ಪೊಲೀಸರಿಗೆ ಕ್ವಾಟ್ರಸ್‌ ಇಲ್ಲ, ಹೆಚ್‌ಆರ್‌ಎನಲ್ಲೂ ಕಡಿತ: ಸಂಕಷ್ಟದಲ್ಲಿ ಪೊಲೀಸರು !

ಪೊಲೀಸರಿಗೆ ಕ್ವಾಟ್ರಸ್‌ ಇಲ್ಲ, ಹೆಚ್‌ಆರ್‌ಎನಲ್ಲೂ ಕಡಿತ: ಸಂಕಷ್ಟದಲ್ಲಿ ಪೊಲೀಸರು !

Published : Sep 13, 2023, 01:27 PM IST

ಅವರ ಹೆಸರಿಗೆ ಮಾತ್ರ ಬೆಂಗಳೂರು ಸಿಟಿ ಪೊಲೀಸರು. ಕೆಲಸ ಬಂದೋಬಸ್ತ್ ಎಲ್ಲವೂ ಕೂಡ ಬೆಂಗಳೂರು ನಗರದಲ್ಲೆ, ಆದರೆ ಪೊಲೀಸರಿಗೆ ಕೊಡೋ ಸೌಲಭ್ಯಗಳು ಮಾತ್ರ ಗ್ರಾಮೀಣ ಪ್ರದೇಶದವರಂತೆ ಕಾಣ್ತಿದ್ದಾರೆ. ಈ ಪೊಲೀಸರಿಗೆ ಕ್ವಾಟ್ರಸ್ಸು ಇಲ್ಲ ಸರ್ಕಾರದಿಂದ HRA ನು ಕಡಿಮೆ ಕೊಡುತ್ತಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ 300ಕ್ಕೂ ಹೆಚ್ಚು ಪೊಲೀಸ್ ಕುಟುಂಬಗಳು ಸಮಸ್ಯೆಗೆ ಸಿಲುಕಿವೆ. 
 

ಅಪಘಾತ ಕಳ್ಳತನ ಬಂದೋಬಸ್ತ್‌ ಹೀಗೆ ಸದಾ ಕಾಲ ಕೆಲಸದ ಒತ್ತಡದಿಂದಲೇ ಕಾರ್ಯ ನಿರ್ವಹಿಸುವ ಸಿಬ್ಬಂದಿ ಎಂದರೆ ಅದು ಪೊಲೀಸರು(Police). ಕೆಲಸಕ್ಕೆ ತಕ್ಕಂತೆ ವೇತನ ಕೊಡಬೇಕೆಂಬ ಆಗ್ರಹ ತುಂಬಾ ದಿನಗಳಿಂದ ನಡೆಯುತ್ತಲೇ ಇದೆ, ಆದರೆ ದೇವನಹಳ್ಳಿ(devanahalli) ಉಪವಿಭಾಗ ಪೊಲೀಸರು ಮಾತ್ರ ಸಂಕಷ್ಟಗಳ ಸರಮಾಲೆಯಲ್ಲಿ ಸಿಲುಕಿದ್ದಾರೆ. ಈ ವಿಭಾಗದ ಪೊಲೀಸರು ಹೆಸರಿಗೆ ಮಾತ್ರ ಬೆಂಗಳೂರು(bengaluru) ಸಿಟಿ ಪೊಲೀಸರು ಆಗಿದ್ದಾರೆ. ಆದರೆ ಇವರಿಗೆ ನೀಡುತ್ತಿರುವ ಸೌಲಭ್ಯಗಳು ಮಾತ್ರ ಗ್ರಾಮೀಣ ಪ್ರದೇಶದವರಂತೆ ಕೊಡುತ್ತಿದ್ದಾರೆ. ಹೌದು ದೇವನಹಳ್ಳಿ ಉಪವಿಭಾಗಕ್ಕೆ ನಾಲ್ಕು ಪೊಲೀಸ್ ಠಾಣೆಗಳು ಬರುತ್ತವೆ. ದೇವನಹಳ್ಳಿ ಚಿಕ್ಕಜಾಲ ಕೆಂಪೇಗೌಡ ಏರ್ಪೋರ್ಟ್ ಪೊಲೀಸ್ ಠಾಣೆ ಹಾಗೂ ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆ. ಈ ಎಲ್ಲಾ ಪೊಲೀಸ್ ಠಾಣೆಗಳಲ್ಲೂ ಸುಮಾರು 300ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇವರಿಗೆ ನೀಡುತ್ತಿರುವ HRA ಮಾತ್ರ ಶೇಕಡ 8%. ಆದರೆ ಇವರ ಪಕ್ಕದ ಠಾಣೆ ಬಾಗಲೂರು ಪೊಲೀಸರಿಗೆ ಯಲಹಂಕ ಪೊಲೀಸರಿಗೆ ಮಾತ್ರ ಎಚ್ ಆರ್ ಎ ಶೇಕಡಾ 24ರಷ್ಟು ನೀಡುತ್ತಿದ್ದಾರೆ.

