ಕೊರೋನಾ ಭೀತಿ: ಜಿಂದಾಲ್‌ ನೌಕರರನ್ನು ಗ್ರಾಮಕ್ಕೆ ಬಿಡದ ಜನರು

Jun 13, 2020, 2:34 PM IST

ಬಳ್ಳಾರಿ(ಜೂ.13): ದಿನದಿಂದ ದಿನಕ್ಕೆ ಜಿಲ್ಲೆಯ ಜಿಂದಾಲ್‌ ಕಾರ್ಖಾನೆಯಲ್ಲಿ ಕೊರೋನಾ ವೈರಸ್‌ ಪ್ರಕರಣಗಳು ಹೆಚ್ಚುತ್ತಲೇ ಇದೆ. ಹೀಗಾಗಿ ಜಿಂದಾಲ್‌ ಇದೀಗ ಕೊರೋನಾ  ಕಾರ್ಖಾನೆಯಾಗಿ ಮಾರ್ಪಡುತ್ತಿದೆ. ಇದರಿಂದ ಜಿಲ್ಲೆಯ ಜನರು ಭಯದಲ್ಲೇ ಜೀವನ ಸಾಗಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. 

ಅಧಿಕಾರಿಗಳ ಬೇಜವಾಬ್ದಾರಿ; ನೆರೆ ಸಂತ್ರಸ್ಥರು ಹೈರಾಣು

ಜಿಂದಾಲ್‌ ಕಂಪನಿಯ ನೌಕರರನ್ನ ಗ್ರಾಮಕ್ಕೆ ಬಾರದಂತೆ ಜನರು ತಡೆಯೊಡ್ಡಿದ್ದಾರೆ. ಸುತ್ತ ಮುತ್ತ ಗ್ರಾಮಗಳಲ್ಲಿ ಡಂಗೂರ ಸಾರುವ ಮೂಲಕ ಜಿಂದಾಲ್‌ ಕಂಪನಿಯ ನೌಕರರನ್ನು ಊರೊಳಗಡೆ ಕರೆದುಕೊಳ್ಳಬೇಡಿ ಎಂದು ತಿಳಿ ಹೇಳಿದ್ದಾರೆ.