ಶಿಕ್ಷಕರ ಕಿತ್ತಾಟ,ಪೋಷಕರ ಹಠ..ಮಕ್ಕಳಿಗ್ಯಾಕೆ ಶಿಕ್ಷೆ..? ಬಿಇಒ ಬಳಿಕ ಡಿಡಿಪಿಐ ಹಂತಕ್ಕೆ ತಲುಪಿತು ಕ್ಷುಲ್ಲಕ ಜಗಳ..!

ಶಿಕ್ಷಕರ ಕಿತ್ತಾಟ,ಪೋಷಕರ ಹಠ..ಮಕ್ಕಳಿಗ್ಯಾಕೆ ಶಿಕ್ಷೆ..? ಬಿಇಒ ಬಳಿಕ ಡಿಡಿಪಿಐ ಹಂತಕ್ಕೆ ತಲುಪಿತು ಕ್ಷುಲ್ಲಕ ಜಗಳ..!

Published : Nov 21, 2023, 10:21 AM IST

ಮಕ್ಕಳ ವ್ಯಾಸಂಗಕ್ಕೆ ಪೋಷಕರ ಮೊಂಡಾಟವೆ ಮುಳುವಾಗಿದೆ. ಶಿಕ್ಷಕರಿಬ್ಬರ ನಡುವಿನ ಕಿತ್ತಾಟ ವಿದ್ಯಾರ್ಥಿಗಳನ್ನು ಶಾಲೆಯಿಂದ ದೂರ ಉಳಿಯುವಂತೆ ಮಾಡಿದೆ. ಸರ್ಕಾರಿ ಶಾಲೆಯ ಸಮಸ್ಯೆ ಜಿಲ್ಲಾ ಶಿಕ್ಷಣ ಇಲಾಖೆಗೆ ತಲೆನೋವು ತಂದಿಟ್ಟಿದೆ. 
 


