ಹಾವೇರಿಯಲ್ಲಿ ಕಳೆಗಟ್ಟಿದ ರೈತಾಪಿ ವರ್ಗದ ದೀಪಾವಳಿ: ಮಣ್ಣಿನ ಧೂಳಿನೊಳಗೆ ಛಂಗನೇ ಬರೋ ಹೋರಿ ಹಿಡಿಯೋ ಹಬ್ಬ

ಹಾವೇರಿಯಲ್ಲಿ ಕಳೆಗಟ್ಟಿದ ರೈತಾಪಿ ವರ್ಗದ ದೀಪಾವಳಿ: ಮಣ್ಣಿನ ಧೂಳಿನೊಳಗೆ ಛಂಗನೇ ಬರೋ ಹೋರಿ ಹಿಡಿಯೋ ಹಬ್ಬ

Published : Nov 14, 2023, 11:27 AM IST

ದೇಶಾದ್ಯಂತ ದೀಪಾವಳಿ ಸಂಭ್ರಮ ಸಡಗರ ಜೋರಾಗಿದೆ. ವಿವಿಧ ಸಂಪ್ರದಾಯಗಳ ರಾಜ್ಯ, ಜಿಲ್ಲಾವಾರು ಜನರು ಆಚರಣೆ ಮಾಡ್ತಾರೆ.. ಹಾವೇರಿ ಜಿಲ್ಲೆಯಲ್ಲಿ ನಡೆಯೋ ದೀಪಾವಳಿ ಅಪ್ಪಟ ರೈತಾಪಿ ದೀಪಾವಳಿ ಎಲ್ಲೆಡೆ ಮನಸೂರೆಗೊಳಿಸಿದೆ. 
 

ಹಾವೇರಿ ಜಿಲ್ಲೆ ಉತ್ತರ ಕರ್ನಾಟಕದ ಹೆಬ್ಬಾಗಿಲು. ಅಪ್ಪಟ  ಜವಾರಿ ರೈತರ ಜಿಲ್ಲೆ ಹಾವೇರಿ(Haveri). ಇಲ್ಲಿ ಎತ್ತು ಅಥವಾ ಹೋರಿಗಳು ಅಂದರೆ ಬರೀ ಕೃಷಿ ಕೆಲಸಕ್ಕಲ್ಲದೇ ದೀಪಾವಳಿ(Deepavali) ಹಬ್ಬದಲ್ಲೂ ಕೊಬ್ಬರಿ ಹೋರಿ ಓಡಿಸುವ ಸ್ಫರ್ಧೆ(Bull Race) ಮಾಡಿ ಸಂಭ್ರಮಿಸ್ತಾರೆ. ದೀಪಾವಳಿ ಹಾವೇರಿ ಜಿಲ್ಲೆಯಲ್ಲಿ ಪಟಾಕಿ ಹೊಡೆದು ಸಿಹಿ ತಿನ್ನೋ ಹಬ್ಬ ಅಲ್ಲವೇ ಅಲ್ಲ. ಅದು ಮಣ್ಣಿನ ಧೂಳಿನೊಳಗೆ ಛಂಗನೇ ಬರೋ ಹೋರಿ ಹಿಡಿಯೋ ಹಬ್ಬ. ಹಾವೇರಿ ಜಿಲ್ಲೆ ಹೋರಿ ಬೆದರಿಸೋ ಸ್ಪರ್ಧೆಗೆ ಹೆಸರುವಾಸಿ. ಹಾವೇರಿ ಜಿಲ್ಲೆಯ ಕಬ್ಬೂರು, ಕುಳೇನೂರು, ಹೊಸೂರು, ಹಾನಗಲ್, ಹಿರೇನಿಂಗದಹಳ್ಳಿ,  ಹುಲಗಿನಕೊಪ್ಪ, ಮಾರನಬೀಡ, ಚಿಕ್ಕನಿಂಗದಹಳ್ಳಿ ಸೇರಿದಂತೆ ಹಲವು ಕಡೆ ಹೋರಿ ಬೆದರಿಸೋ ಸ್ಪರ್ಧೆ ನಡೆಯುತ್ತೆ. ರೈತರು ಕಷ್ಟಪಟ್ಟು ಸಾಕಿ ಹೋರಿಗಳನ್ನ ಹಬ್ಬಕ್ಕಾಗಿ ತಯಾರು ಮಾಡಿರ್ತಾರೆ. ಭಿನ್ನ-ವಿಭಿನ್ನವಾಗಿ ಹೋರಿಗಳನ್ನ ಅಲಂಕಾರ ಮಾಡಿ ಸ್ಪರ್ಧೆಯಲ್ಲಿ  ಓಡಿಸ್ತಾರೆ.ಕೆಲವೊಂದು ಬಾರಿ ಡೇಂಜರ್ ಅನ್ನಿಸೋ ಕೊಬ್ಬರಿ ಹೋರಿ ಸ್ಪರ್ಧೆಯನ್ನ ಉತ್ತರ ಕರ್ನಾಟಕದ ರೈತರು ಮನರಂಜನೆ ಹಬ್ಬವಾಗಿ ಆಚರಿಸಿಕೊಂಡು ಬರ್ತಿದ್ದಾರೆ. ತಮಿಳುನಾಡಿನಲ್ಲಿ ಜಲ್ಲಿಕಟ್ಟು, ಕರಾವಳಿ ಭಾಗದಲ್ಲಿ ಕೋಣಗಳ ಕಂಬಳದ ರೀತಿಯಲ್ಲಿಯೇ ಹಾವೇರಿ ಜಿಲ್ಲೆಯಲ್ಲಿ ಹೋರಿ ಹಬ್ಬ, ಹಟ್ಟಿ ಹಬ್ಬ ಭಾರೀ ಫೇಮಸ್.

ಇದನ್ನೂ ವೀಕ್ಷಿಸಿ: ಲಂಬಾಣಿ ತಾಂಡಾಗಳಲ್ಲಿ ವಿಭಿನ್ನ ದೀಪಾವಳಿ ಆಚರಣೆ: ಎಮ್ಮೆಗಳನ್ನು ಅಲಂಕರಿಸಿ, ಗಲ್ಲಿಗಲ್ಲಿಯಲ್ಲಿ ಓಡಿಸಿ ಸಂಭ್ರಮ

25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
24:13ಹಿಂದೂ ಹುಡುಗಿಯರೇ ಹುಷಾರ್​​! ಲವ್​​​ ನೆಪದಲ್ಲಿ ದೈಹಿಕ ಸಂಪರ್ಕ, ಅವನ ಜೇಬಿನಲ್ಲಿ ಸಿಕ್ಕಿದ್ದು ಭ್ರೂಣಹತ್ಯೆ ಮಾತ್ರೆ!
02:04ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ಆಗಮನ ಹಿನ್ನಲೆ, ಭದ್ರತಾ ತಪಾಸಣೆ ನಡುವೆ ಶ್ರೀಗಳಿಗೆ ಸಲ್ಯೂಟ್ ಹೊಡೆದ ಶ್ವಾನ
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
24:50ಮದ್ವೆಯಾದ ವರ್ಷಕ್ಕೆ ಪತ್ನಿಯನ್ನೇ ಕೊಂದುಬಿಟ್ಟನಾ ಪತಿ? 24ರ ಯುವತಿಗೆ ಸತ್ತಮೇಲೂ ಸಿಗಲಿಲ್ಲ ಶಾಂತಿ
Read more