BIG 3: ಶಿಕ್ಷಣದ ಕ್ರಾಂತಿ, ಬಡವರ ಸೇವೆ ಹಾಗೂ ಬಿಸಿಲು ಮ್ಯಾನ್: ಇಲ್ಲಿದ್ದಾರೆ ರಿಯಲ್ ಹೀರೋಗಳು

BIG 3: ಶಿಕ್ಷಣದ ಕ್ರಾಂತಿ, ಬಡವರ ಸೇವೆ ಹಾಗೂ ಬಿಸಿಲು ಮ್ಯಾನ್: ಇಲ್ಲಿದ್ದಾರೆ ರಿಯಲ್ ಹೀರೋಗಳು

Published : Jan 14, 2023, 01:20 PM ISTUpdated : Jan 14, 2023, 01:33 PM IST

ಬೆಂಗಳೂರಿನ ಬಿಸಿಲು ಮ್ಯಾನ್‌ ಎಂದೇ ಕರೆಯಲ್ಪಡುವ ಇಂದ್ರೇಶ್‌ ಕುಮಾರ್‌, ಬಹಳ ಕಡಿಮೆ ದರದಲ್ಲಿ ಲಿವರ್‌ ಕಸಿ ಮಾಡಿ ಬಡವರ ಸೇವೆ ಮಾಡುವ  ಡಾ. ನಾಗೇಶ್ ಹಾಗೂ ಕನಸು ಗ್ರಂಥಾಲಯ ಶುರುಮಾಡಿ ವಿದ್ಯಾರ್ಥಿಗಳಿಗೆ ದಾರಿದೀಪವಾಗಿರುವ ಪೊಲೀಸ್ ಅಧಿಕಾರಿ ಪ್ರಕಾಶ್‌ ಬಣಕಾರ್ ಈ ವಾರದ ಬಿಗ್‌ 3 ಹೀರೋಗಳು

ಬೆಂಗಳೂರಿನ ಶ್ರೀನಗರದ ನಿವಾಸಿ ಇಂದ್ರೇಶ್‌, ಬರಿಗಣ್ಣಿನಿಂದ ದಿನಪೂರ್ತಿ ಸೂರ್ಯನನ್ನು ನೋಡುತ್ತಾರೆ. ಸೂರ್ಯನನ್ನ ನಡು ಬಿಸಿಲಿನಲ್ಲೂ ನೋಡುವ ಇಂದ್ರೇಶ್ ಸಾಧನೆ ಎಲ್ಲರು ಬೆಚ್ಚುವಂತದ್ದು. ಇನ್ನು ಡಾ. ನಾಗೇಶ್  ವಿಕ್ಟೋರಿಯಾ ಗ್ಯಾಸ್ಟ್ರೋಎಂಟರಾಲಜಿ ಆಸ್ಪತ್ರೆಯಲ್ಲಿ ಲಿವರ್ ಟ್ರಾನ್ಸ್ ಪ್ಲಾಂಟ್ ಮಾಡಿಸಿಕೊಂಡ್ರೆ ಕೇವಲ 1ಲಕ್ಷದಲ್ಲಿ ಚಿಕಿತ್ಸೆ ಮುಗಿದೇ ಹೋಗುತ್ತೆ. ಇನ್ನು ಬಿಪಿಎಲ್ ಕಾರ್ಡ್'ದಾರರು ಕೇವಲ 25 ಸಾವಿರ ಹಾಗೂ ಎಸ್ ಸಿ/ಎಸ್ಟಿ ಸಮುದಾಯಕ್ಕೆ ಉಚಿತ ಚಿಕಿತ್ಸೆ ನೀಡಲಾಗುತ್ತೆ. ಇದಕ್ಕೆ ಕಾರಣ ಡಾ. ನಾಗೇಶ್. ಅದಕ್ಕೆ ಅವರು ಬಡವರ ಡಾಕ್ಟರ್ ಅನ್ನಿಸಿಕೊಂಡಿದ್ದಾರೆ. ಇನ್ನು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ನಾಗರಮಡುವು ಗ್ರಾಮದಲ್ಲಿ ಅಲ್ಲಿ ಶಿಕ್ಷಣದ ಕ್ರಾಂತಿ ಆರಂಭವಾಗಿದೆ. ಇದಕ್ಕೆ ಕಾರಣ ಪಿಎಸ್ಐ ಪ್ರಕಾಶ್ ಬಣಕಾರ್. ಅವರು ಇದೇ ಗ್ರಾಮದಲ್ಲಿ ಓದಿ ಈಗ ಬೆಟಗೇರಿ ಪೊಲೀಸ್ ಸ್ಟೇಷನ್ ಪಿಎಸ್ಐ ಆಗಿದಾರೆ. ತಮ್ಮದೇ ಸ್ನೇಹಿತರ ಬಳಗ ಕಟ್ಕೊಂಡು 2019 ರಲ್ಲಿ ಕನಸು ಅನ್ನೋ ಲೈಬ್ರರಿ ಆರಂಭಿಸಿದ್ದಾರೆ. ಸಿಟಿಯಲ್ಲಿ ಸಿಗದ ಅಪರೂಪದ ಪುಸ್ತಕಗಳು ಇಲ್ಲಿ ಸಿಗುತ್ತವೆ.

ಸ್ಯಾಂಟ್ರೋ ರವಿ ಸಿಗಲು ಮೊದಲ ಪತ್ನಿ ಕಾರಣ: ಇಲ್ಲಿದೆ ಬಂಧನದ ರೋಚಕ ಕಥೆ

01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
Read more