ಕರಾವಳಿಯಲ್ಲಿ ಹಿಂದೂ ಯುವತಿಯರ ವಿಡಿಯೋ ಕಿಚ್ಚು: SIT ತನಿಖೆಗೆ ಪಟ್ಟು.. ಸಂಘಟನೆಗಳಿಂದ ಪ್ರೊಟೆಸ್ಟ್..!

ಕರಾವಳಿಯಲ್ಲಿ ಹಿಂದೂ ಯುವತಿಯರ ವಿಡಿಯೋ ಕಿಚ್ಚು: SIT ತನಿಖೆಗೆ ಪಟ್ಟು.. ಸಂಘಟನೆಗಳಿಂದ ಪ್ರೊಟೆಸ್ಟ್..!

Published : Aug 04, 2023, 11:16 AM IST

ಹಿಂದೂಯುವತಿಯರ ವಿಡಿಯೋ ವಿವಾದ ಕರಾವಳಿಯಲ್ಲಿ ದೊಡ್ಡ ಕಿಚ್ಚು ಎಬ್ಬಿಸಿದೆ. ಬಿಜೆಪಿ ಪ್ರತಿಭಟನೆ ಬಳಿಕ ಈಗ ಹಿಂದೂಸಂಘಟನೆಗಳು ಹೋರಾಟಕ್ಕೆ ಇಳಿದಿದ್ದು SIT ತನಿಖೆ ನೀಡುವಂತೆ ಆಗ್ರಹಿಸಿದ್ದಾರೆ. ಇದರ ಮಧ್ಯೆಯೇ ಶರಣುಪಂಪ್‌ವೆಲ್ ಕೊಟ್ಟ ಹೇಳಿಕೆ ದೊಡ್ಡ ವಿವಾದವನ್ನೇ ಸೃಷ್ಟಿಸಿದೆ.

ಉಡುಪಿ ನೇತ್ರಾವತಿ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಹಿಂದೂ ಯುವತಿಯರ ವಿಡಿಯೋ ವಿವಾದ(Udupi video case) ದೊಡ್ಡ ಕಿಚ್ಚು ಎಬ್ಬಿಸಿದೆ. ABVP, ಬಿಜೆಪಿ ಪ್ರತಿಭಟನೆ(BJP Protest) ಬಳಿಕ ಈಗ ಹಿಂದೂಸಂಘಟನೆಗಳು ಹೋರಾಟಕ್ಕೆ ಧುಮುಕಿವೆ. ವಿಶ್ವಹಿಂದೂ ಪರಿಷತ್, ಭಜರಂಗದಳದ ಸುಮಾರು 4 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಉಡುಪಿಯಲ್ಲಿ ನಿನ್ನೆ  ಪ್ರತಿಭಟನೆ ಕಹಳೆ ಮೊಳಗಿಸಿದ್ರು. ಮೂರು ಕಿಲೋಮೀಟರ್  ಹಿಂದೂ ಸಂಘಟನೆಯ ಕಾರ್ಯಕರ್ತರು ಬೃಹತ್ ಜಾಥಾ  ಮೂಲಕ ಸರ್ಕಾರದ ವಿರುದ್ಧ ಸಿಟ್ಟು ಹೊರಹಾಕಿದ್ರು. ರಶ್ಮಿ ಸಮಂತ್ ಪ್ರತಿಭಟನಾ ಮುಂಚೂಣಿಯಲ್ಲಿದ್ರೆ, ಶಾಸಕ ಸುನೀಲ್ ಕುಮಾರ್, ಉಡುಪಿ ವಿಧಾಸಭಾ ಕ್ಷೇತ್ರದ ಸಂಘಪರಿವಾರ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ರು. ಪೊಲೀಸ್ ತನಿಖೆಯಲ್ಲಿ ನ್ಯಾಯ ಸಿಗೋಲ್ಲ ಎಸ್‌ಐಟಿಯಿಂದಲೇ ತನಿಖೆ ಮಾಡುವಂತೆ ಆಗ್ರಹಿಸಿದ್ರು. ಬೃಹತ್ ಮೆರವಣಿಗೆ ಬಳಿಕ ಉಡುಪಿ ಕೃಷ್ಣಾಮಠದ ಪಾರ್ಕಿಂಗ್ ಏರಿಯಾದಲ್ಲಿ ಸಮಾವೇಶ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ವಿಎಚ್‌ಪಿ ಮುಖಂಡ ಶರಣು ಪಂಪ್‌ವೆಲ್ (Sharan Pumpwell) ಸೌಟು ಪೊರಕೆ ಹಿಡಿಯುವ ಕೈಗಳು ಮನೆಯ ಮಕ್ಕಳ ರಕ್ಷಣೆಗಾಗಿ ತಲ್ವಾರ್, ಕತ್ತಿಗಳನ್ನ ಹಿಡಿಬೇಕು ಎನ್ನುವ ಮೂಲಕ ಮತ್ತೊಂದು ವಿವಾದ ದೊಡ್ಡ ವಿವಾದ ಹುಟ್ಟುಹಾಕಿದ್ರು.

ಇದನ್ನೂ ವೀಕ್ಷಿಸಿ:  ಶಿವಣ್ಣನಿಗೂ ಇಷ್ಟವಂತೆ ಕಾವಾಲಯ್ಯ ಹಾಡು...ಸಾಂಗ್‌ಗೆ ಹ್ಯಾಟ್ರಿಕ್‌ ಹೀರೋ ಮಸ್ತ್‌ ಡ್ಯಾನ್ಸ್‌

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!