BMTC ಅಗ್ನಿ ಅವಘಡ: ಬಸ್‌ನಲ್ಲಿ ಹೋಗೋ ಮುನ್ನ ಈ ಸ್ಟೋರಿ ನೋಡಿ!

BMTC ಅಗ್ನಿ ಅವಘಡ: ಬಸ್‌ನಲ್ಲಿ ಹೋಗೋ ಮುನ್ನ ಈ ಸ್ಟೋರಿ ನೋಡಿ!

Suvarna News   | Asianet News
Published : Feb 06, 2022, 09:47 AM IST

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 15 ದಿನದಲ್ಲಿ 3 ಬಿಎಂಟಿಸಿ ಬಸ್‌ಗಳು (BMTC Bus) ಬೆಂಕಿಗಾಹುತಿಯಾಗಿವೆ. ಪ್ರಯಾಣಿಕರು ಬಸ್‌ನಲ್ಲಿರುವಾಗಲೇ ಬೆಂಕಿ ಹತ್ತಿದ್ದು, ಇದರಿಂದ ಬಿಎಂಟಿಸಿ ಬಸ್ ಹತ್ತಲು ಇದೀಗ ಪ್ರಯಾಣಿಕರು ಭಯ ಪಡುತ್ತಿದ್ದಾರೆ.

ಬೆಂಗಳೂರು (ಫೆ.06): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 15 ದಿನದಲ್ಲಿ 3 ಬಿಎಂಟಿಸಿ ಬಸ್‌ಗಳು (BMTC Bus) ಬೆಂಕಿಗಾಹುತಿಯಾಗಿವೆ. ಪ್ರಯಾಣಿಕರು (Passengers) ಬಸ್‌ನಲ್ಲಿರುವಾಗಲೇ ಬೆಂಕಿ ಹತ್ತಿದ್ದು, ಇದರಿಂದ ಬಿಎಂಟಿಸಿ ಬಸ್ ಹತ್ತಲು ಇದೀಗ ಪ್ರಯಾಣಿಕರು ಭಯ ಪಡುತ್ತಿದ್ದಾರೆ. ಬಿಎಂಟಿಸಿ ಬಸ್‌ಗಳಲ್ಲಿ ಇರುವ ಕಳಪೆ ಬಿಡಿಭಾಗಗಳೇ ಅವಘಡಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ. ಮೆಕ್ಯಾನಿಕ್‌ಗಳಿಂದಲೇ ಅಶೋಕ್ ಲೆ-ಲ್ಯಾಂಡ್ ಕಂಪನಿ ಬಸ್‌ಗಳ ನಿರ್ವಹಣೆಯಾಗುತ್ತಿದ್ದು, ಕಳಪೆ ಬಿಡಿ ಭಾಗಗಳನ್ನು ಅಳವಡಿಸಿ ಎಡವಟ್ಟು ಮಾಡಿದ್ದಾರೆ. ಮಾತ್ರವಲ್ಲದೇ ಅಧಿಕಾರಿಗಳ ಹಣದಾಸೆಗೆ 43ಕ್ಕೂ ಹೆಚ್ಚು ಬಸ್‌ಗಳು ಮೂಲೆ ಸೇರಿವೆ. 

ಕರ್ನಾಟಕದಲ್ಲೇ ಕನ್ನಡಕ್ಕೆ ಅವಮಾನ: ಪಬ್‌ನಲ್ಲಿ ಕನ್ನಡಿಗರ ಮೇಲೆ ಅನ್ಯಭಾಷಿಕರ ಧಮ್ಕಿ..?

ಇನ್ನು, ಬಿಎಂಟಿಸಿ ಪ್ರಯಾಣಿಕರ ರಕ್ಷಣೆಗೆ ಮೀಸಲಿಟ್ಟಿದ್ದ ಪ್ರಥಮ ಚಿಕಿತ್ಸಾ ಪೆಟ್ಟಿಗೆ (First Aid Box) ಮಂಗಮಾಯವಾಗಿದೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್ ನಡೆಸಿದ್ದು, ಈ ಸಂದರ್ಭದಲ್ಲಿ ಬಿಎಂಟಿಸಿ ಬಂಡವಾಳ ಬಯಲಾಗಿದೆ. ರೂಲ್ಸ್ ಪ್ರಕಾರ ಬಿಎಂಟಿಸಿ ಬಸ್‌ನಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇರಲೇಬೇಕು. ಆದರೆ ಸಾವಿರಾರು ಜನರು ಪ್ರಯಾಣಿಸುವ ಬಸ್‌ನಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇಲ್ಲ. ಕೆಲವು ಬಸ್‌ಗಳಲ್ಲಿ ಪೆಟ್ಟಿಗೆ ಇದ್ದರೂ ಕಾಟನ್, ಬ್ಯಾಂಡೇಜ್ ಸೇರಿದಂತೆ ಬೇಕಾಗಿರುವ ವಸ್ತುಗಳು ಸಿಗುವುದಿಲ್ಲ. ಬಾಕ್ಸ್‌ಗಳನ್ನು ತೆರೆದು ನೋಡಿದರೆ ಹಳೇ ಬಟ್ಟೆಗಳ ಪೀಸ್‌ಗಳು ಸಿಗುತ್ತವೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
Read more