ಕುರಿಗಾಹಿಗಳಿಂದ ಸಂಭ್ರಮದ ದೀಪಾವಳಿ ಆಚರಣೆ: ಕುರಿಗಳಿಗೆ ಬಣ್ಣದ ಅಲಂಕಾರ ಮಾಡಿ ಸಡಗರ

ಕುರಿಗಾಹಿಗಳಿಂದ ಸಂಭ್ರಮದ ದೀಪಾವಳಿ ಆಚರಣೆ: ಕುರಿಗಳಿಗೆ ಬಣ್ಣದ ಅಲಂಕಾರ ಮಾಡಿ ಸಡಗರ

Published : Nov 14, 2023, 10:34 AM IST

ದೀಪಾವಳಿ ಹಬ್ಬಕ್ಕೆ ಎಲ್ಲೆಲ್ಲೂ ದೀಪ, ಪಟಾಕಿಗಳ ಸಂಭ್ರಮವಿರುತ್ತದೆ. ಆದ್ರೆ ಕೊಪ್ಪಳದಲ್ಲಿ ಕುರಿಗಾಹಿಗಳು ದೀಪದ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ. ಮನೆ ಮಂದಿಯೆಲ್ಲ ಕುರಿಗಳನ್ನು ಪೂಜಿಸಿ, ಕುರಿ ಹಟ್ಟಿಯಲ್ಲೇ ಊಟ ಸವಿಯುತ್ತಾರೆ. 
 

ಕುರಿಗಳಿಗೆ ಬಣ್ಣದ ಅಲಂಕಾರ.. ಹಟ್ಟಿಗೆ ತೆಂಗಿನಗರಿ, ಕಬ್ಬಿನಿಂದ ಸಿಂಗಾರ. ಮನೆ ಮಂದಿಯೆಲ್ಲ ಸೇರಿ ಪೂಜಿಸಿ, ಹಬ್ಬದ ಊಟ ಸವಿಯೋಯೋದೇ ಚೆಂದ.ಇದು ಉತ್ತರ ಕರ್ನಾಟಕದ ದೀಪಾಳಿಯ ಸ್ಪೆಷಲ್. ದೀಪಾವಳಿ (Deepavali) ಬಂತಂದ್ರೆ ಸಾಕು ಕುರಿಗಾಹಿಗಳಿಗೆ(shepherds) ಖುಷಿಯೋ ಖುಷಿ. ಮಕ್ಕಳಿಗಂತೂ ಕುರಿಗಳನ್ನ ಅಲಂಕರಿಸೋದೇ ಒಂದು ಸಂಭ್ರಮ. ಹೌದು ಉತ್ತರ ಕರ್ನಾಟಕ (North Karnataka) ಭಾಗದಲ್ಲಿ ದೀಪಾವಳಿ ದಿನ ಕುರಿಗಾಹಿಗಳು ಇಂಥದ್ದೊಂದು ವಿಭಿನ್ನ ಆಚರಣೆ ಮಾಡಿಕೊಂಡು  ಬಂದಿದ್ದಾರೆ. ಬಲಿ ಪಾಡ್ಯ ದಿನ ತಮ್ಮ ಹಟ್ಟಿಯಲ್ಲಿನ ಕುರಿಗಳಿಗೆಲ್ಲ ಬಣ್ಣ ಹಚ್ಚಿ, ಅಲಂಕಾರ ಮಾಡಿ, ಹೂವಿನ ಹಾರ ಹಾಕುತ್ತಾರೆ. ಕುರಿ ಹಟ್ಟಿಯನ್ನೂ ಅಲಂಕರಿಸಿ ಪೂಜೆ ಮಾಡುತ್ತಾರೆ. ದೇವರಾದ ಬೀರಪ್ಪ ನೀನೇ ಎಂದು ಕುರಿಗಳಿಗೆ ಪೂಜಿಸುವ ಸಂಪ್ರದಾಯ ತಲೆತಲಾಂತರಗಳಿಂದ ನಡೆದುಕೊಂಡು ಬಂದಿದೆ. ಗಂಡಸರು, ಮಕ್ಕಳೆಲ್ಲ ಕುರಿ ಹಟ್ಟಿ, ಕುರಿಗಳನ್ನು ಸಿಂಗರಿಸಿದ್ರೆ, ಇತ್ತ ಹೆಣ್ಣು ಮಕ್ಕಳು ತರಹೇವಾರಿ ಅಡುಗೆ ಸಿದ್ಧಪಡಿಸುತ್ತಾರೆ. ಮನೆಯಲ್ಲಿ  ಸಿದ್ಧಪಡಿಸಿದ ಹೋಳಿಗೆ, ಹುಗ್ಗಿ, ಸಿಹಿ ಪದಾರ್ಥಗಳನ್ನು ಕಟ್ಟಿಕೊಂಡು ಕುರಿ ಹಟ್ಟಿಗೆ ಬರ್ತಾರೆ. ಕುಟುಂಬ ಸದಸ್ಯರೆಲ್ಲಾ ಒಟ್ಟುಗೂಡಿ ಕುರಿಗಳಿಗೆ ಪೂಜಿಸಿ, ಲಕ್ಷ್ಮೀಗೆ ನಮಿಸುತ್ತಾರೆ.. ಜಾನಪದ ಹಾಡುಗಳನ್ನು ಹಾಡಿ ಸಂಭ್ರಮಿಸುತ್ತಾರೆ. ಬಳಿಕ ಮನೆಯಿಂದ ತಂದ ಅಡುಗೆಯನ್ನು ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ.. ಇಡೀ ದಿನ ಹಟ್ಟಿಯಲ್ಲೇ ಕಾಲ ಕಳೆಯುತ್ತಾ ಸಂಭ್ರಮಿಸುತ್ತಾರೆ.

ಇದನ್ನೂ ವೀಕ್ಷಿಸಿ:  ಉತ್ತರಕನ್ನಡದಲ್ಲಿ ಬಲಿ ಚಕ್ರವರ್ತಿಯ ವಿಶಿಷ್ಟ ಆರಾಧನೆ: ಪ್ರಾದೇಶಿಕವಾಗಿ ಭಿನ್ನವಾಗಿ ಬೆಳಕಿನ ಹಬ್ಬ ಆಚರಣೆ

21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
Read more