ಮಹಿಳೆ ಬದುಕನ್ನೇ ಬದಲಿಸಿದ ಬಿಗ್‌-3: ಬಡ ಶಶಿಕಲಾ ಬದುಕಲ್ಲಿ ಹೊಸ ಬೆಳಕು !

ಮಹಿಳೆ ಬದುಕನ್ನೇ ಬದಲಿಸಿದ ಬಿಗ್‌-3: ಬಡ ಶಶಿಕಲಾ ಬದುಕಲ್ಲಿ ಹೊಸ ಬೆಳಕು !

Published : Sep 12, 2023, 11:11 AM IST

ಇದು ಇದು ಬಿಗ್-3 ಪವರ್, ಆ ಒಂದು ವರದಿಗೆ ಇಡೀ ಕರುನಾಡೇ ಮರುಗಿತ್ತು. 6 ವರ್ಷದಿಂದ ಕತ್ತಲೇ ಕೂಪದಲ್ಲಿದ್ದ ಅಮ್ಮ-ಮಗಳ ನೆರೆವಿಗೆ ಬಂದಿದ್ದೇ ಬಿಗ್- 3. ಹಾಗಿದ್ರೆ ಅವರ ಬದುಕು ಬದಲಾಗಿದ್ದಾದ್ರೂ ಹೇಗೆ?...ಈ ಸ್ಪೆಷಲ್ ರಿಪೋರ್ಟ್ ಇದೆ.
 

ಬಿಗ್-3 ಅಂದ್ರೆ ಹಂಗೇ ನೋಡಿ...ಹಿಡಿದ ಕೆಲಸವನ್ನ ಮುಗಿಸೋವರೆಗೂ ಬಿಡಲ್ಲ... 4 ದಿನಗಳ ಹಿಂದೆ ಬುದ್ಧಿಮಾಂದ್ಯ ಮಗಳ ಜೊತೆ ತಾಯಿ ನರಳಾಟದ ಸುದ್ದಿ ಪ್ರಸಾರ ಮಾಡಲಾಗಿತ್ತು. ಬುದ್ಧಿಮಾಂದ್ಯ ಮಗಳನ್ನು ಸಾಕಲು ತಾಯಿ, ಅವರಿವರ ಮನೆ ಮುಸೂರೆ ತಿಕ್ಕಿ ಜೀವನ ನಡೆಸುತ್ತಿದ್ದಳು. ಇತ್ತ ಕಿವಿ(Ear) ಕೇಳಿಸದೇ ತಾಯಿ ಶಶಿಕಲಾ ಕಂಗಾಲಾಗಿದ್ರು. ಕಿವುಡತನದಿಂದ ಬಳಲುತ್ತಿದ್ದ ಶಶಿಕಲಾ ಪರಿಸ್ಥಿತಿಯನ್ನ ಬಿಗ್-3(BIG 3) ತಂಡವು ಕಣ್ಣಾರೆ ಕಂಡಿತ್ತು. ಇದೀಗ ಶಶಿಕಲಾ ಬದುಕಿನ ಹೊಸ ಅಧ್ಯಾಯಕ್ಕೆ ಬಿಗ್-3 ಕಾರಣವಾಗಿದೆ. ಇದೀಗ ಬಡಮಹಿಳೆ (Woman) ಶಶಿಕಲಾ ಬದುಕಿಗೆ ಹೊಸ ಬೆಳಕು ಮೂಡಿಸಿದೆ ನಿಮ್ಮ ಬಿಗ್-3. ಕಿವುಡತನದಿಂದ ಬಳಲುತ್ತಿದ್ದ ಶಶಿಕಲಾಗೆ ಕೇವಲ ನಾಲ್ಕು ತಾಸಿನಲ್ಲಿ ಬಿಗ್-3 ತಂಡವು ಕಿವುಡುತನದ ಸಮಸ್ಯೆ ಬಗೆಹರಿಸಿದೆ. ಶಶಿಕಲಾರ ಕಿವಿ ಪರೀಕ್ಷೆ ವೇಳೆ ಒಂದು ಕಿವಿಯಲ್ಲಿ 53% ಮತ್ತೊಂದು ಕಿವಿಯಲ್ಲಿ 68 % ಕಿವುಡುತನ ಇರುವುದು ಪತ್ತೆಯಾಗಿತ್ತು. ಒಟ್ಟಾರೆ ಎರಡು ಕಿವಿಯಲ್ಲಿ ಶೇಕಡಾ 56ರಷ್ಟು ಕಿವುಡತನ ಇರೋದು ಪತ್ತೆಯಾಗಿತ್ತು. ಇನ್ನೂ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಲು ಸಾಧ್ಯವಿಲ್ಲ. ಶ್ರವಣ ಯಂತ್ರ ಅಳವಡಿಸಿದ್ರೆ ಕಿವಿ ಕೇಳುತ್ತೆ ಅಂದಿದ್ರು. ವೈದ್ಯರು, ಇಯರ್ ಮೆಷಿನ್ (Ear machine) ಅಗತ್ಯವಿದೆ ಎಂದಿದ್ದೆ ತಡ ಬಿಗ್-3 ತಂಡ, ತಡಮಾಡದೇ ಜಿಲ್ಲಾ ಅಂಗವಿಕಲ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸಿ, ಕಿವಿ ಕೇಳುವ ಯಂತ್ರ ಕೊಡಿಸಿಯೇ ಬಿಟ್ಟಿತು. ಕಿವಿ ಕೇಳದೇ ನೊಂದಿದ್ದ ತಾಯಿ ಮೊಗದಲ್ಲಿ ಎಲ್ಲಿಲ್ಲದ ಸಂತೋಷ ಮೂಡಿದೆ.

ಇದನ್ನೂ ವೀಕ್ಷಿಸಿ:  ಉದ್ಘಾಟನೆಯಾದರೂ ಕ್ರೀಡಾಪಟುಗಳಿಗಿಲ್ಲ ಅಭ್ಯಾಸ ಭಾಗ್ಯ: 66 ಕೋಟಿ ವೆಚ್ಚದ ಹೈಟೆಕ್ ಕ್ರೀಡಾಂಗಣ ಮೂಲೆ ಗುಂಪು..!

25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
24:13ಹಿಂದೂ ಹುಡುಗಿಯರೇ ಹುಷಾರ್​​! ಲವ್​​​ ನೆಪದಲ್ಲಿ ದೈಹಿಕ ಸಂಪರ್ಕ, ಅವನ ಜೇಬಿನಲ್ಲಿ ಸಿಕ್ಕಿದ್ದು ಭ್ರೂಣಹತ್ಯೆ ಮಾತ್ರೆ!
02:04ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ಆಗಮನ ಹಿನ್ನಲೆ, ಭದ್ರತಾ ತಪಾಸಣೆ ನಡುವೆ ಶ್ರೀಗಳಿಗೆ ಸಲ್ಯೂಟ್ ಹೊಡೆದ ಶ್ವಾನ
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
24:50ಮದ್ವೆಯಾದ ವರ್ಷಕ್ಕೆ ಪತ್ನಿಯನ್ನೇ ಕೊಂದುಬಿಟ್ಟನಾ ಪತಿ? 24ರ ಯುವತಿಗೆ ಸತ್ತಮೇಲೂ ಸಿಗಲಿಲ್ಲ ಶಾಂತಿ