ಶಿಕ್ಷಕರ ಕಿತ್ತಾಟ,ಪೋಷಕರ ಹಠ..ಮಕ್ಕಳಿಗ್ಯಾಕೆ ಶಿಕ್ಷೆ..? ಬಿಇಒ ಬಳಿಕ ಡಿಡಿಪಿಐ ಹಂತಕ್ಕೆ ತಲುಪಿತು ಕ್ಷುಲ್ಲಕ ಜಗಳ..!

ಶಿಕ್ಷಕರ ಕಿತ್ತಾಟ,ಪೋಷಕರ ಹಠ..ಮಕ್ಕಳಿಗ್ಯಾಕೆ ಶಿಕ್ಷೆ..? ಬಿಇಒ ಬಳಿಕ ಡಿಡಿಪಿಐ ಹಂತಕ್ಕೆ ತಲುಪಿತು ಕ್ಷುಲ್ಲಕ ಜಗಳ..!

Published : Nov 21, 2023, 10:21 AM IST

ಮಕ್ಕಳ ವ್ಯಾಸಂಗಕ್ಕೆ ಪೋಷಕರ ಮೊಂಡಾಟವೆ ಮುಳುವಾಗಿದೆ. ಶಿಕ್ಷಕರಿಬ್ಬರ ನಡುವಿನ ಕಿತ್ತಾಟ ವಿದ್ಯಾರ್ಥಿಗಳನ್ನು ಶಾಲೆಯಿಂದ ದೂರ ಉಳಿಯುವಂತೆ ಮಾಡಿದೆ. ಸರ್ಕಾರಿ ಶಾಲೆಯ ಸಮಸ್ಯೆ ಜಿಲ್ಲಾ ಶಿಕ್ಷಣ ಇಲಾಖೆಗೆ ತಲೆನೋವು ತಂದಿಟ್ಟಿದೆ. 
 


