ಮಹಿಳೆ ಬದುಕನ್ನೇ ಬದಲಿಸಿದ ಬಿಗ್‌-3: ಬಡ ಶಶಿಕಲಾ ಬದುಕಲ್ಲಿ ಹೊಸ ಬೆಳಕು !

ಮಹಿಳೆ ಬದುಕನ್ನೇ ಬದಲಿಸಿದ ಬಿಗ್‌-3: ಬಡ ಶಶಿಕಲಾ ಬದುಕಲ್ಲಿ ಹೊಸ ಬೆಳಕು !

Published : Sep 12, 2023, 11:11 AM IST

ಇದು ಇದು ಬಿಗ್-3 ಪವರ್, ಆ ಒಂದು ವರದಿಗೆ ಇಡೀ ಕರುನಾಡೇ ಮರುಗಿತ್ತು. 6 ವರ್ಷದಿಂದ ಕತ್ತಲೇ ಕೂಪದಲ್ಲಿದ್ದ ಅಮ್ಮ-ಮಗಳ ನೆರೆವಿಗೆ ಬಂದಿದ್ದೇ ಬಿಗ್- 3. ಹಾಗಿದ್ರೆ ಅವರ ಬದುಕು ಬದಲಾಗಿದ್ದಾದ್ರೂ ಹೇಗೆ?...ಈ ಸ್ಪೆಷಲ್ ರಿಪೋರ್ಟ್ ಇದೆ.
 

ಬಿಗ್-3 ಅಂದ್ರೆ ಹಂಗೇ ನೋಡಿ...ಹಿಡಿದ ಕೆಲಸವನ್ನ ಮುಗಿಸೋವರೆಗೂ ಬಿಡಲ್ಲ... 4 ದಿನಗಳ ಹಿಂದೆ ಬುದ್ಧಿಮಾಂದ್ಯ ಮಗಳ ಜೊತೆ ತಾಯಿ ನರಳಾಟದ ಸುದ್ದಿ ಪ್ರಸಾರ ಮಾಡಲಾಗಿತ್ತು. ಬುದ್ಧಿಮಾಂದ್ಯ ಮಗಳನ್ನು ಸಾಕಲು ತಾಯಿ, ಅವರಿವರ ಮನೆ ಮುಸೂರೆ ತಿಕ್ಕಿ ಜೀವನ ನಡೆಸುತ್ತಿದ್ದಳು. ಇತ್ತ ಕಿವಿ(Ear) ಕೇಳಿಸದೇ ತಾಯಿ ಶಶಿಕಲಾ ಕಂಗಾಲಾಗಿದ್ರು. ಕಿವುಡತನದಿಂದ ಬಳಲುತ್ತಿದ್ದ ಶಶಿಕಲಾ ಪರಿಸ್ಥಿತಿಯನ್ನ ಬಿಗ್-3(BIG 3) ತಂಡವು ಕಣ್ಣಾರೆ ಕಂಡಿತ್ತು. ಇದೀಗ ಶಶಿಕಲಾ ಬದುಕಿನ ಹೊಸ ಅಧ್ಯಾಯಕ್ಕೆ ಬಿಗ್-3 ಕಾರಣವಾಗಿದೆ. ಇದೀಗ ಬಡಮಹಿಳೆ (Woman) ಶಶಿಕಲಾ ಬದುಕಿಗೆ ಹೊಸ ಬೆಳಕು ಮೂಡಿಸಿದೆ ನಿಮ್ಮ ಬಿಗ್-3. ಕಿವುಡತನದಿಂದ ಬಳಲುತ್ತಿದ್ದ ಶಶಿಕಲಾಗೆ ಕೇವಲ ನಾಲ್ಕು ತಾಸಿನಲ್ಲಿ ಬಿಗ್-3 ತಂಡವು ಕಿವುಡುತನದ ಸಮಸ್ಯೆ ಬಗೆಹರಿಸಿದೆ. ಶಶಿಕಲಾರ ಕಿವಿ ಪರೀಕ್ಷೆ ವೇಳೆ ಒಂದು ಕಿವಿಯಲ್ಲಿ 53% ಮತ್ತೊಂದು ಕಿವಿಯಲ್ಲಿ 68 % ಕಿವುಡುತನ ಇರುವುದು ಪತ್ತೆಯಾಗಿತ್ತು. ಒಟ್ಟಾರೆ ಎರಡು ಕಿವಿಯಲ್ಲಿ ಶೇಕಡಾ 56ರಷ್ಟು ಕಿವುಡತನ ಇರೋದು ಪತ್ತೆಯಾಗಿತ್ತು. ಇನ್ನೂ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಲು ಸಾಧ್ಯವಿಲ್ಲ. ಶ್ರವಣ ಯಂತ್ರ ಅಳವಡಿಸಿದ್ರೆ ಕಿವಿ ಕೇಳುತ್ತೆ ಅಂದಿದ್ರು. ವೈದ್ಯರು, ಇಯರ್ ಮೆಷಿನ್ (Ear machine) ಅಗತ್ಯವಿದೆ ಎಂದಿದ್ದೆ ತಡ ಬಿಗ್-3 ತಂಡ, ತಡಮಾಡದೇ ಜಿಲ್ಲಾ ಅಂಗವಿಕಲ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸಿ, ಕಿವಿ ಕೇಳುವ ಯಂತ್ರ ಕೊಡಿಸಿಯೇ ಬಿಟ್ಟಿತು. ಕಿವಿ ಕೇಳದೇ ನೊಂದಿದ್ದ ತಾಯಿ ಮೊಗದಲ್ಲಿ ಎಲ್ಲಿಲ್ಲದ ಸಂತೋಷ ಮೂಡಿದೆ.

ಇದನ್ನೂ ವೀಕ್ಷಿಸಿ:  ಉದ್ಘಾಟನೆಯಾದರೂ ಕ್ರೀಡಾಪಟುಗಳಿಗಿಲ್ಲ ಅಭ್ಯಾಸ ಭಾಗ್ಯ: 66 ಕೋಟಿ ವೆಚ್ಚದ ಹೈಟೆಕ್ ಕ್ರೀಡಾಂಗಣ ಮೂಲೆ ಗುಂಪು..!

22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!