ನಾಗೇಂದ್ರ ಬಳಿಕ ಇಡಿ ಮುಂದಿನ ಬೇಟೆ ದದ್ದಲ್: ಬಂಧನ ಭೀತಿಯಿಂದ ಅಜ್ಞಾತವಾಗಿರುವ ಶಾಸಕ !

Jul 14, 2024, 10:12 AM IST

ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಹಗರಣ ಪ್ರಕರಣಕ್ಕೆ(Valmiki Nigama Scam) ಸಂಬಂಧಿಸಿದಂತೆ ನಾಗೇಂದ್ರ(Nagendra) ಬಳಿಕ ಇಡಿ ಮುಂದಿನ ಬೇಟೆ ಶಾಸಕ ಬಸನಗೌಡ ದದ್ದಲ್ (Basanagouda Daddal) ಆಗಿದ್ದು, ಅವರಿಗೆ ಈಗ ಬಂಧನ ಭೀತಿ ಎದುರಾಗಿದೆ. ಯಾವುದೇ ಕ್ಷಣದಲ್ಲಿ ಶಾಸಕ ದದ್ದಲ್ ಅರೆಸ್ಟ್ ಆಗುವ ಸಾಧ್ಯತೆ ಇದೆ. ಶಾಸಕ ದದ್ದಲ್‌ಗಾಗಿ ತೀವ್ರ ಶೋಧವನ್ನು ಇಡಿ(ED) ನಡೆಸುತ್ತಿದೆ. ಮೊನ್ನೆ ಎಸ್ಐಟಿ(SIT) ವಿಚಾರಣೆ ಬಳಿಕ ಶಾಸಕ ದದ್ದಲ್ ನಾಪತ್ತೆಯಾಗಿದ್ದಾರೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಬಸನಗೌಡ ದದ್ದಲ್, ಯಲಹಂಕ ನಿವಾಸದಲ್ಲೂ ಇಲ್ಲ, ಶಾಸಕರ ಭವನದಲ್ಲೂ ಇಲ್ಲ. ರಾಯಚೂರು ನಗರದ ನಿವಾಸಕ್ಕೂ ಶಾಸಕ ದದ್ದಲ್ ಹೋಗಿಲ್ಲ. ಶಾಸಕ ಬಸನಗೌಡ ದದ್ದಲ್ ಫೋನ್ ನಾಟ್ ರೀಚಬಲ್ ಆಗಿದ್ದು, ಇಡಿ ಬಂಧನ ಭೀತಿಯಿಂದ ಅಜ್ಞಾತವಾಗಿರುವ ದದ್ದಲ್ . ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆ ಇರಬಹುದು. 

ಇದನ್ನೂ ವೀಕ್ಷಿಸಿ:  ಯಲಹಂಕ ಸಂಭ್ರಮ: ಜನರಿಂದ ಉತ್ತಮ ರೆಸ್ಪಾನ್ಸ್ ..ಹೊಯ್ಸಳ ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