ಮಳೆಯಿಲ್ಲದೇ ಕಂಗೆಟ್ಟ ಅನ್ನದಾತ: ಕೋಲಾರದಲ್ಲಿ ಆವರಿಸಿದ ಬರದ ಛಾಯೆ !

ಮಳೆಯಿಲ್ಲದೇ ಕಂಗೆಟ್ಟ ಅನ್ನದಾತ: ಕೋಲಾರದಲ್ಲಿ ಆವರಿಸಿದ ಬರದ ಛಾಯೆ !

Published : Aug 31, 2023, 10:34 AM IST

ಯಾವುದೇ ನದಿ ನಾಲೆಗಳಿಲ್ಲ, ಈ ಬಾರಿ ಸರಿಯಾದ ಮಳೆ ಕಾಣದ ಕೋಲಾರ ಜಿಲ್ಲೆಗೆ ಬರದ ಭೀತಿ ಎದುರಾಗಿದೆ. ಮುಂಗಾರು ಕೈಕೊಟ್ಟಿದ್ದು, ಸದ್ಯ ಕಳೆದ ಒಂದು ತಿಂಗಳಿಂದ ಬೀಳದ ಮಳೆಯಿಂದ ರೈತರು ಬಿತ್ತನೆ ಕಾರ್ಯದಿಂದ ದೂರ ಉಳಿದಿದ್ದಾರೆ. ಬಿತ್ತನೆ ಮಾಡಿರುವ ಬೆಳೆ ಒಣಗಲಾರಂಭಿಸಿದ್ದು, ಜಿಲ್ಲೆಯಲ್ಲಿ ಬರದ ಛಾಯೆ ಆವರಸಿದೆ.
 

ಕಳೆದೆರಡು ವರ್ಷಗಳಿಂದ ಸಮೃದ್ಧ ಬೆಳೆ ಬೆಳೆದ ಭೂಮಿ(Land) ಬಿರುಕು ಸೆಳೆದಿದೆ. ಬಿಸಿಲ ಝಳದ ಮಧ್ಯೆ ಅನ್ನದಾತ(Farmer) ಮಳೆಗಾಗಿ ಆಗಸದತ್ತ ಮುಖಮಾಡಿ ನೋಡುತ್ತಿದ್ದಾನೆ. ಇದು ಸದ್ಯಕ್ಕೆ ಕೋಲಾರದಲ್ಲಿ ಕಂಡು ಬರುತ್ತಿರೋ ಬರದ(Drought) ಛಾಯೆ. ಮಳೆಯಿಲ್ಲದೇ ಕೋಲಾರ ಜಿಲ್ಲೆಯಲ್ಲಿ ಅನ್ನದಾತ ಕಂಗಾಲಾಗಿದ್ದಾನೆ. ಜುಲೈ ಮೊದಲ ವಾರದಲ್ಲಿ ಮಳೆ ಬೀಳುತ್ತಿದ್ದಂತೆ. ರೈತರು ಖುಷಿಯಲ್ಲಿ ಕೃಷಿ ಕಾರ್ಯ ಆರಂಭಿಸಿದ್ರು. ಒಂದಷ್ಟು ಬಿತ್ತನೆ ಕಾರ್ಯವನ್ನೂ ಮುಗಿಸಿದರು. ಆದ್ರೆ ಆಮೇಲೆ ಕೈಕೊಟ್ಟ ಮಳೆರಾಯ(Rain)ತಿರುಗಿ ಮುಖಮಾಡಿಲ್ಲ. ಕಳೆದೊಂದು ತಿಂಗಳಿನಿಂದ ಮಳೆ ಕೈಕೊಟ್ಟಿದ್ದು, ಬಿತ್ತನೆ ಪ್ರಮಾಣ ಸಹ ತೀವ್ರ ಕುಸಿತ ಕಂಡಿದೆ. ಜಿಲ್ಲೆಯ ಪ್ರಮುಖವಾಗಿ ರಾಗಿ, ತೊಗರಿ, ಎಳ್ಳು, ಜೋಳ, ನೆಲಗಡಲೆಯಂತಹ ದ್ವಿದಳ ಧಾನ್ಯಗಳನ್ನ ಬೆಳೆಯಲಾಗುತ್ತೆ. ಇದುವರೆಗೂ 1 ಲಕ್ಷ 2 ಸಾವಿರ 599 ಹೆಕ್ಟೇರ್ ಪ್ರದೇಶದಲ್ಲಿ ಕೇವಲ 17 ಸಾವಿರದ 627 ಹೆಕ್ಟೇರ್‌ ಬಿತ್ತನೆ ಆಗಿದೆ.  ಮಳೆ ಬಂದ್ರೆ ಈಗಲೂ ಬಿತ್ತನೆ ಬೀಜ, ರಸಗೊಬ್ಬರ ವಿತರಣೆಗೆ ಕೃಷಿ ಇಲಾಖೆ ರೆಡಿ ಇದೆ. ಆದ್ರೆ ಮಳೆಯೇ ಬರ್ತಿಲ್ಲ.

ಇದನ್ನೂ ವೀಕ್ಷಿಸಿ:  ಪುಷ್ಪಾ 2 ಸೆಟ್‌ನಲ್ಲೇ ವಿಡಿಯೋ ಮಾಡಿದ ‘ಬನ್ನಿ’: ರಾಷ್ಟ್ರಪ್ರಶಸ್ತಿ ವಿಜೇತ ಅಲ್ಲು ಅರ್ಜುನ್ ಮನೆ ನೋಡಿದ್ರಾ ?

29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
Read more