ಬರದ ನಾಡಲ್ಲಿ ಏತ ನೀರಾವರಿಗೆ ಚಾಲನೆ: ಚಿತ್ರದುರ್ಗ ಅನ್ನದಾತರು ಫುಲ್ ಖುಷ್ !

ಬರದ ನಾಡಲ್ಲಿ ಏತ ನೀರಾವರಿಗೆ ಚಾಲನೆ: ಚಿತ್ರದುರ್ಗ ಅನ್ನದಾತರು ಫುಲ್ ಖುಷ್ !

Published : Sep 27, 2023, 10:41 AM IST

ಬರದನಾಡು ಚಿತ್ರದುರ್ಗಕ್ಕೆ ಈಗ ಜೀವ ಕಳೆ ಬಂದಿದೆ..ಸರ್ಕಾರದ ಏತನೀರಾವರಿ ಯೋಜನೆ ಅನ್ನದಾತರ ಬದುಕನ್ನೇ ಬದಲಿಸಿದೆ..ಭರಮಸಾಗರಿಂದ 5 ಕೆರೆಗಳಿಗೆ ನೀರು ಹರಿಸಲು ಮುಂದಾಗಿದ್ದು ನೂರಾರು ಎಕರೆಗೆ ನೀರು ಸಿಗುತ್ತಿದೆ.
 

ಬರದ ನಾಡು ಎಂಬ ಹಣೆಪ್ಟಟಿಕೊಂಡ ಚಿತ್ರದುರ್ಗಕ್ಕೆ(Chitradurga) ಈಗ ಏತನೀರಾವರಿ ಜೀವಜಲವಾಗಿದೆ. 5 ಕೆರೆಗಳ ತುಂಬಿಸುವ ಯೋಜನೆಗೆ ಚಾಲನೆ ಸಿಕ್ಕಿದ್ದು, ನೀರಿಲ್ಲದೇ ಬದುಕು ಸಾಗಿಸುತ್ತಿದ್ದ ರೈತರ ಮೊಗದಲ್ಲಿ  ಸಂತಸ ಮೂಡಿಸಿದೆ. ಭರಮಸಾಗರ ಏತ ನೀರವಾರಿ ಯೋಜನೆಯಿಂದ (Lift irrigation) 5 ಕೆರೆಗಳಿಗೆ ನೀರು ತುಂಬಲಿದೆ. ಈ ಮೂಲಕ ಕಾತ್ರಾಳ್, ಮುದ್ದಾಪುರ, ಯಳಗೋಡು, ಇಸಾಮುದ್ರ ಕೆರೆಗಳಿಗೆ ನೀರು ಹರಿದು ಬರುತ್ತಿದೆ. ಸತತ ಬರದಿಂದ ಈ ಭಾಗದಲ್ಲಿ ಬೋರ್ ವೆಲ್‌ಗಳು ಬತ್ತಿ ಹೋಗುತ್ತಿವೆ. ಇದೇ ವೇಳೆ ಈ ಏತನೀರಾವರಿ ಯೋಜನೆಗೆ ಚಾಲನೆ ಸಿಕ್ಕಿದ್ದು ಬತ್ತಿಹೋಗಿದ್ದ ಬೋರ್‌ವೆಲ್‌ಗಳಿಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಿದೆ. ಬೆಳೆದ ಬೆಳೆ ಹಾಗೂ ತೋಟಗಳು ಒಣಗುವ ಸ್ಥಿತಿಗೆ ಬಂದಿದ್ದವು. ಆದ್ರೆ ಸಿರಿಗೆರೆಯ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ(Sirigere Shivakumar Shivacharyashri) ಹೋರಾಟದಿಂದ ಈ ಏತನೀರಾವರಿ ಯೋಜನೆಗೆ ಚಾಲನೆ ಸಿಕ್ಕಿದ್ದು, ನಮ್ಮನ್ನು ಸಂಕಷ್ಟದಿಂದ ಪಾಡು ಮಾಡಿದೆ ಎನ್ನುತ್ತಿದ್ದಾರೆ ರೈತರು. ಸಿರಿಗೆರೆಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಹೋರಾಟದಿಂದ ರೈತರ ಜೀವನ ನಡೆಯುತ್ತಿದೆ ಎಂದ ಅನ್ನದಾತರು. ಬೆರೆ ಮಠಗಳು ಕೂಡ ಇಂಥ ಕಾರ್ಯಪ್ರವೃತ್ತಿ ಬೆಳೆಸಿಕೊಂಡ್ರೆ ರೈತರಿಗೆ ಅನುಕೂಲವಾಗಲಿದೆ ಅಂತಾರೆ ಹೋರಾಟಗಾರರು.

ಇದನ್ನೂ ವೀಕ್ಷಿಸಿ:  ಕೋಲಾರಮ್ಮ ಕೆರೆಗೆ ಜಿಲ್ಲಾಡಳಿತದಿಂದ ಆಧುನಿಕ ಸ್ಪರ್ಶ: 600 ಎಕರೆ ಕೆರೆಗೆ ಕೋಟಿ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
Read more