ಮಹಿಳೆ ಬದುಕನ್ನೇ ಬದಲಿಸಿದ ಬಿಗ್‌-3: ಬಡ ಶಶಿಕಲಾ ಬದುಕಲ್ಲಿ ಹೊಸ ಬೆಳಕು !

ಮಹಿಳೆ ಬದುಕನ್ನೇ ಬದಲಿಸಿದ ಬಿಗ್‌-3: ಬಡ ಶಶಿಕಲಾ ಬದುಕಲ್ಲಿ ಹೊಸ ಬೆಳಕು !

Published : Sep 12, 2023, 11:11 AM IST

ಇದು ಇದು ಬಿಗ್-3 ಪವರ್, ಆ ಒಂದು ವರದಿಗೆ ಇಡೀ ಕರುನಾಡೇ ಮರುಗಿತ್ತು. 6 ವರ್ಷದಿಂದ ಕತ್ತಲೇ ಕೂಪದಲ್ಲಿದ್ದ ಅಮ್ಮ-ಮಗಳ ನೆರೆವಿಗೆ ಬಂದಿದ್ದೇ ಬಿಗ್- 3. ಹಾಗಿದ್ರೆ ಅವರ ಬದುಕು ಬದಲಾಗಿದ್ದಾದ್ರೂ ಹೇಗೆ?...ಈ ಸ್ಪೆಷಲ್ ರಿಪೋರ್ಟ್ ಇದೆ.
 

ಬಿಗ್-3 ಅಂದ್ರೆ ಹಂಗೇ ನೋಡಿ...ಹಿಡಿದ ಕೆಲಸವನ್ನ ಮುಗಿಸೋವರೆಗೂ ಬಿಡಲ್ಲ... 4 ದಿನಗಳ ಹಿಂದೆ ಬುದ್ಧಿಮಾಂದ್ಯ ಮಗಳ ಜೊತೆ ತಾಯಿ ನರಳಾಟದ ಸುದ್ದಿ ಪ್ರಸಾರ ಮಾಡಲಾಗಿತ್ತು. ಬುದ್ಧಿಮಾಂದ್ಯ ಮಗಳನ್ನು ಸಾಕಲು ತಾಯಿ, ಅವರಿವರ ಮನೆ ಮುಸೂರೆ ತಿಕ್ಕಿ ಜೀವನ ನಡೆಸುತ್ತಿದ್ದಳು. ಇತ್ತ ಕಿವಿ(Ear) ಕೇಳಿಸದೇ ತಾಯಿ ಶಶಿಕಲಾ ಕಂಗಾಲಾಗಿದ್ರು. ಕಿವುಡತನದಿಂದ ಬಳಲುತ್ತಿದ್ದ ಶಶಿಕಲಾ ಪರಿಸ್ಥಿತಿಯನ್ನ ಬಿಗ್-3(BIG 3) ತಂಡವು ಕಣ್ಣಾರೆ ಕಂಡಿತ್ತು. ಇದೀಗ ಶಶಿಕಲಾ ಬದುಕಿನ ಹೊಸ ಅಧ್ಯಾಯಕ್ಕೆ ಬಿಗ್-3 ಕಾರಣವಾಗಿದೆ. ಇದೀಗ ಬಡಮಹಿಳೆ (Woman) ಶಶಿಕಲಾ ಬದುಕಿಗೆ ಹೊಸ ಬೆಳಕು ಮೂಡಿಸಿದೆ ನಿಮ್ಮ ಬಿಗ್-3. ಕಿವುಡತನದಿಂದ ಬಳಲುತ್ತಿದ್ದ ಶಶಿಕಲಾಗೆ ಕೇವಲ ನಾಲ್ಕು ತಾಸಿನಲ್ಲಿ ಬಿಗ್-3 ತಂಡವು ಕಿವುಡುತನದ ಸಮಸ್ಯೆ ಬಗೆಹರಿಸಿದೆ. ಶಶಿಕಲಾರ ಕಿವಿ ಪರೀಕ್ಷೆ ವೇಳೆ ಒಂದು ಕಿವಿಯಲ್ಲಿ 53% ಮತ್ತೊಂದು ಕಿವಿಯಲ್ಲಿ 68 % ಕಿವುಡುತನ ಇರುವುದು ಪತ್ತೆಯಾಗಿತ್ತು. ಒಟ್ಟಾರೆ ಎರಡು ಕಿವಿಯಲ್ಲಿ ಶೇಕಡಾ 56ರಷ್ಟು ಕಿವುಡತನ ಇರೋದು ಪತ್ತೆಯಾಗಿತ್ತು. ಇನ್ನೂ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಲು ಸಾಧ್ಯವಿಲ್ಲ. ಶ್ರವಣ ಯಂತ್ರ ಅಳವಡಿಸಿದ್ರೆ ಕಿವಿ ಕೇಳುತ್ತೆ ಅಂದಿದ್ರು. ವೈದ್ಯರು, ಇಯರ್ ಮೆಷಿನ್ (Ear machine) ಅಗತ್ಯವಿದೆ ಎಂದಿದ್ದೆ ತಡ ಬಿಗ್-3 ತಂಡ, ತಡಮಾಡದೇ ಜಿಲ್ಲಾ ಅಂಗವಿಕಲ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸಿ, ಕಿವಿ ಕೇಳುವ ಯಂತ್ರ ಕೊಡಿಸಿಯೇ ಬಿಟ್ಟಿತು. ಕಿವಿ ಕೇಳದೇ ನೊಂದಿದ್ದ ತಾಯಿ ಮೊಗದಲ್ಲಿ ಎಲ್ಲಿಲ್ಲದ ಸಂತೋಷ ಮೂಡಿದೆ.

ಇದನ್ನೂ ವೀಕ್ಷಿಸಿ:  ಉದ್ಘಾಟನೆಯಾದರೂ ಕ್ರೀಡಾಪಟುಗಳಿಗಿಲ್ಲ ಅಭ್ಯಾಸ ಭಾಗ್ಯ: 66 ಕೋಟಿ ವೆಚ್ಚದ ಹೈಟೆಕ್ ಕ್ರೀಡಾಂಗಣ ಮೂಲೆ ಗುಂಪು..!

22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
23:26Mysuru Marriage home Tragedy: ಮದುವೆ ಮನೆಯಲ್ಲಿ ಮೂರು ಚಟ್ಟ, ರಾಕ್ಷಸ ಉಲ್ಲಾಸ್ ಗೌಡನ ಕ್ರೌರ್ಯದ ಕಥೆ!
23:26FIR video: ಭೀಮಾತೀರದ ಹಂತಕ ಅಪ್ಪುಗೌಡ ಇಬ್ಬರ ಹತ್ಯೆಗೆ ಸ್ಕೆಚ್ ಹಾಕಿದ್ದ; ಆದ್ರೆ 6 ಜನರ ಕೊಲೆ ಮಾಡಿದ್ದೇಕೆ ಹಂತಕರು?
23:22ಕೇರಳದಿಂದ ಬಂದಿತ್ತು 20 ಲಕ್ಷ, ಪೊಲೀಸರಿಗೆ ಸಿಕ್ಕಿತ್ತು ಸುಳಿವು! ಖೆಡ್ಡಾಗೆ ಬಿದ್ದಿದ್ಹೇಗೆ 'ಖಾಕಿ' ಗ್ಯಾಂಗ್?
24:322 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಕೊಲೆ: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚಿ ಸಿಕ್ಕಿಬಿದ್ದ ಹೆಂಡತಿ!
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?