ಕೊರೋನಾ ಮಧ್ಯೆ ಬರ್ತ್‌ಡೇ ಆಚರಿಸಿಕೊಂಡ ಚಿತ್ರದುರ್ಗದ MP ನಾರಾಯಣಸ್ವಾಮಿ

May 17, 2020, 12:26 PM IST

ತುಮಕೂರು(ಮೇ.17): ಮಾರಕ ಕೊರೋನಾ ಮಧ್ಯೆ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ಚಿತ್ರದುರ್ಗದ ಸಂಸದ ನಾರಾಯಣಸ್ವಾಮಿ ಅವರು ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ.  ತುಮಕೂರು ಜಿಲ್ಲೆ ಶಿರಾ ಪಟ್ಟಣದಲ್ಲಿ ಬರ್ತ್‌ಡೇ ಸೆಲೆಬ್ರೇಷನ್‌ ಮಾಡಿಕೊಂಡಿದ್ದಾರೆ.

ಚಿತ್ರದುರ್ಗ: ತಬ್ಲಿಘಿಗಳ ಜೊತೆ ನಂಟು, ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿ ಸಾವು

ನಿಯಮ ಉಲ್ಲಂಘಿಸಿ ಸಂಸದ ನಾರಾಯಣಸ್ವಾಮಿ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದಕ್ಕೆ ವ್ಯಾಪಕರ ಟೀಕೆ ವ್ಯಕ್ತವಾಗುತ್ತಿದೆ. ಹುಟ್ಟುಹಬ್ಬ ಆಚರಿಸಿಕೊಂಡ ಫೋಟೋವೊಂದು ಲಭ್ಯವಾಗಿದೆ. ಇದರಲ್ಲಿ ಸಾಕಷ್ಟು ಜನರು ಇದ್ದು, ಯಾರೂ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ಇದರಲ್ಲಿಮ ಪೊಲೀಸರು ಕೂಡ ಇದ್ದಾರೆ.

ನಮಗೂ ಮದ್ಯ ಮಾರಾಟಕ್ಕೆ ಅವಕಾಶ ಕೊಡಿ: ಬಾರ್&ರೆಸ್ಟೋರೆಂಟ್ ಮಾಲೀಕರ ಬೇಡಿಕೆ...
"