Suvarna Special: ಏನದು 20 ವರ್ಷಗಳ ಸೇಡಿನ ಕಥೆ? ನಾರಾ ರೆಡ್ಡಿ, ಗಾಲಿ ರೆಡ್ಡಿ..ದಶಕಗಳ ದ್ವೇಷಚರಿತ್ರೆ!

Suvarna Special: ಏನದು 20 ವರ್ಷಗಳ ಸೇಡಿನ ಕಥೆ? ನಾರಾ ರೆಡ್ಡಿ, ಗಾಲಿ ರೆಡ್ಡಿ..ದಶಕಗಳ ದ್ವೇಷಚರಿತ್ರೆ!

Published : Jan 05, 2026, 11:26 PM IST

ಬಳ್ಳಾರಿಯಲ್ಲಿ ಗಣಿಧಣಿ ರೆಡ್ಡಿ ಸಹೋದರರು ಮತ್ತು ನಾರಾ ಭರತ್ ರೆಡ್ಡಿ ಬಣದ ನಡುವಿನ ರಾಜಕೀಯ ದ್ವೇಷವು ಶೂಟೌಟ್ ಹಂತಕ್ಕೆ ತಲುಪಿದೆ. ಬ್ಯಾನರ್ ವಿಚಾರಕ್ಕೆ ಶುರುವಾದ ಈ ಸಂಘರ್ಷದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.

ಬೆಂಗಳೂರು (ಜ.5): ಬಳ್ಳಾರಿಯ ರಾಜಕೀಯ ಅಖಾಡ ಅಂದ್ರೆ ಅಲ್ಲಿ ಬರೀ ಮತಗಳ ಲೆಕ್ಕಾಚಾರ ಇರಲ್ಲ, ಬದಲಿಗೆ ರಕ್ತದ ವಾಸನೆ ಇರುತ್ತೆ. ಒಂದು ಕಡೆ ಗಣಿಧಣಿ ಗಾಲಿ ಜನಾರ್ದನ ರೆಡ್ಡಿ ಸಹೋದರರು, ಮತ್ತೊಂದು ಕಡೆ ನಾರಾ ಸೂರ್ಯನಾರಾಯಣ ರೆಡ್ಡಿ ಮತ್ತು ಭರತ್ ರೆಡ್ಡಿ ಜೋಡಿ. 

ಬಳ್ಳಾರಿ ಈಗ 'ಗುಂಡು-ಗೂಂಡಾ'ಗಳ ರಿಪಬ್ಲಿಕ್: 'ಜನಾರ್ದನ ರೆಡ್ಡಿ ಕೊಲೆಗೆ ಸಂಚು ನಡೆದಿದೆ' ಆರ್. ಅಶೋಕ ಆರೋಪ

ಹಿಂದೆ ರೆಡ್ಡಿ ಬ್ರದರ್ಸ್ ವಿರುದ್ಧ ತೊಡೆ ತಟ್ಟಿ ನಿಂತಿದ್ದ ಬಳ್ಳಾರಿ ಕಟ್ಟಾಳು ಈ ಸೂರ್ಯನಾರಾಯಣ ರೆಡ್ಡಿ. ಇವರ ನಡುವಿನ ದ್ವೇಷ ಈಗ ಶೂಟೌಟ್ ಹಂತಕ್ಕೆ ಬಂದು ತಲುಪಿದೆ. ಸಣ್ಣದೊಂದು ಬ್ಯಾನರ್ ವಿಚಾರಕ್ಕೆ ಶುರುವಾದ ಕಿಡಿ, ಈಗ ಒಬ್ಬನ ಜೀವವನ್ನೇ ಬಲಿ ಪಡೆದಿದೆ.

ಬಳ್ಳಾರಿ ಈಗ ಬೂದಿ ಮುಚ್ಚಿದ ಕೆಂಡದಂತಿದೆ. ಈ ಹಲ್ಲೆ ಆಕಸ್ಮಿಕವೋ ಅಥವಾ ಮೊದಲೇ ಪ್ಲಾನ್ ಮಾಡಿದ್ದ ಸ್ಕೆಚ್ಚೋ? ಸಂಘರ್ಷದ ಹಿಂದೆ ಅಡಗಿರುವ ರಹಸ್ಯವೇನು?  ಗಣಿನಾಡಿನ ಶೂಟೌಟ್ ಪ್ರಕರಣ ಈಗ ಹತ್ತಾರು ಅನುಮಾನಗಳಿಗೆ ಹಾದಿ ಮಾಡಿಕೊಟ್ಟಿದೆ. ಶೂಟೌಟ್ ನಡೆದಿದ್ದು ಯಾರ ಮೇಲೆ? ಸ್ವತಃ ಜನಾರ್ದನ ರೆಡ್ಡಿ ಅವರನ್ನೇ ಟಾರ್ಗೆಟ್ ಮಾಡಲಾಗಿತ್ತಾ? ಆದರೆ ಈ ಆರೋಪವನ್ನು ಶಾಸಕ ನಾರಾ ಭರತ್ ರೆಡ್ಡಿ ಕಟುವಾಗಿ ಅಲ್ಲಗಳೆದಿದ್ದಾರೆ.
 

26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
15:11ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
45:33ಕನ್ನಡಪ್ರಭ- ಸುವರ್ಣನ್ಯೂಸ್‌ ವನ್ಯಜೀವಿ ಸಂರಕ್ಷಣಾ ಅಭಿಯಾನ: ಮಲೆ ಮಹದೇಶ್ವರ ಕಾಡಲ್ಲಿ ರಾಯಭಾರಿ ಗಣೇಶ್!
26:32ದೆಹಲಿ ಗಲಭೆ ಸಂಚುಕೋರನ ಪರ ಬೆಂಗಳೂರಲ್ಲಿ ವಿಚಾರ ಸಂಕಿರಣ: ಮಾಸ್ಟರ್​ ಮೈಂಡ್​ ಹೆಸರಲ್ಲಿ ಕಾರ್ಯಕ್ರಮ ಬೇಕಿತ್ತಾ?
25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
Read more