ಕುರಿಗಾಹಿಗಳಿಂದ ಸಂಭ್ರಮದ ದೀಪಾವಳಿ ಆಚರಣೆ: ಕುರಿಗಳಿಗೆ ಬಣ್ಣದ ಅಲಂಕಾರ ಮಾಡಿ ಸಡಗರ

ಕುರಿಗಾಹಿಗಳಿಂದ ಸಂಭ್ರಮದ ದೀಪಾವಳಿ ಆಚರಣೆ: ಕುರಿಗಳಿಗೆ ಬಣ್ಣದ ಅಲಂಕಾರ ಮಾಡಿ ಸಡಗರ

Published : Nov 14, 2023, 10:34 AM IST

ದೀಪಾವಳಿ ಹಬ್ಬಕ್ಕೆ ಎಲ್ಲೆಲ್ಲೂ ದೀಪ, ಪಟಾಕಿಗಳ ಸಂಭ್ರಮವಿರುತ್ತದೆ. ಆದ್ರೆ ಕೊಪ್ಪಳದಲ್ಲಿ ಕುರಿಗಾಹಿಗಳು ದೀಪದ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ. ಮನೆ ಮಂದಿಯೆಲ್ಲ ಕುರಿಗಳನ್ನು ಪೂಜಿಸಿ, ಕುರಿ ಹಟ್ಟಿಯಲ್ಲೇ ಊಟ ಸವಿಯುತ್ತಾರೆ. 
 

ಕುರಿಗಳಿಗೆ ಬಣ್ಣದ ಅಲಂಕಾರ.. ಹಟ್ಟಿಗೆ ತೆಂಗಿನಗರಿ, ಕಬ್ಬಿನಿಂದ ಸಿಂಗಾರ. ಮನೆ ಮಂದಿಯೆಲ್ಲ ಸೇರಿ ಪೂಜಿಸಿ, ಹಬ್ಬದ ಊಟ ಸವಿಯೋಯೋದೇ ಚೆಂದ.ಇದು ಉತ್ತರ ಕರ್ನಾಟಕದ ದೀಪಾಳಿಯ ಸ್ಪೆಷಲ್. ದೀಪಾವಳಿ (Deepavali) ಬಂತಂದ್ರೆ ಸಾಕು ಕುರಿಗಾಹಿಗಳಿಗೆ(shepherds) ಖುಷಿಯೋ ಖುಷಿ. ಮಕ್ಕಳಿಗಂತೂ ಕುರಿಗಳನ್ನ ಅಲಂಕರಿಸೋದೇ ಒಂದು ಸಂಭ್ರಮ. ಹೌದು ಉತ್ತರ ಕರ್ನಾಟಕ (North Karnataka) ಭಾಗದಲ್ಲಿ ದೀಪಾವಳಿ ದಿನ ಕುರಿಗಾಹಿಗಳು ಇಂಥದ್ದೊಂದು ವಿಭಿನ್ನ ಆಚರಣೆ ಮಾಡಿಕೊಂಡು  ಬಂದಿದ್ದಾರೆ. ಬಲಿ ಪಾಡ್ಯ ದಿನ ತಮ್ಮ ಹಟ್ಟಿಯಲ್ಲಿನ ಕುರಿಗಳಿಗೆಲ್ಲ ಬಣ್ಣ ಹಚ್ಚಿ, ಅಲಂಕಾರ ಮಾಡಿ, ಹೂವಿನ ಹಾರ ಹಾಕುತ್ತಾರೆ. ಕುರಿ ಹಟ್ಟಿಯನ್ನೂ ಅಲಂಕರಿಸಿ ಪೂಜೆ ಮಾಡುತ್ತಾರೆ. ದೇವರಾದ ಬೀರಪ್ಪ ನೀನೇ ಎಂದು ಕುರಿಗಳಿಗೆ ಪೂಜಿಸುವ ಸಂಪ್ರದಾಯ ತಲೆತಲಾಂತರಗಳಿಂದ ನಡೆದುಕೊಂಡು ಬಂದಿದೆ. ಗಂಡಸರು, ಮಕ್ಕಳೆಲ್ಲ ಕುರಿ ಹಟ್ಟಿ, ಕುರಿಗಳನ್ನು ಸಿಂಗರಿಸಿದ್ರೆ, ಇತ್ತ ಹೆಣ್ಣು ಮಕ್ಕಳು ತರಹೇವಾರಿ ಅಡುಗೆ ಸಿದ್ಧಪಡಿಸುತ್ತಾರೆ. ಮನೆಯಲ್ಲಿ  ಸಿದ್ಧಪಡಿಸಿದ ಹೋಳಿಗೆ, ಹುಗ್ಗಿ, ಸಿಹಿ ಪದಾರ್ಥಗಳನ್ನು ಕಟ್ಟಿಕೊಂಡು ಕುರಿ ಹಟ್ಟಿಗೆ ಬರ್ತಾರೆ. ಕುಟುಂಬ ಸದಸ್ಯರೆಲ್ಲಾ ಒಟ್ಟುಗೂಡಿ ಕುರಿಗಳಿಗೆ ಪೂಜಿಸಿ, ಲಕ್ಷ್ಮೀಗೆ ನಮಿಸುತ್ತಾರೆ.. ಜಾನಪದ ಹಾಡುಗಳನ್ನು ಹಾಡಿ ಸಂಭ್ರಮಿಸುತ್ತಾರೆ. ಬಳಿಕ ಮನೆಯಿಂದ ತಂದ ಅಡುಗೆಯನ್ನು ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ.. ಇಡೀ ದಿನ ಹಟ್ಟಿಯಲ್ಲೇ ಕಾಲ ಕಳೆಯುತ್ತಾ ಸಂಭ್ರಮಿಸುತ್ತಾರೆ.

ಇದನ್ನೂ ವೀಕ್ಷಿಸಿ:  ಉತ್ತರಕನ್ನಡದಲ್ಲಿ ಬಲಿ ಚಕ್ರವರ್ತಿಯ ವಿಶಿಷ್ಟ ಆರಾಧನೆ: ಪ್ರಾದೇಶಿಕವಾಗಿ ಭಿನ್ನವಾಗಿ ಬೆಳಕಿನ ಹಬ್ಬ ಆಚರಣೆ

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more