ಕಾರಿಗೆ ಕಾರು ಟಚ್‌ ಆಗಿದ್ದಕ್ಕೆ ರಂಪಾಟ: ಸಿನಿಮೀಯ ರೀತಿ ಅಪಘಾತಕ್ಕೆ ಬೆಚ್ಚಿಬಿದ್ದ ಸಾರ್ವಜನಿಕರು

Nov 22, 2020, 2:13 PM IST

ಬೆಂಗಳೂರು(ನ.22): ಕಾರಿಗೆ ಕಾರು ಟಚ್‌ ಆಗಿದ್ದಕ್ಕೆ ನಡುರಸ್ತೆಯಲ್ಲೇ ರಂಪಾಟ ಮಾಡಿಕೊಂಡ ಘಟನೆ ಯಲಹಂಕದ ನಾಗೇನಹಳ್ಳಿ ಗೆಟ್‌ ಬಳಿ ನಡೆದಿದೆ. ತಪ್ಪು ಮಾಡಿದ್ದಲ್ಲದೇ ಉದ್ಧಟತನವನ್ನ ಮೆರೆದಿದ್ದಾನೆ ಈ ಭೂಪ. ರಸ್ತೆ ಬದಿಯಲ್ಲಿದ್ದ ಮಹಿಳೆಗೆ ಗುದ್ದಿ, ವ್ಯಕ್ತಿಯನ್ನ ಎಳೆದೊಯ್ದಿದ್ದಾನೆ. ಸಿನಿಮೀಯ ರೀತಿ ಅಪಘಾತಕ್ಕೆ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. 

14 ಟನ್ ಕಬ್ಬು ತುಂಬಿದ ಗಾಡಿ ಎಳೆದವು ಜೋಡೆತ್ತು, ವಿಡಿಯೋ ವೈರಲ್..!

ಒನ್‌ವೇಯಲ್ಲಿ  ಬಂದಿದ್ದಲ್ಲದೆ ಕಿರಿಕ್‌ ಬೇರೆ ತೆಗೆದಿದ್ದಾನೆ ಈ ದುಷ್ಕರ್ಮಿ. ಎದುರು ಬಂದ ಕಾರು ಚಾಲಕನ ಮೇಲೆ ಉದ್ದಟತನ ಮೆರೆದಿದ್ದಾನೆ. ದುಷ್ಕರ್ಮಿಯ ನಡೆಗೆ ಸಾರ್ವಜನಿಕರು ಹಿಡಿ ಶಾಪ ಹಾಕಿದ್ದಾರೆ.