ಇತ್ತ ಕ್ವಾಟ್ರಸ್ಸು ಇಲ್ಲ ಎಚ್ ಆರ್ ಎ ಕೂಡ ಹೆಚ್ಚಿಗೆ ನೀಡುತ್ತಿಲ್ಲ ಅಂತ ಪೊಲೀಸರು ಸಮಸ್ಯೆಗೆ ಸಿಲುಕಿದ್ದಾರೆ. ಈಗಾಗಲೇ ಬೆಂಗಳೂರಿಗೆ ಈ ಪೊಲೀಸ್ ಠಾಣಾ ವ್ಯಾಪ್ತಿ ಹೊಂದಿಕೊಂಡಿತ್ತು ಎಲ್ಲಾ ಮನೆ ಬಾಡಿಗೆ ಸೇರಿದಂತೆ ಎಲ್ಲಾ ಬೆಲೆಯೂ ಹೆಚ್ಚಳವಾಗಿದೆ. ಇನ್ನು ಈ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಎಲ್ಲಾ ಪೊಲೀಸರು ಬಂದೋಬಸ್ ಸೇರಿದಂತೆ ಕೆಲಸ ನಿರ್ವಹಿಸುವುದು ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಬರುತ್ತದೆ. ನಮಗೂ ಹೆಚ್ಚಾಗಿ ಶೇಕಡ 24ರಷ್ಟು ನೀಡಬೇಕು ಎಂದು ಪೊಲೀಸರು ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ದೇವನಹಳ್ಳಿ ರೂಪ ವಿಭಾಗವೂ ಕೂಡ ಬೆಂಗಳೂರು ಈಶಾನ್ಯ ವಲಯ ವ್ಯಾಪ್ತಿಗೆ ಸೇರುತ್ತದೆ. ಈ ಹಿಂದೆ ಕೂಡ ಈ ವಿಭಾಗದ ಪೊಲೀಸರಿಗೆ ಶೇಕಡಾ 24ರಷ್ಟು ಎಚ್ ಆರ್ ಎ ನೀಡುತ್ತಿದ್ದರು. ಆದರೆ ಕಳೆದ ಒಂದು ವರ್ಷದಿಂದ ಇವರಿಗೆ ಹೆಚ್ಚಾರಿಯ ಕಡಿತ ಮಾಡಿದ್ದಾರೆ. ಹೀಗಾಗಿ ಮಕ್ಕಳ ವಿದ್ಯಾಭ್ಯಾಸ ಹಾಗೂ ಮನೆ ಬಾಡಿಗೆಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ ಅಂತ ಪೊಲೀಸ್ ಕುಟುಂಬಗಳು ಸಮಸ್ಯೆ ತೋಡಿಕೊಂಡಿದ್ದಾರೆ.

ಇದನ್ನೂ ವೀಕ್ಷಿಸಿ:  ಸಾರ್ವಜನಿಕ ಸ್ವತ್ತಿನ ಮೇಲೆ ಭೂಮಾಫಿಯಾ ಕಣ್ಣು: ಬಿಬಿಎಂಪಿ ಪಾರ್ಕ್‌ಗೆ ಬೀಗ ಜಡಿದ ಭೂಗಳ್ಳರು..?

01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
Read more