ಗಾಯಿತ್ರಿ ಸಿದ್ದೇಶ್ವರ್ ಸೋಲಿಗೆ ಲಗಾನ್ ಟೀಮ್ ನೇರ ಕಾರಣ: ರೇಣುಕಾಚಾರ್ಯ ವಿರುದ್ಧ ಸಿದ್ದೇಶ್ವರ್ ಟೀಮ್ ವಾಗ್ದಾಳಿ

ಗಾಯಿತ್ರಿ ಸಿದ್ದೇಶ್ವರ್ ಸೋಲಿಗೆ ಲಗಾನ್ ಟೀಮ್ ನೇರ ಕಾರಣ: ರೇಣುಕಾಚಾರ್ಯ ವಿರುದ್ಧ ಸಿದ್ದೇಶ್ವರ್ ಟೀಮ್ ವಾಗ್ದಾಳಿ

Published : Jul 21, 2024, 03:54 PM IST

ರೇಣುಕಾಚಾರ್ಯ ಪ್ರಚಾರ ಪ್ರಿಯ, ಟಿಆರ್‌ಪಿ ರಾಜಕಾರಣಿ. ಮೊಳಕಾಲೂದ್ಧದ ನೀರಲ್ಲಿ ಬೊಟ್ ಓಡಿಸಿ ಕುಖ್ಯಾತಿ ಪಡೆದ ವ್ಯಕ್ತಿ ಎಂದು  ಜಿಎಂ ಸಿದ್ದೇಶ್ವರ್ ಟೀಮ್ ವಾಗ್ದಾಳಿ ನಡೆಸಿದೆ.

ದಾವಣಗೆರೆ: ಮಾಜಿ ಸಚಿವ ರೇಣುಕಾಚಾರ್ಯ (Renukacharya) ಅಂಡ್ ಟೀಮ್ ವಿರುದ್ಧ ಜಿಎಂ ಸಿದ್ದೇಶ್ವರ್ (GM Siddeshwara) ಟೀಮ್ ವಾಗ್ದಾಳಿ ನಡೆಸಿದೆ. ದಾವಣಗೆರೆ (Davanagere) ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ (Gayathri Siddeshwar) ಸೋಲಿಗೆ ಲಗಾನ್ ಟೀಮ್ ನೇರ ಕಾರಣವಾಗಿದೆ. ರೇಣುಕಾಚಾರ್ಯ ಪ್ರಚಾರ ಪ್ರಿಯ, ಟಿಆರ್‌ಪಿ ರಾಜಕಾರಣಿ. ಮೊಳಕಾಲೂದ್ಧದ ನೀರಲ್ಲಿ ಬೊಟ್ ಓಡಿಸಿ ಕುಖ್ಯಾತಿ ಪಡೆದ ವ್ಯಕ್ತಿ. ಅವಕಾಶವಾದಿ ರಾಜಕಾರಣಿ ಎಂದು ರೇಣುಕಾಚಾರ್ಯ ವಿರುದ್ದ ಮಾಜಿ ಜಿಲ್ಲಾ ಅಧ್ಯಕ್ಷ ವೀರೇಶ್ ಹನಗವಾಡಿ ಸೇರಿದಂತೆ ಹಲವು ನಾಯಕರು ವಾಗ್ದಾಳಿ ನಡೆಸಿದ್ದಾರೆ. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಜೋಶಿ, ಸಂತೋಷ ಜೀ ಹಲವು ನಾಯಕರ ವಿರುದ್ಧ ಮಾತಾಡಿದ್ದಾರೆ. ನಮ್ಮ ಅಭ್ಯರ್ಥಿ ಹೊನ್ನಾಳಿಗೆ ಹೋದಾಗ ಹಿಂಬಾಲಕರಿಂದ ಗೊಂದಲ ಸೃಷ್ಟಿ. ನಮಗೆ ನಮ್ಮ ಪಕ್ಷದ ವರಿಷ್ಟರ ಬಗ್ಗೆ ಅಸಮಾಧಾನ ಆಗುತ್ತಿದೆ. ಇಂತವರನ್ನು ಸಹಿಸಿಕೊಂಡಿದ್ದರಲ್ಲ ಅಂತಾ ಕಾರ್ಯಕರ್ತರಿಗೆ ಬೇಸರ ಆಗಿದೆ. ಮೋದಿ ಮತ್ತು ಕಾರ್ಯಕರ್ತರ ಶ್ರಮದಿಂದ ನಮ್ಮ ಅಭ್ಯರ್ಥಿ 6 ಲಕ್ಷಕ್ಕೂ ಅಧಿಕ ಮತ ಪಡೆದಿದ್ದಾರೆ. ದಾವಣಗೆರೆ ಸೋಲಿಗೆ ಸ್ವಯಂ ಕೃತ ಅಪರಾಧ ಕಾರಣ ಅಂತಾ ಹೇಳುತ್ತಿದ್ದೀರಿ. ವಿಧಾನಸಭೆ ಚುನಾವಣೆಯಲ್ಲಿ 66 ಸೀಟ್ ಬರಲು ಕಾರಣ ಬೇಡ ಜಂಗಮ ಸರ್ಟಿಫಿಕೇಟ್ ಕಾರಣ. ನಿಮ್ಮ ಮನೆಯಿಂದಲೇ ಬೇಡ ಜಂಗಮ ಸರ್ಟಿಫಿಕೇಟ್ ಪಡೆದು ನಮ್ಮ ಪಕ್ಷದ ನಾಯಕರ ವಿರುದ್ಧ ಸ್ಪರ್ಧೆ ನಡೆಸಿದ್ದಾರೆ. ಸಹಜವಾಗಿ ಪರಿಶಿಷ್ಟ ಜಾತಿಯ ವರ್ಗಗಳು ಬೇಸರ ಆಗಿದ್ದವು. ಇದ್ರಿಂದ ನಮಗೆ ಚುನಾವಣೆಯಲ್ಲಿ ಹಿನ್ನಡೆ ಆಗಿದೆ. ರೇಣುಕಾಚಾರ್ಯ ಭೂತನ ಬಾಯಲ್ಲಿ ಭಗವದ್ಗೀತೆ ಕೇಳಿದಂಗೆ ಆಗುತ್ತೆ. ನಮಗೆ ಎಚ್ಚರಿಗೆ ಕೊಡೊ ದೊಡ್ಡ ವ್ಯಕ್ತಿ ನೀನಲ್ಲ ಎಂದು ರೇಣುಕಾಚಾರ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ವೀಕ್ಷಿಸಿ:  ಕೇಂದ್ರ ಸಚಿವರು ಬಂದರೆ ಪರಿಹಾರ ಸಿಗಲ್ಲ ಅಂತೀರಾ? ನೀವಾದ್ರೂ ಬರ್ತೀರಾ?: ಡಿಕೆಶಿ ವಿರುದ್ಧ ಅಶೋಕ್ ಕಿಡಿ

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
Read more