ರೈತರು ಉಳುಮೆ ಮಾಡುವ ಜಮೀನು ಸರ್ಕಾರದ ಹೆಸರಿಗೆ:  ಸೌಕರ್ಯ ಸಿಗದೇ ಅನ್ನದಾತರು ಕಂಗಾಲು..!

ರೈತರು ಉಳುಮೆ ಮಾಡುವ ಜಮೀನು ಸರ್ಕಾರದ ಹೆಸರಿಗೆ: ಸೌಕರ್ಯ ಸಿಗದೇ ಅನ್ನದಾತರು ಕಂಗಾಲು..!

Published : Nov 10, 2023, 11:24 AM ISTUpdated : Nov 10, 2023, 11:25 AM IST

ಭೀಕರ ಬರದ ಮಧ್ಯೆ  ತತ್ತರಿಸಿರುವ ರೈತರಿಗೆ ಸರ್ಕಾರ ಮತ್ತೊಂದು ಶಾಕ್ ಕೊಟ್ಟಿದೆ. ತುಂಡು ಭೂಮಿಯನ್ನು ನಂಬಿದ್ದ ರೈತರ ಜಾಗ ಇದೀಗ ಸರ್ಕಾರದ ಜಾಗ ಎಂದು ನಮೂದಾಗಿದೆ.
 

ಶತಮಾನಗಳಿಂದ ಜೀವನಕ್ಕಾಗಿ ತುಂಡು ಭೂಮಿಯನ್ನು ನಂಬಿದ್ದ ಅನ್ನದಾತರಿಗೆ(farmers) ಇದೀಗ ಆತಂಕ ಎದುರಾಗಿದೆ. ಗದಗ(Gadag) ಜಿಲ್ಲೆ ನರಗುಂದ ತಾಲೂಕಿನ ಕುರುಗೋವಿನಕೊಪ್ಪ ಗ್ರಾಮದ 538 ಎಕರೆ ಜಮೀನನ್ನ ರೈತರು ಉಳುಮೆ ಮಾಡ್ತಿದ್ರು.ಈ ಜಮೀನನ್ನೇ ನಂಬಿದ್ದ ರೈತರಿಗೆ ಭೂಮಿಯೂ ಕೈ ತಪ್ಪಿ ಹೋಗುವ ಆತಂಕ ಶುರುವಾಗಿದೆ. ಈ ಜಮೀನಿನ ದಾಖಲೆಗಳಲ್ಲಿ(Land Record) ಹರಿದೀಕ್ಷಿತ್ ಇನಾಮದಾರ್ ಹಾಗೂ ಇತರ ರೈತರ ಹೆಸರು ದಾಖಲಾಗಿತ್ತು. ಆದ್ರೇ ಇದೀಗ ರೈತರ ಹೆಸರಿನ ಬದಲಾಗಿ ಸರ್ಕಾರಿ ಜಾಗ ಅಂತಾ ನಮೂದಾಗಿದೆ.. ಈ ಭೂಮಿಯನ್ನೇ ನಂಬಿದ ರೈತರಿಗೆ ದಿಕ್ಕು ತೋಚದಂತಾಗಿದೆ. ಇನಾಮು ಜಮೀನಿನ ಹಕ್ಕು ಪತ್ರ  ನೀಡುವಂತೆ ಸರ್ಕಾರಕ್ಕೆ ರೈತರು ಪರಿ ಪರಿಯಾಗಿ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ.. 2021 ರೈತರ ಹೋರಾಟಕ್ಕೆ ಮಣಿದ ಸರ್ಕಾರ ಸರ್ವೆ ಮಾಡಲು ಸೂಚನೆ ನೀಡಿತ್ತು.. ಆದ್ರೀಗ ಪಹಣಿಯಿಂದ ರೈತ್ರ ಹೆಸರಿನ ಬದಲಾಗಿ, ಸರ್ಕಾರದ ಹೆಸರು ಬಂದಿದೆ.. ಇದ್ರಿಂದಾಗಿ ರೈತ ವಿಮೆ, ಬೆಳೆ ನಷ್ಟ ಪರಿಹಾರ ಸೇರಿ ರೈತರಿಗೆ ಸಿಗಬೇಕಾದ ಸೌಲಭ್ಯ ಸಿಗ್ತಿಲ್ಲ..ಆದಷ್ಟು ಬೇಗ ಈ ಸಮಸ್ಯೆಯನ್ನ ಸರ್ಕಾರ ಬಗೆಹರಿಸಬೇಕೆಂದು ರೈತರು ಆಗ್ರಹಿಸ್ತಿದ್ದಾರೆ. ಈ ಸಂಬಂಧ ಪಹಣಿಯಲ್ಲಿನ ಹೆಸರನ್ನು ಬದಲಾಯಿಸುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಭರವಸೆ ನೀಡಿದ್ದಾರೆ. ಜೀವನೋಪಾಯಕ್ಕೆ ಅಂತಿದ್ದ ತುಂಡು ಜಮೀನು ಈಗ ಸರ್ಕಾರದ ಹೆಸರಿಗೆ ಬದಲಾವಣೆಯಾಗಿದೆ.. ಬರ ಬಿದ್ದಿದ್ದು ಸರ್ಕಾರದಿಂದ ಸಿಗುವ ಯಾವುದೇ ಸೌಲಭ್ಯ ಸಿಗುವ ಭರವಸೆಯೂ ರೈತ್ರಿಗೆ ಉಳಿದಿಲ್ಲ.

ಇದನ್ನೂ ವೀಕ್ಷಿಸಿ:  IMA ಕೇಸ್‌ನಲ್ಲಿ ಹಣ ಕಳೆದುಕೊಂಡಿದ್ದವರಿಗೆ ಗುಡ್ ನ್ಯೂಸ್: 55 ಸಾವಿರ ಹೂಡಿಕೆದಾರರಿಗೆ 68 ಕೋಟಿ ಹಂಚಿಕೆ..!

22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
23:26Mysuru Marriage home Tragedy: ಮದುವೆ ಮನೆಯಲ್ಲಿ ಮೂರು ಚಟ್ಟ, ರಾಕ್ಷಸ ಉಲ್ಲಾಸ್ ಗೌಡನ ಕ್ರೌರ್ಯದ ಕಥೆ!
23:26FIR video: ಭೀಮಾತೀರದ ಹಂತಕ ಅಪ್ಪುಗೌಡ ಇಬ್ಬರ ಹತ್ಯೆಗೆ ಸ್ಕೆಚ್ ಹಾಕಿದ್ದ; ಆದ್ರೆ 6 ಜನರ ಕೊಲೆ ಮಾಡಿದ್ದೇಕೆ ಹಂತಕರು?
23:22ಕೇರಳದಿಂದ ಬಂದಿತ್ತು 20 ಲಕ್ಷ, ಪೊಲೀಸರಿಗೆ ಸಿಕ್ಕಿತ್ತು ಸುಳಿವು! ಖೆಡ್ಡಾಗೆ ಬಿದ್ದಿದ್ಹೇಗೆ 'ಖಾಕಿ' ಗ್ಯಾಂಗ್?
24:322 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಕೊಲೆ: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚಿ ಸಿಕ್ಕಿಬಿದ್ದ ಹೆಂಡತಿ!
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more