ಮಹಿಳೆ ಬದುಕನ್ನೇ ಬದಲಿಸಿದ ಬಿಗ್‌-3: ಬಡ ಶಶಿಕಲಾ ಬದುಕಲ್ಲಿ ಹೊಸ ಬೆಳಕು !

ಮಹಿಳೆ ಬದುಕನ್ನೇ ಬದಲಿಸಿದ ಬಿಗ್‌-3: ಬಡ ಶಶಿಕಲಾ ಬದುಕಲ್ಲಿ ಹೊಸ ಬೆಳಕು !

Published : Sep 12, 2023, 11:11 AM IST

ಇದು ಇದು ಬಿಗ್-3 ಪವರ್, ಆ ಒಂದು ವರದಿಗೆ ಇಡೀ ಕರುನಾಡೇ ಮರುಗಿತ್ತು. 6 ವರ್ಷದಿಂದ ಕತ್ತಲೇ ಕೂಪದಲ್ಲಿದ್ದ ಅಮ್ಮ-ಮಗಳ ನೆರೆವಿಗೆ ಬಂದಿದ್ದೇ ಬಿಗ್- 3. ಹಾಗಿದ್ರೆ ಅವರ ಬದುಕು ಬದಲಾಗಿದ್ದಾದ್ರೂ ಹೇಗೆ?...ಈ ಸ್ಪೆಷಲ್ ರಿಪೋರ್ಟ್ ಇದೆ.
 

ಬಿಗ್-3 ಅಂದ್ರೆ ಹಂಗೇ ನೋಡಿ...ಹಿಡಿದ ಕೆಲಸವನ್ನ ಮುಗಿಸೋವರೆಗೂ ಬಿಡಲ್ಲ... 4 ದಿನಗಳ ಹಿಂದೆ ಬುದ್ಧಿಮಾಂದ್ಯ ಮಗಳ ಜೊತೆ ತಾಯಿ ನರಳಾಟದ ಸುದ್ದಿ ಪ್ರಸಾರ ಮಾಡಲಾಗಿತ್ತು. ಬುದ್ಧಿಮಾಂದ್ಯ ಮಗಳನ್ನು ಸಾಕಲು ತಾಯಿ, ಅವರಿವರ ಮನೆ ಮುಸೂರೆ ತಿಕ್ಕಿ ಜೀವನ ನಡೆಸುತ್ತಿದ್ದಳು. ಇತ್ತ ಕಿವಿ(Ear) ಕೇಳಿಸದೇ ತಾಯಿ ಶಶಿಕಲಾ ಕಂಗಾಲಾಗಿದ್ರು. ಕಿವುಡತನದಿಂದ ಬಳಲುತ್ತಿದ್ದ ಶಶಿಕಲಾ ಪರಿಸ್ಥಿತಿಯನ್ನ ಬಿಗ್-3(BIG 3) ತಂಡವು ಕಣ್ಣಾರೆ ಕಂಡಿತ್ತು. ಇದೀಗ ಶಶಿಕಲಾ ಬದುಕಿನ ಹೊಸ ಅಧ್ಯಾಯಕ್ಕೆ ಬಿಗ್-3 ಕಾರಣವಾಗಿದೆ. ಇದೀಗ ಬಡಮಹಿಳೆ (Woman) ಶಶಿಕಲಾ ಬದುಕಿಗೆ ಹೊಸ ಬೆಳಕು ಮೂಡಿಸಿದೆ ನಿಮ್ಮ ಬಿಗ್-3. ಕಿವುಡತನದಿಂದ ಬಳಲುತ್ತಿದ್ದ ಶಶಿಕಲಾಗೆ ಕೇವಲ ನಾಲ್ಕು ತಾಸಿನಲ್ಲಿ ಬಿಗ್-3 ತಂಡವು ಕಿವುಡುತನದ ಸಮಸ್ಯೆ ಬಗೆಹರಿಸಿದೆ. ಶಶಿಕಲಾರ ಕಿವಿ ಪರೀಕ್ಷೆ ವೇಳೆ ಒಂದು ಕಿವಿಯಲ್ಲಿ 53% ಮತ್ತೊಂದು ಕಿವಿಯಲ್ಲಿ 68 % ಕಿವುಡುತನ ಇರುವುದು ಪತ್ತೆಯಾಗಿತ್ತು. ಒಟ್ಟಾರೆ ಎರಡು ಕಿವಿಯಲ್ಲಿ ಶೇಕಡಾ 56ರಷ್ಟು ಕಿವುಡತನ ಇರೋದು ಪತ್ತೆಯಾಗಿತ್ತು. ಇನ್ನೂ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಲು ಸಾಧ್ಯವಿಲ್ಲ. ಶ್ರವಣ ಯಂತ್ರ ಅಳವಡಿಸಿದ್ರೆ ಕಿವಿ ಕೇಳುತ್ತೆ ಅಂದಿದ್ರು. ವೈದ್ಯರು, ಇಯರ್ ಮೆಷಿನ್ (Ear machine) ಅಗತ್ಯವಿದೆ ಎಂದಿದ್ದೆ ತಡ ಬಿಗ್-3 ತಂಡ, ತಡಮಾಡದೇ ಜಿಲ್ಲಾ ಅಂಗವಿಕಲ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸಿ, ಕಿವಿ ಕೇಳುವ ಯಂತ್ರ ಕೊಡಿಸಿಯೇ ಬಿಟ್ಟಿತು. ಕಿವಿ ಕೇಳದೇ ನೊಂದಿದ್ದ ತಾಯಿ ಮೊಗದಲ್ಲಿ ಎಲ್ಲಿಲ್ಲದ ಸಂತೋಷ ಮೂಡಿದೆ.

ಇದನ್ನೂ ವೀಕ್ಷಿಸಿ:  ಉದ್ಘಾಟನೆಯಾದರೂ ಕ್ರೀಡಾಪಟುಗಳಿಗಿಲ್ಲ ಅಭ್ಯಾಸ ಭಾಗ್ಯ: 66 ಕೋಟಿ ವೆಚ್ಚದ ಹೈಟೆಕ್ ಕ್ರೀಡಾಂಗಣ ಮೂಲೆ ಗುಂಪು..!

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!