುತ್ತಿದ್ದಂತೆ ದರ್ಶನ್‌ಗೆ ಆರೋಗ್ಯ ಕೆಟ್ಟಿದ್ದೇಕೆ..? ನಟನ ಬೇಡಿಕೆ ಒಪ್ಪದಂತೆ ಪೊಲೀಸ್ ಕೊಟ್ಟ ಕಾರಣವೇನು..?

ಜೈಲಿಗೆ ಹೋಗುತ್ತಿದ್ದಂತೆ ದರ್ಶನ್‌ಗೆ ಆರೋಗ್ಯ ಕೆಟ್ಟಿದ್ದೇಕೆ..? ನಟನ ಬೇಡಿಕೆ ಒಪ್ಪದಂತೆ ಪೊಲೀಸ್ ಕೊಟ್ಟ ಕಾರಣವೇನು..?

Published : Jul 19, 2024, 09:09 AM IST

ನಟ ದರ್ಶನ್‌ಗೆ ಅವಕಾಶ ಕೊಟ್ಟರೆ ಬೇರೆಯವರು ಕೇಳುವ ಸಾಧ್ಯತೆ
ಜೈಲಿನ ನಿಯಮಗಳ ಪ್ರಕಾರ ಆರೋಪಿ ಜೈಲಿನ ಬಟ್ಟೆ ಹಾಕಬೇಕು
ಕಾನೂನಿನ ಕಣ್ಣಿನಲ್ಲಿ ದರ್ಶನ್ ಕೂಡ ಇತರೇ ಆರೋಪಿಗಳಿಂತೆಯೇ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ(Renukaswamy murder case) ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ (Darshan) & ಗ್ಯಾಂಗ್‌ಗೆ ಮತ್ತೆ ನ್ಯಾಯಾಂಗ ಬಂಧನ (Judicial custody) ವಿಸ್ತರಣೆಯಾಗಿದೆ. ಮುಂದಿನ 14 ದಿನಗಳ ಕಾಲ, ಅಂದ್ರೆ ಆಗಸ್ಟ್ 1ರ ವರೆಗೂ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ. ಹಾಗೆನೆ ಆರೋಪಿ ದರ್ಶನ್ ಇಟ್ಟಿದ್ದ ಕೆಲ ಬೇಡಿಕೆಗಳನ್ನು ಪೊಲೀಸರು(Police) ಪ್ರಶ್ನೆ ಮಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಪವಿತ್ರಾ ಗೌಡ(Pavitra gowda) ಮತ್ತು ದರ್ಶನ್ ಸೇರಿದಂತೆ ಒಟ್ಟು ಹದಿನೇಳು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಇವರನ್ನೆಲ್ಲ ಕಳೆದ ತಿಂಗಳು 22 ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಎರಡು ಬಾರಿ ನ್ಯಾಯಾಂಗ ಬಂಧನ ವಿಸ್ತರಣೆ ನಂತರ ಇಂದು ಮತ್ತೆ ಈ ಆರೋಪಿಗಳ ನ್ಯಾಯಾಂಗ ಬಂಧನ ಮುಕ್ತಾಯಗೊಂಡಿತ್ತು. ಮತ್ತೆ ಈ 17 ಆರೋಪಿಗಳ ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಗಿದೆ. ವಿಚಾರಣೆಯ ಮುಂದಿನ ದಿನಾಂಕವನ್ನು ಆಗಸ್ಟ್ 1ನೇ ತಾರೀಕಿಗೆ ಮುಂದೂಡಲಾಗಿದೆ. ಅಂದ್ರೆ ಮತ್ತೆ 14 ದಿನಗಳ ಕಾಲ ದರ್ಶನ್ & ಗ್ಯಾಂಗ್ ಮತ್ತೆ ನ್ಯಾಯಾಂಗ ಬಂಧನದಲ್ಲೇ ಇರಲಿದ್ದಾರೆ. ದರ್ಶನ್ ಕೆಲ ದಿನಗಳ ಹಿಂದೆ ಹಲವು ಬೇಡಿಕೆಗಳನ್ನಿಟ್ಟು ಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ದರ್ಶನ್ ಈ ಹಿಂದೆ ಯಾವೆಲ್ಲ ಬೇಡಿಕೆಗಳನ್ನಿಟ್ಟುದ್ದರು ಅನ್ನೋದನ್ನು ನೋಡೋದಾದ್ರೆ, ದರ್ಶನ್‌ಗೆ  ಮನೆ ಊಟ ಬೇಕೆಂದು ಅರ್ಜಿ ಸಲ್ಲಿಸಿದ್ದರು. ಜೈಲಿನಲ್ಲಿ ಕೊಡುವ ಊಟ ದರ್ಶನ್‌ಗೆ ಇಷ್ಟವಾಗುತ್ತಿಲ್ಲವಂತೆ. ದರ್ಶನ್ ಇಲ್ಲಿಯವರೆಗೂ ಜೈಲಿನ ಊಟ ಮಾಡಿದ್ದರಿಂದಾಗಿ ಹೊಟ್ಟೆ ಕೆಟ್ಟಿದೆಯಂತೆ. ವಾಂತಿ ಭೇದಿಯಾಗುತ್ತಿದೆಯಂತೆ. ಇದರಿಂದಾಗಿ ಆರೋಗ್ಯದಲ್ಲೂ ಒಂದಿಷ್ಟು ವ್ಯತ್ಯಾಸವಾಗಿದೆಯಂತೆ. ಹೀಗಾಗಿ ಜೈಲುಟ ಮಾಡಿ ತುಂಬಾನೇ ತೊಂದರೆ ಅನುಭವಿಸುತ್ತಿರುವ ದರ್ಶನ್ ಜೈಲಿನಲ್ಲಿ ಮನೆ ಊಟಕ್ಕೆ ಅವಕಾಶ ಕೋರಿದ್ದರು. ಆದ್ರೆ ದರ್ಶನ್ ಇಟ್ಟ ಈ ಬೇಡಿಕೆಯನ್ನು ಸರ್ಕಾರದ ಪರ ವಕೀಲರು ಮನೆಯೂಟ ಕೊಡ ಕೂಡದೆಂದು ವಾದ ಮಾಡಿದ್ದಾರೆ. 

ಇದನ್ನೂ ವೀಕ್ಷಿಸಿ:  ಸಿಎಂ ಅನುಭವಿಸಿದ್ದ ಪಂಚೆ ಅವಮಾನದ ಆ ಕಥೆ ಏನು? ಪಂಚೆ ಹಾಕೋರೆಲ್ಲಾ ಬಡವರಲ್ಲ, ಪ್ಯಾಂಟ್ ಹಾಕೋರೆಲ್ಲಾ ಶ್ರೀಮಂತರಲ್ಲ..!

29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?