ವಿದ್ಯಾರ್ಥಿಗಳ ಜೀವನ ರೂಪಿಸಬೇಕಿದ್ದ ಶಿಕ್ಷರಿಬ್ಬರ ಮಧ್ಯೆ ಮುಸುಕಿನ ಗುದ್ದಾಟ.. ಬೈದು ಬುದ್ಧಿ ಹೇಳಬೇಕಿದ್ದ ಪೋಷಕರ ಹಠ.. ಪರಿಣಾಮ 18 ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.. ಇದು ತುಮಕೂರು ಜಿಲ್ಲೆ ಗೇರಹಳ್ಳಿಯ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ(Government Urdu Primary School) ಕಥೆ. ಈ ಶಾಲೆಯಲ್ಲಿ 1ನೇ ತರಗತಿಯಿಂದ 7ನೇ ತರಗತಿವರೆಗೂ ಸುಮಾರು 125 ವಿದ್ಯಾರ್ಥಿಗಳು(Students) ಓದುತ್ತಿದ್ದಾರೆ. ಅಚ್ಚುಕಟ್ಟಾದ ಕಟ್ಟಡ.. ಮೂಲ ಸೌಕರ್ಯಕ್ಕೇನು ಕೊರತೆ ಇಲ್ಲ.. ಆದ್ರೆ ಭೋದನೆ ಮಾಡಬೇಕಿದ್ದ ಶಿಕ್ಷಕರ(Teachers) ನಡುವೆ ಉದ್ಭವಿಸಿದ ಶೀತಲ ಸಮರ 18 ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಮಾರಕವಾಗಿದೆ. ಶಾಲೆಯ 18 ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷ ಆರಂಭದಲ್ಲಿ ಕರೆಕ್ಟಾಗಿ  ಶಾಲೆಗೆ ಬರ್ತಿದ್ರು. ಆದ್ರೆ ದಸರಾ ಹಬ್ಬ ಮುಗಿದ ಬಳಿಕ ಶಾಲೆಗೆ ಬರ್ತಾನೆ ಇಲ್ಲ.ಕಾರಣ ಕೇಳಿದ್ರೆ ಬೇರೆಯದ್ದೇ ಕತೆ ತೆರೆದುಕೊಳ್ತಿದೆ.. ಕೆಲ ತಿಂಗಳ ಹಿಂದೆ ಕನ್ನಡ ಶಿಕ್ಷಕ ಗೌಸ್‌ಪಿರ್‌ ವಿರುದ್ಧ  ಲೈಂಗಿಕ ದೌರ್ಜನ್ಯ ಆರೋಪ(Sexual assault Allegation) ಕೇಳಿ ಬಂದಿತ್ತು.ಈ ಪ್ರಕರಣದಲ್ಲಿ ಗೌಸ್‌ಪಿರ್‌ನನ್ನು ಅರೆಸ್ಟ್‌ ಕೂಡ ಮಾಡಲಾಗಿತ್ತು. ಆದ್ರೆ ಕೆಲ ಪೋಷಕರು ಮುಖ್ಯಶಿಕ್ಷಕಿ ನೂರ್‌ ಜಾನ್‌ ಪಿತೂರಿಯಿಂದಲೇ  ಗೌಸ್‌ಪಿರ್ ಅಮಾನತಾಗಿದ್ದು ಎಂದು ಆರೋಪಿಸಿದ್ದಾರಂತೆ. ಅಲ್ಲದೆ ನೂರ್‌ರನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ಪಟ್ಟುಹಿಡಿದಿದ್ದು, ಅಲ್ಲಿವರೆಗೂ ತಮ್ಮ ಮಕ್ಕಳನ್ನು ಶಾಲೆ ಕಳುಹಿಸಲ್ಲ ಎಂದು ಹಠ ಹಿಡಿದಿದ್ದಾರಂತೆ. ಇದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.ಶಿಕ್ಷಣ ಇಲಾಖೆ ನಿಯಮದಂತೆ 7 ದಿನ ನಿರಂತರವಾಗಿ ಗೈರಾಗುವಂತಿಲ್ಲ... ಒಂದುವೇಳೆ ಗೈರಾದ್ರೆ ಶಿಕ್ಷಕರೇ ಖುದ್ದು ವಿದ್ಯಾರ್ಥಿಗಳ ಮನೆಗೆ ಭೇಟಿಕೊಟ್ಟು ಸಮಸ್ಯೆ ಆಲಿಸಬೇಕು.ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪೋಷಕರ ಮನವೊಲಿಸಬೇಕು. ಆದರೆ ಈ ಶಾಲೆಯಲ್ಲಿ ನಿಯಮ ಪಾಲನೆಯಾಗಿಲ್ಲ. ಕೊನೆಗೆ ಸ್ಥಳೀಯರು ಸಮಸ್ಯೆ ಬಗ್ಗೆ ತುಮಕೂರು ಬಿಇಒ ಗಮನಕ್ಕೆ ತಂದಿದ್ರು. ಶಾಲೆಗೆ ಭೇಟಿ ಕೊಟ್ಟ ಬಿಇಒ ಪೋಷಕರ ಜೊತೆ ಸಭೆ ನಡೆಸಿ ತಿಳಿ ಹೇಳಿದ್ರು. ಆದರೂ ಪೋಷಕರು ತಮ್ಮ ಹಠ ಬಿಟ್ಟಿಲ್ಲ. ಇದರಿಂದ ಪ್ರಕರಣ ಡಿಡಿಪಿಐ ಹಂತಕ್ಕೆ ತಲುಪಿದೆ.. ಶೀಘ್ರವೇ ಶಾಲೆಗೆ ಭೇಟಿ ಕೊಟ್ಟು ಸಮಸ್ಯೆ ಬಗೆ ಹರಿಸುವುದಾಗಿ ಡಿಡಿಪಿಐ ರಂಗಧಾಮಯ್ಯ ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ:  ವಿಧಾನಸೌಧ ಸಮೀಪದಲ್ಲೇ ಶ್ರೀಗಂಧ ಕಳ್ಳರ ಕೈಚಳಕ: ರಾತ್ರೋ ರಾತ್ರಿ ಮರ ಹೊತ್ತೊಯ್ದ ಖದೀಮರು !

24:04ಭೀಮಾತೀರದ ಮರ್ಡರ್​​ ರಹಸ್ಯ! : ಜಮೀನಿಗಾಗಿ ನಡೆದಿಲ್ಲ 6 ಜನರ ಕೊಲೆ, ಆ ದಂಧೆಯೇ ಕಾರಣವಂತೆ!
23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
26:57ಡಿಕೆ ಶಿವಕುಮಾರ್ ಸಿಎಂ ಪ್ರಮಾಣವಚನಕ್ಕೆ ಫಿಕ್ಸ್ ಮಹಾ ಮುಹೂರ್ತ? ರಾಜಭವನದಲ್ಲಿ ಭರ್ಜರಿ ಸಿದ್ಧತೆ
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
15:11ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
45:33ಕನ್ನಡಪ್ರಭ- ಸುವರ್ಣನ್ಯೂಸ್‌ ವನ್ಯಜೀವಿ ಸಂರಕ್ಷಣಾ ಅಭಿಯಾನ: ಮಲೆ ಮಹದೇಶ್ವರ ಕಾಡಲ್ಲಿ ರಾಯಭಾರಿ ಗಣೇಶ್!
Read more