15 ದಿನದೊಳಗೆ ಡಿಕೆಶಿಗೆ ಬಿಡುಗಡೆ ಭಾಗ್ಯ..!

Sep 22, 2019, 2:16 PM IST

ಕೊಪ್ಪಳ[ಸೆ.22]: ಮೊಹರಂ ಕೌಡಿ ಪೀರ್ ವಿಸರ್ಜನೆ ವೇಳೆ ಡಿಕೆಶಿ ಬಿಡುಗಡೆ ಕುರಿತು ಕೇಳಿದ ಪ್ರಶ್ನೆಗೆ ದೇವರು ಹೊತ್ತವರು ಉತ್ತರಿಸಿದ್ದಾರೆ. ಹೌದು ಕೊಪ್ಪಳದ ಕನಕಗಿರಿಯಲ್ಲಿ‌ ಘಟನೆ ಈ ಘಟನೆ ನಡೆದಿದ್ದು, ಸ್ಥಳೀಯರು ಡಿಕೆಶಿಗೆ ಬಿಡುಗಡೆ ಯಾವಾಗ ಎಂದು ದೇವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ದೇವರು ಹೊತ್ತ ವ್ಯಕ್ತಿ ಇನ್ನೂ ಹದಿನೈದು‌ ದಿನಗೊಳಗಾಗಿ ಡಿಕೆಶಿ ಬಿಡುಗಡೆ ಆಗುತ್ತಾರೆ ಎಂದು ಹೇಳಿದ್ದಾರೆ. ಕಳೆದ ವಾರವಷ್ಟೇ ಮೊಹರಂ ಹಲಾಯಿ ದೇವರ ಬಳಿ ಮಳೆಗಾಗಿ ಧರಣಿ ಕುಳಿತಿದ್ದರು. ಈ ವೇಳೆ ಒಂದು ವಾರದಲ್ಲಿ ಮಳೆ ಬರುವುದಾಗಿ ಹಲಾಯಿ ದೇವರು ಹೇಳಿ ಹೋಗಿದ್ದರಂತೆ. ದೇವರು ಹೇಳಿದಂತೆ ಒಂದೇ ವಾರದಲ್ಲಿ ಜಿಲ್ಲೆಯಲ್ಲಿ ಮಳೆಯಾಗಿತ್ತು.