BMTC ಅಗ್ನಿ ಅವಘಡ: ಬಸ್‌ನಲ್ಲಿ ಹೋಗೋ ಮುನ್ನ ಈ ಸ್ಟೋರಿ ನೋಡಿ!

BMTC ಅಗ್ನಿ ಅವಘಡ: ಬಸ್‌ನಲ್ಲಿ ಹೋಗೋ ಮುನ್ನ ಈ ಸ್ಟೋರಿ ನೋಡಿ!

Suvarna News   | Asianet News
Published : Feb 06, 2022, 09:47 AM IST

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 15 ದಿನದಲ್ಲಿ 3 ಬಿಎಂಟಿಸಿ ಬಸ್‌ಗಳು (BMTC Bus) ಬೆಂಕಿಗಾಹುತಿಯಾಗಿವೆ. ಪ್ರಯಾಣಿಕರು ಬಸ್‌ನಲ್ಲಿರುವಾಗಲೇ ಬೆಂಕಿ ಹತ್ತಿದ್ದು, ಇದರಿಂದ ಬಿಎಂಟಿಸಿ ಬಸ್ ಹತ್ತಲು ಇದೀಗ ಪ್ರಯಾಣಿಕರು ಭಯ ಪಡುತ್ತಿದ್ದಾರೆ.

ಬೆಂಗಳೂರು (ಫೆ.06): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 15 ದಿನದಲ್ಲಿ 3 ಬಿಎಂಟಿಸಿ ಬಸ್‌ಗಳು (BMTC Bus) ಬೆಂಕಿಗಾಹುತಿಯಾಗಿವೆ. ಪ್ರಯಾಣಿಕರು (Passengers) ಬಸ್‌ನಲ್ಲಿರುವಾಗಲೇ ಬೆಂಕಿ ಹತ್ತಿದ್ದು, ಇದರಿಂದ ಬಿಎಂಟಿಸಿ ಬಸ್ ಹತ್ತಲು ಇದೀಗ ಪ್ರಯಾಣಿಕರು ಭಯ ಪಡುತ್ತಿದ್ದಾರೆ. ಬಿಎಂಟಿಸಿ ಬಸ್‌ಗಳಲ್ಲಿ ಇರುವ ಕಳಪೆ ಬಿಡಿಭಾಗಗಳೇ ಅವಘಡಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ. ಮೆಕ್ಯಾನಿಕ್‌ಗಳಿಂದಲೇ ಅಶೋಕ್ ಲೆ-ಲ್ಯಾಂಡ್ ಕಂಪನಿ ಬಸ್‌ಗಳ ನಿರ್ವಹಣೆಯಾಗುತ್ತಿದ್ದು, ಕಳಪೆ ಬಿಡಿ ಭಾಗಗಳನ್ನು ಅಳವಡಿಸಿ ಎಡವಟ್ಟು ಮಾಡಿದ್ದಾರೆ. ಮಾತ್ರವಲ್ಲದೇ ಅಧಿಕಾರಿಗಳ ಹಣದಾಸೆಗೆ 43ಕ್ಕೂ ಹೆಚ್ಚು ಬಸ್‌ಗಳು ಮೂಲೆ ಸೇರಿವೆ. 

ಕರ್ನಾಟಕದಲ್ಲೇ ಕನ್ನಡಕ್ಕೆ ಅವಮಾನ: ಪಬ್‌ನಲ್ಲಿ ಕನ್ನಡಿಗರ ಮೇಲೆ ಅನ್ಯಭಾಷಿಕರ ಧಮ್ಕಿ..?

ಇನ್ನು, ಬಿಎಂಟಿಸಿ ಪ್ರಯಾಣಿಕರ ರಕ್ಷಣೆಗೆ ಮೀಸಲಿಟ್ಟಿದ್ದ ಪ್ರಥಮ ಚಿಕಿತ್ಸಾ ಪೆಟ್ಟಿಗೆ (First Aid Box) ಮಂಗಮಾಯವಾಗಿದೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್ ನಡೆಸಿದ್ದು, ಈ ಸಂದರ್ಭದಲ್ಲಿ ಬಿಎಂಟಿಸಿ ಬಂಡವಾಳ ಬಯಲಾಗಿದೆ. ರೂಲ್ಸ್ ಪ್ರಕಾರ ಬಿಎಂಟಿಸಿ ಬಸ್‌ನಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇರಲೇಬೇಕು. ಆದರೆ ಸಾವಿರಾರು ಜನರು ಪ್ರಯಾಣಿಸುವ ಬಸ್‌ನಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇಲ್ಲ. ಕೆಲವು ಬಸ್‌ಗಳಲ್ಲಿ ಪೆಟ್ಟಿಗೆ ಇದ್ದರೂ ಕಾಟನ್, ಬ್ಯಾಂಡೇಜ್ ಸೇರಿದಂತೆ ಬೇಕಾಗಿರುವ ವಸ್ತುಗಳು ಸಿಗುವುದಿಲ್ಲ. ಬಾಕ್ಸ್‌ಗಳನ್ನು ತೆರೆದು ನೋಡಿದರೆ ಹಳೇ ಬಟ್ಟೆಗಳ ಪೀಸ್‌ಗಳು ಸಿಗುತ್ತವೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more