ಗಬ್ಬೆದ್ದು ನಾರುತ್ತಿದೆ ಇಂದಿರಾ ಕ್ಯಾಂಟೀನ್‌: ಕ್ಯಾಂಟೀನ್‌ ಒಳಗೆ ನುಗ್ಗಿದ ಚರಂಡಿ ನೀರು !

ಗಬ್ಬೆದ್ದು ನಾರುತ್ತಿದೆ ಇಂದಿರಾ ಕ್ಯಾಂಟೀನ್‌: ಕ್ಯಾಂಟೀನ್‌ ಒಳಗೆ ನುಗ್ಗಿದ ಚರಂಡಿ ನೀರು !

Published : Sep 08, 2023, 02:40 PM IST

ಬಡವರು ಉಪವಾಸದಿಂದ ಮಲಗಬಾರದು. ಕಡಿಮೆ ದರದಲ್ಲಿ ಮೂರು ಹೊತ್ತು ಹೊಟ್ಟೆ ತುಂಬಾ ಊಟ ಮಾಡ್ಬೇಕು ಅನ್ನೋದು ಸಿಎಂ ಸಿದ್ದರಾಮಯ್ಯನವರು ಕನಸು. ಎರಡನೇ ಸಲ ಸಿಎಂ ಆದಮೇಲಂತೂ ಬಂದ್ ಆಗಿದ್ದ ಇಂದಿರಾ ಕ್ಯಾಂಟೀನ್‌ಗಳು ಮತ್ತೆ ಓಪನ್ ಆಗ್ತಿವೆ. ಆದ್ರೆ, ಆ ಜಿಲ್ಲೆಯಲ್ಲಿರೋ ಏಕೈಕ ಇಂದಿರಾ ಕ್ಯಾಂಟೀನ್ ಗಬ್ಬೆದ್ದು ನಾರುತ್ತಿದೆ. 

ಸಿಎಂ ಸಿದ್ದರಾಮಯ್ಯ(Siddaramaiah) ನೇತೃತ್ವದ ಸರ್ಕಾರ 2013ರಲ್ಲಿ ಅಧಿಕಾರಕ್ಕೆ ಬಂದ ಮೇಲೆ ಬಡವರು ಉಪವಾಸದಿಂದ ಬಳಲಬಾರದು ಅಂತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ಇಂದಿರಾ ಕ್ಯಾಂಟೀನ್(Indira Canteen) ಯೋಜನೆ ಜಾರಿಗೆ ತಂದ್ರು, ಆದ್ರೆ, ನಂತರ ಅಧಿಕಾರಕ್ಕೆ ಬಂದ ಬಿಜೆಪಿ(BJP) ಸರ್ಕಾರ ಕೆಲವು ವರ್ಷ ಬಂದ್ ಮಾಡಿತ್ತು. ಇಂದು ಮತ್ತೆ ಸಿದ್ದರಾಮಯ್ಯ ಅವ್ರು ಸಿಎಂ ಆಗಿದ್ದು, ಮತ್ತೆ ಬಡವರ ಹೊಟ್ಟೆ ತುಂಬಿಸುವ ಯೋಜನೆ ಜಾರಿಯಾಗಿದೆ. ಆದ್ರೆ ಬಡವರು, ಕೂಲಿ ಕಾರ್ಮಿಕರು ಹಾಗೂ ನಿರ್ಗತಿಕರಿಗೆ ಮೂರು ಹೊತ್ತು ಹೊಟ್ಟೆ ತುಂಬಿಸುವ ಮಹತ್ವಾಕಾಂಕ್ಷೆ ಯೋಜನೆಯ ಇಂದಿರಾ ಕ್ಯಾಂಟೀನ್ ಮಾತ್ರ ಯಾದಗಿರಿಯಲ್ಲಿ(Yadagiri) ಹಳ್ಳ ಹಿಡಿದಿದೆ ನೋಡಿ.

ಯಾದಗಿರಿ ನಗರದ ಹೃದಯಭಾಗವಾದ ಗಂಜ್ ಏರಿಯಾದಲ್ಲಿರುವ ಈ ಇಂದಿರಾ ಕ್ಯಾಂಟೀನ್ ದುರ್ವಾಸನೆಯಿಂದ ನಾರುವಂತಾಗಿದೆ. ಕ್ಯಾಂಟೀನ್ ಒಳಗಡೆ ಆವರಿಸಿಕೊಂಡ ಚರಂಡಿ ನೀರು ದುರ್ನಾತದಿಂದ ಸಾರ್ವಜನಿಕರು ಹೈರಾಣಾಗಿದ್ದಾರೆ. ಜನರು ಊಟ ಮಾಡುವಾಗ ಹಾಗೂ ಊಟ ಬಡಿಸುವ ಸಿಬ್ಬಂದಿ, ಮೂಗಿಗೆ ಬಟ್ಟೆ ಕಟ್ಟಿಕೊಂಡು ಊಟ ಮಾಡುವಂತಾಗಿದೆ. 
 
