16 ವರ್ಷ ಸಾರ್ಥಕ ಸೇವೆ: ಶಿಕ್ಷಕನ ವರ್ಗಾವಣೆಗೆ ವಿದ್ಯಾರ್ಥಿಗಳ ಕಣ್ಣೀರ ಬೀಳ್ಕೊಡುಗೆ

16 ವರ್ಷ ಸಾರ್ಥಕ ಸೇವೆ: ಶಿಕ್ಷಕನ ವರ್ಗಾವಣೆಗೆ ವಿದ್ಯಾರ್ಥಿಗಳ ಕಣ್ಣೀರ ಬೀಳ್ಕೊಡುಗೆ

Published : Sep 01, 2023, 11:09 AM IST

16 ವರ್ಷದ ನಿರಂತರ ಸೇವೆ. ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಗುರು. ಗುರುಗಳು ವರ್ಗಾವಣೆಯಾದ್ರು ಅಂತಾ ಗ್ರಾಮವೇ ಕಣ್ಣೀರಿಟ್ಟಿದೆ. ಮನಮುಟ್ಟುವ ರೀತಿಯಲ್ಲಿ ಬೀಳ್ಕೊಡುಗೆ ಸಮಾರಂಭ ಮಾಡಿ ಮನೆ ಮಗನಂತಿದ್ದ ಮೇಷ್ಟ್ರನ್ನ ಸೆಂಡ್ ಆಫ್ ಮಾಡಿದೆ. 

ನೆಚ್ಚಿನ ಗುರುಗಳ ಮೇಲೆ ಪುಷ್ಪಮಳೆ. ತೆರೆದ ವಾಹನದಲ್ಲಿ ಅದ್ಧೂರಿ ಮೆರವಣಿಗೆ. ಜ್ಞಾನದ ಬುತ್ತಿ ಬಿತ್ತಿದ ಶಿಕ್ಷಕನಿಗೆ(Teacher) ಕಣ್ಣೀರ ಬೀಳ್ಕೊಡುಗೆ. ಈ ದೃಶ್ಯ ಕಂಡು ಬಂದಿದ್ದು ಗದಗ(Gadag) ಜಿಲ್ಲೆಯ ನಾಗರಮಡುವು ಗ್ರಾಮದಲ್ಲಿ. ಪುಟ್ಟಹಳ್ಳಿಯಲ್ಲಿ ಬರೋಬ್ಬರಿ 16 ವರ್ಷ ಸಾರ್ಥಕ ಸೇವೆ ಸಲ್ಲಿಸಿದ ಶಿಕ್ಷಕ ಬಸವರಾಜ್ ಹೆಳವಿ ಅವರಿಗೆ ವರ್ಗಾವಣೆಯಾಗಿದೆ. ನೆಚ್ಚಿನ ಶಿಕ್ಷಕನನ್ನು  ಗ್ರಾಮದ ರಸ್ತೆಗಳಲ್ಲಿ ರಂಗೋಲಿ ಹಾಕಿ. ತೋರಣಕಟ್ಟಿ..ತೆರದ ವಾಹನದಲ್ಲಿ ಮೆರವಣಿಗೆ ಮಾಡಿ ಬೀಳ್ಕೊಟ್ಟರು. 16 ವರ್ಷಗಳ ಕಾಲ ಸಾವಿರಾರು ಮಕ್ಕಳ ಭವಿಷ್ಯ ರೂಪಿಸಿದ ಶಿಕ್ಷಕನ ವರ್ಗಾವಣೆ (Transfer) ಕೆಲವರನ್ನು ಕಣ್ಣೀರ ಕಡಲಲ್ಲಿ ತೇಲಿಸಿತು. ಮಕ್ಕಳು ಮಾತ್ರವಲ್ಲ. ಪೋಷಕರೂ ಬಿಕ್ಕಿ ಬಿಕ್ಕಿ ಅತ್ತರು. ಇಂಗ್ಲಿಷ್ ಶಿಕ್ಷಕರಾಗಿದ್ದ ಬಸವರಾಜ್ ಹೆಳವಿ.. ಮಕ್ಕಳ ಅಭ್ಯುದಯಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದರು. ಬೆಳಗ್ಗೆ 6 ಗಂಟೆಯಿಂದ್ಲೆ ಫೀಲ್ಡ್ ಗೆ ಇಳೀತಿದ್ದ ಬಸವರಾಜ್ ಹೆಳವಿ(Basavaraj Helavi) ಮಕ್ಕಳಿಗೆ ಸ್ಪೋರ್ಟ್ಸ್ ಪ್ರ್ಯಾಕ್ಟೀಸ್ ಮಾಡಿಸುತ್ತಿದ್ರು. ರನ್ನಿಂಗ್, ಕಬ್ಬಡ್ಡಿ, ಹೈಜೆಂಪ್, ಕೋಕೋ, ಚೆಸ್ ಹೀಗೆ ವಿವಿಧ ಆಟಗಳ ಟ್ರೈನಿಂಗ್ ನೀಡುತ್ತಿದ್ದರು. ಇದರ ಫಲವಾಗಿ ಗ್ರಾಮದ ಮಕ್ಕಳು ಜಿಲ್ಲಾಮಟ್ಟ, ರಾಜ್ಯ ಮಟ್ಟದಲ್ಲೂ ಪ್ರಶಸ್ತಿ ಬಾಚಿದಾರೆ. ಆ ಗೆದ್ದ ಟ್ರೋಪಿಗಳನ್ನೆಲ್ಲಾ ತೆರೆದ ವಾಹನದಲ್ಲಿ ಇಟ್ಟು ಶಿಕ್ಷಕರ ಮೆರವಣಿಗೆ ಮಾಡಿದ್ರು.

ಇದನ್ನೂ ವೀಕ್ಷಿಸಿ:  ಯೇಸು ಹೊಗಳಿಕೆ..ಹಿಂದೂ ದೇವರುಗಳ ಬಗ್ಗೆ ಅಶ್ಲೀಲ ಮಾತು: ವ್ಯಕ್ತಿಯ ವಿಡಿಯೋ ವೈರಲ್‌

24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
25:38ರೌಡಿ ಶೀಟರ್‌ಗೆ ಹೆಂಡತಿ ಕಂಡರೆ 'ಫಿಯರ್': ಮಚ್ಚು ಹಿಡಿದು ಗಂಡನನ್ನೇ ಚೇಸ್ ಮಾಡಿದ ಕಿರಾತಕಿ ಹೆಂಡತಿ!
25:26Suvarna Special: ಏನದು 20 ವರ್ಷಗಳ ಸೇಡಿನ ಕಥೆ? ನಾರಾ ರೆಡ್ಡಿ, ಗಾಲಿ ರೆಡ್ಡಿ..ದಶಕಗಳ ದ್ವೇಷಚರಿತ್ರೆ!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:21ಚಿತ್ರದುರ್ಗ ಬಸ್ ಅಗ್ನಿ ದುರಂತ: ಚಲಿಸುವ ಚಿತಾಗಾರ 'ಸ್ಲೀಪರ್ ಬಸ್‌'ಗಳ ಕರಾಳ ಸತ್ಯ ಬಯಲು
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
Read more