ವಿದ್ಯಾರ್ಥಿಗಳ ಜೀವನ ರೂಪಿಸಬೇಕಿದ್ದ ಶಿಕ್ಷರಿಬ್ಬರ ಮಧ್ಯೆ ಮುಸುಕಿನ ಗುದ್ದಾಟ.. ಬೈದು ಬುದ್ಧಿ ಹೇಳಬೇಕಿದ್ದ ಪೋಷಕರ ಹಠ.. ಪರಿಣಾಮ 18 ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.. ಇದು ತುಮಕೂರು ಜಿಲ್ಲೆ ಗೇರಹಳ್ಳಿಯ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ(Government Urdu Primary School) ಕಥೆ. ಈ ಶಾಲೆಯಲ್ಲಿ 1ನೇ ತರಗತಿಯಿಂದ 7ನೇ ತರಗತಿವರೆಗೂ ಸುಮಾರು 125 ವಿದ್ಯಾರ್ಥಿಗಳು(Students) ಓದುತ್ತಿದ್ದಾರೆ. ಅಚ್ಚುಕಟ್ಟಾದ ಕಟ್ಟಡ.. ಮೂಲ ಸೌಕರ್ಯಕ್ಕೇನು ಕೊರತೆ ಇಲ್ಲ.. ಆದ್ರೆ ಭೋದನೆ ಮಾಡಬೇಕಿದ್ದ ಶಿಕ್ಷಕರ(Teachers) ನಡುವೆ ಉದ್ಭವಿಸಿದ ಶೀತಲ ಸಮರ 18 ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಮಾರಕವಾಗಿದೆ. ಶಾಲೆಯ 18 ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷ ಆರಂಭದಲ್ಲಿ ಕರೆಕ್ಟಾಗಿ  ಶಾಲೆಗೆ ಬರ್ತಿದ್ರು. ಆದ್ರೆ ದಸರಾ ಹಬ್ಬ ಮುಗಿದ ಬಳಿಕ ಶಾಲೆಗೆ ಬರ್ತಾನೆ ಇಲ್ಲ.ಕಾರಣ ಕೇಳಿದ್ರೆ ಬೇರೆಯದ್ದೇ ಕತೆ ತೆರೆದುಕೊಳ್ತಿದೆ.. ಕೆಲ ತಿಂಗಳ ಹಿಂದೆ ಕನ್ನಡ ಶಿಕ್ಷಕ ಗೌಸ್‌ಪಿರ್‌ ವಿರುದ್ಧ  ಲೈಂಗಿಕ ದೌರ್ಜನ್ಯ ಆರೋಪ(Sexual assault Allegation) ಕೇಳಿ ಬಂದಿತ್ತು.ಈ ಪ್ರಕರಣದಲ್ಲಿ ಗೌಸ್‌ಪಿರ್‌ನನ್ನು ಅರೆಸ್ಟ್‌ ಕೂಡ ಮಾಡಲಾಗಿತ್ತು. ಆದ್ರೆ ಕೆಲ ಪೋಷಕರು ಮುಖ್ಯಶಿಕ್ಷಕಿ ನೂರ್‌ ಜಾನ್‌ ಪಿತೂರಿಯಿಂದಲೇ  ಗೌಸ್‌ಪಿರ್ ಅಮಾನತಾಗಿದ್ದು ಎಂದು ಆರೋಪಿಸಿದ್ದಾರಂತೆ. ಅಲ್ಲದೆ ನೂರ್‌ರನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ಪಟ್ಟುಹಿಡಿದಿದ್ದು, ಅಲ್ಲಿವರೆಗೂ ತಮ್ಮ ಮಕ್ಕಳನ್ನು ಶಾಲೆ ಕಳುಹಿಸಲ್ಲ ಎಂದು ಹಠ ಹಿಡಿದಿದ್ದಾರಂತೆ. ಇದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.ಶಿಕ್ಷಣ ಇಲಾಖೆ ನಿಯಮದಂತೆ 7 ದಿನ ನಿರಂತರವಾಗಿ ಗೈರಾಗುವಂತಿಲ್ಲ... ಒಂದುವೇಳೆ ಗೈರಾದ್ರೆ ಶಿಕ್ಷಕರೇ ಖುದ್ದು ವಿದ್ಯಾರ್ಥಿಗಳ ಮನೆಗೆ ಭೇಟಿಕೊಟ್ಟು ಸಮಸ್ಯೆ ಆಲಿಸಬೇಕು.ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪೋಷಕರ ಮನವೊಲಿಸಬೇಕು. ಆದರೆ ಈ ಶಾಲೆಯಲ್ಲಿ ನಿಯಮ ಪಾಲನೆಯಾಗಿಲ್ಲ. ಕೊನೆಗೆ ಸ್ಥಳೀಯರು ಸಮಸ್ಯೆ ಬಗ್ಗೆ ತುಮಕೂರು ಬಿಇಒ ಗಮನಕ್ಕೆ ತಂದಿದ್ರು. ಶಾಲೆಗೆ ಭೇಟಿ ಕೊಟ್ಟ ಬಿಇಒ ಪೋಷಕರ ಜೊತೆ ಸಭೆ ನಡೆಸಿ ತಿಳಿ ಹೇಳಿದ್ರು. ಆದರೂ ಪೋಷಕರು ತಮ್ಮ ಹಠ ಬಿಟ್ಟಿಲ್ಲ. ಇದರಿಂದ ಪ್ರಕರಣ ಡಿಡಿಪಿಐ ಹಂತಕ್ಕೆ ತಲುಪಿದೆ.. ಶೀಘ್ರವೇ ಶಾಲೆಗೆ ಭೇಟಿ ಕೊಟ್ಟು ಸಮಸ್ಯೆ ಬಗೆ ಹರಿಸುವುದಾಗಿ ಡಿಡಿಪಿಐ ರಂಗಧಾಮಯ್ಯ ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ:  ವಿಧಾನಸೌಧ ಸಮೀಪದಲ್ಲೇ ಶ್ರೀಗಂಧ ಕಳ್ಳರ ಕೈಚಳಕ: ರಾತ್ರೋ ರಾತ್ರಿ ಮರ ಹೊತ್ತೊಯ್ದ ಖದೀಮರು !

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
Read more