ಇಲ್ಲಿ ಪ್ರತಿ ದಿನ ಪ್ರತಿದಿನ ಬೆಳಗ್ಗೆ ಹೊತ್ತು 300ಕ್ಕೂ ಹೆಚ್ಚು ಜನರು ತಿಂಡಿ ಸೇವಿಸ್ತಾರೆ. 400ಕ್ಕೂ ಅಧಿಕ ಜನರು ಮಧ್ಯಾಹ್ನದ ಊಟ ಸೇವಿಸ್ತಾರೆ. ರಾತ್ರಿ ವೇಳೆಯೂ ಹಲವು ಜನರು ಕಡಿಮೆ ದರದಲ್ಲಿ ಊಟ ಮಾಡಿ ಹೊಟ್ಟೆ ತುಂಬಿಸಿಕೊಳ್ತಾರೆ. ಆದ್ರೆ, ಕ್ಯಾಂಟೀನ್ನಲ್ಲಿ ಸರಿಯಾದ ಮೆನ್ಯು ಬೋರ್ಡ್ ಇಲ್ಲ. ಜನರಿಗೆ ಗೊತ್ತಾಗಲು ಇಂದಿರಾ ಕ್ಯಾಂಟೀನ್ ಹೆಸರೇ ಇಲ್ಲ. ಲೈಟ್ ಇಲ್ಲ, ಈ ಯೋಜನೆಯನ್ನ ನಗರಸಭೆ ಹಳ್ಳ ಹಿಡಿಸಿ ಹಾಕಿದೆ.

ಈ ಇಂದಿರಾ ಕ್ಯಾಂಟೀನ್ ಅನ್ನು ವಿಜಯಪುರ ಮೂಲದ ವ್ಯಕ್ತಿಯೊಬ್ಬ ಗುತ್ತಿಗೆ ಪಡೆದಿದ್ದಾನೆ. ಆದ್ರೆ ಸರ್ಕಾರ ಕಳೆದ ಎಂಟು ತಿಂಗಳಿಂದ ಗುತ್ತಿಗೆದಾರರ ಹಣವನ್ನು ಸಹ ಬಿಡುಗಡೆ ಮಾಡಿಲ್ಲ. ಗುತ್ತಿಗೆದಾರ ಕೂಡ ತನ್ನ ಸ್ವಂತ ಹಣದಿಂದ ಇಂದಿರಾ ಕ್ಯಾಂಟೀನ್ ಅನ್ನು ನಿರ್ವಹಣೆ ಮಾಡ್ತಿದ್ದಾರೆ. ಇದು ಗುತ್ತಿಗೆದಾರಿಗೆ ಒಂದು ಕಡೆ ಸಂಕಟವಾಗಿದೆ. ಇದರಿಂದಾಗಿ ಸರಿಯಾಗಿ ಅಂದ್ರೆ ಮೆನ್ಯುಗೆ ತಕ್ಕಂತೆ ಊಟ ಹಾಗೂ ತಿಂಡಿ ಸಿಗ್ತಿಲ್ಲ. ಸರ್ಕಾರ ಸರಿಯಾಗಿ ಹಣವನ್ನು ಸಹ ನೀಡಿದ್ರೆ ಅವ್ರು ಕೂಡ ವ್ಯವಸ್ಥಿತವಾದ ಊಟ ಹಾಗೂ ತಿಂಡಿಯನ್ನು ನೀಡ್ತಿದ್ರು, ಆದ್ರೆ ಸರ್ಕಾರದ ನಿರ್ಲಕ್ಷ್ಯತನದಿಂದ ಜನರ ಹೊಟ್ಟೆಗೆ ಸರಿಯಾದ ಊಟ ಸಿಗ್ತಿಲ್ಲ.

ಇದನ್ನೂ ವೀಕ್ಷಿಸಿ:  ಜಿ-20 ಸಭೆ: ಹೆಲಿಕಾಪ್ಟರ್‌ನಿಂದ ಲಕ್ಸುರಿ ಕಾರ್ ತನಕ..ಹೇಗಿರಲಿದೆ ಭದ್ರತೆ ?

24:04ಭೀಮಾತೀರದ ಮರ್ಡರ್​​ ರಹಸ್ಯ! : ಜಮೀನಿಗಾಗಿ ನಡೆದಿಲ್ಲ 6 ಜನರ ಕೊಲೆ, ಆ ದಂಧೆಯೇ ಕಾರಣವಂತೆ!
23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
26:57ಡಿಕೆ ಶಿವಕುಮಾರ್ ಸಿಎಂ ಪ್ರಮಾಣವಚನಕ್ಕೆ ಫಿಕ್ಸ್ ಮಹಾ ಮುಹೂರ್ತ? ರಾಜಭವನದಲ್ಲಿ ಭರ್ಜರಿ ಸಿದ್ಧತೆ
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
15:11ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
45:33ಕನ್ನಡಪ್ರಭ- ಸುವರ್ಣನ್ಯೂಸ್‌ ವನ್ಯಜೀವಿ ಸಂರಕ್ಷಣಾ ಅಭಿಯಾನ: ಮಲೆ ಮಹದೇಶ್ವರ ಕಾಡಲ್ಲಿ ರಾಯಭಾರಿ ಗಣೇಶ್!