ಆಂಧ್ರಕ್ಕೆ ಸಮರ್ಪಕ ನೀರು ರಾಜ್ಯದ ರೈತರಿಗೆ ಕಣ್ಣೀರು: ಮೆಣಸಿನಕಾಯಿ, ಹತ್ತಿ ಬೆಳೆ ಉಳಿಸಿಕೊಳ್ಳಲು ರೈತರ ಪರದಾಟ

ಆಂಧ್ರಕ್ಕೆ ಸಮರ್ಪಕ ನೀರು ರಾಜ್ಯದ ರೈತರಿಗೆ ಕಣ್ಣೀರು: ಮೆಣಸಿನಕಾಯಿ, ಹತ್ತಿ ಬೆಳೆ ಉಳಿಸಿಕೊಳ್ಳಲು ರೈತರ ಪರದಾಟ

Published : Oct 14, 2023, 11:02 AM IST

ಕಾವೇರಿ ಸಂಘರ್ಷವಲ್ಲದೇ ತುಂಗಭದ್ರಾ ಸಂಘರ್ಷವೂ ತಲೆದೂರಿಗೆ, ರೈತರು ತಮ್ಮ ಬೆಳೆಗೆ ನೀರಿಲ್ಲದೇ ತೆಲಂಗಾಣ ಕೋಟ ನೀರನ್ನೇ ಕೊಟ್ಟು ನಮ್ಮ ಉಳಿಸಿ ಎಂದು ಸರ್ಕಾರದ ಮೊರೆ ಹೋಗಿದ್ದಾರೆ.
 

ರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆ ರೈತರಿಗೆ ಕಣ್ಣಿರು ತರಿಸಿದೆ. ಒಂದ್ಕಡೆ ಮಳೆ ಇಲ್ಲದೆ ಬೆಳೆ ಇಲ್ಲ, ಇನ್ನೊಂದ್ಕಡೆ ಡ್ಯಾಂನಲ್ಲಿ ನೀರಿಲ್ಲ, ಈ ನಡುವೆ ಮೆಣಸಿನಕಾಯಿ ಮತ್ತು ಹತ್ತಿ ಬೆಳೆ ಉಳಿಸಿಕೊಳ್ಳಲು ಬಳ್ಳಾರಿ ರೈತರು ಹರಸಾಹಸ ಪಡುತ್ತಿದ್ದಾರೆ. ತುಂಗಭದ್ರಾ ಜಲಾಶಯದಿಂದ ನವೆಂಬರ್ 10ರವರೆಗೂ ಎಚ್ಎಲ್ಸಿ ಕಾಲುವೆಗೆ ನೀರು ಬಿಡೋದಾಗಿ ಸರ್ಕಾರ ಹೇಳಿದೆ. ಆದ್ರೆ ನವೆಂಬರ್ 10ರ ನಂತರ ಸರ್ಕಾರ ನೀರು ಬಿಡದೇ ಹೋದರೆ ಬೆಳೆ ಹಾಳಾಗುತ್ತದೆ. ನವೆಂಬರ್ 30ರವರೆಗೂ ನೀರು ಬಿಡಿ ಎನ್ನುತ್ತಿದ್ದಾರೆ ರೈತರು. ಸದ್ಯ ಜಲಾಶಯದಲ್ಲಿ ಕೇವಲ 48 ಟಿಎಂಸಿ ನೀರಿದೆ. ಹಿಂಗಾರು ಮಳೆ ಏನಾದ್ರೂ ಚೆನ್ನಾಗಿ ಬಂದ್ರೇ, ಮುಂಬರುವ ಬೇಸಿಗೆಯವರೆಗೂ ಕುಡಿಯುವದಕ್ಕೆ ಮತ್ತು ಬೆಳೆಗೆ ಯಾವುದೇ ಸಮಸ್ಯೆಯಾಗಲ್ಲ. ಹಿಂಗಾರು ಮಳೆ ಕೈಬಿಟ್ಟರೆ ಬೆಳೆಗೆ ನೀರು ಬಿಡೋದಿರಲಿ, ಕುಡಿಯುವ ನೀರಿಗೂ ಸಮಸ್ಯೆಯಾಗುತ್ತದೆ. ರಾಜ್ಯದ ಬಳ್ಳಾರಿ, ಕೊಪ್ಪಳ,ವಿಜಯನಗರ ಮತ್ತು ರಾಯಚೂರು ಸೇರಿದಂತೆ ಕರ್ನೂಲ್, ಅನಂತಪುರ ಸೇರಿದಂತೆ ಹಲವು ಜಿಲ್ಲೆಗಳು ಕುಡಿಯುವ ನೀರಿಗೆ ತುಂಗಭಧ್ರ ಜಲಾಶವೇ ಆಧಾರವಾಗಿದೆ. ಸದ್ಯ ತೆಲಂಗಾಣದ ಕೋಟಾದ ಮೂರುವರೆ ಟಿಎಂಸಿ ಮಾತ್ರ ಇದೆ. ಹೀಗಾಗಿ ಆಂಧ್ರ-ತೆಲಂಗಾಣ ಸಚಿವರ ಜೊತೆ ಮಾತನಾಡಿ ಆ ನೀರು ನಮಗೆ ನೀಡಿ ಎನ್ನುತ್ತಿದ್ದಾರೆ ಬಳ್ಳಾರಿ ರೈತರು. ತೆಲಂಗಾಣ ಕೋಟಾದ ಮೂರುವರೆ ಟಿಎಂಸಿ ನೀರು ಹಂತ ಹಂತವಾಗಿ ಹೆಚ್ಎಲ್ಸಿ ಕಾಲುವೆಗೆ ಬಿಡೋದು ಅನಿವಾರ್ಯವಾಗಿದೆ. ನೀರು ಬಿಟ್ಟರೇ, ಕೇವಲ ಕರ್ನಾಟಕವಷ್ಟೇ ಅಲ್ಲದೇ ಆಂಧ್ರ ಪ್ರದೇಶ ರೈತರ ಬೆಳೆ ಉಳಿಯುತ್ತದೆ. ಈ ಬಗ್ಗೆ ಜನಪ್ರತಿನಿಧಿಗಳು ಮನಸ್ಸು ಮಾಡಬೇಕಿದೆ ಎನ್ನುತ್ತಿದ್ದಾರೆ ರೈತರು.

ಇದನ್ನೂ ವೀಕ್ಷಿಸಿ: ಕೆಇಎ ಬಳಿ ಕಾದು ಕುಳಿತಿದ್ದ ವಿದ್ಯಾರ್ಥಿಗಳಿಗೆ ಸರ್‌ಪ್ರೈಸ್‌: ಸಮಸ್ಯೆ ಆಲಿಸಿದ ಸಚಿವ ಎಂ.ಸಿ. ಸುಧಾಕರ್‌

03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
Read more