ಬೆಂಗಳೂರಿನಲ್ಲಿ ಯೋಗಿಗಾಗಿ ಹರಕೆ ಹೊತ್ತಿದ್ದ ರಾಮಭಕ್ತರ ವಿಜಯೋತ್ಸವ

Mar 11, 2022, 7:13 PM IST

ಬೆಂಗಳೂರು, (ಮಾ.11): ಉತ್ತರ ಪ್ರದೇಶದಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದ ಹಿನ್ನಲೆ ಬೆಂಗಳೂರಿನ ಹಾನೇಕಲ್ ಶ್ರೀರಾಮ ಭಕ್ತ ಮಂಜುನಾಥ್ ನೇತೃತ್ವದಲ್ಲಿ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. 

ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಯೋಗಿ ಮುಖ್ಯಮಂತ್ರಿಯಾಗಲಿ ಎಂದು ರಾಮಭಕ್ತ ಮಂಜುನಾಥ್ ಅವರು 320 ಕಿಲೋ ಮೀಟರ್ ಪಾದಯಾತ್ರೆ ಮಾಡಿ ಧರ್ಮಸ್ಥಳದಲ್ಲಿ ಪೂಜೆ ಸಲ್ಲಿಸಿದ್ದರು. ಇದೀಗ ಉತ್ತರ ಪ್ರದೇಶದಲ್ಲಿ ಬಿಜೆಪಿ ಬಹುಮತ ಪಡೆದುಕೊಂಡಿದ್ದು,  ಯೋಗಿ ಮತ್ತೊಮ್ಮೆ ಸಿಎಂ ಆಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಯೋಗಿಗಾಗಿ ಹರಕೆ ಹೊತ್ತಿದ್ದ ರಾಮಭಕ್ತರು ವಿಜಯೋತ್ಸವ ಆಚರಿಸಿದರು.