ಬೆಂಗಳೂರಿನಲ್ಲಿ ಬಲಿ ಪಡೆಯಲು ಕಾಯ್ತಿದೆ 11,361 ರಸ್ತೆ ಗುಂಡಿಗಳು !

ಬೆಂಗಳೂರಿನಲ್ಲಿ ಬಲಿ ಪಡೆಯಲು ಕಾಯ್ತಿದೆ 11,361 ರಸ್ತೆ ಗುಂಡಿಗಳು !

Published : Oct 19, 2023, 11:35 AM IST

ಬೆಂಗಳೂರಿನಲ್ಲಿ ಕಳಪೆ ರಸ್ತೆ ಕಾಮಗಾರಿಯಿಂದ ರಸ್ತೆ ಗುಂಡಿ ಹೆಚ್ಚಾಗ್ತಿವೆ. ಎಷ್ಟು ಗುಂಡಿ ಮುಚ್ಚಿದ್ರು ಮೂರೇ ದಿನಕ್ಕೆ ಬಾಯ್ತೆರೆಯುತ್ತವೆ. ರಸ್ತೆ ಗುಂಡಿ ಮುಚ್ಚಲು ಈಗ ಬಿಬಿಎಂಪಿ ಮುಖ್ಯ ಆಯುಕ್ತರು ಗುಡುವು ನೀಡಿದ್ದಾರೆ. ನವೆಂಬರ್ 30ರ ಒಳಗಡೆ ಮೇಜರ್ ರಸ್ತೆಗಳ ಗುಂಡಿ ಮುಚ್ಚಲು ಸೂಚನೆ ನೀಡಲಾಗಿದೆ.

ಬ್ರ್ಯಾಂಡ್ ಬೆಂಗಳೂರು ನಿರ್ಮಾಣ ಮಾಡೋ ಕನಸನ್ನ ಡಿಸಿಎಂ ಡಿಕೆ ಶಿವಕುಮಾರ್(DK Shivakumar) ಕನಸು ಕಾಣ್ತಾ ಇದ್ದಾರೆ. ಆದ್ರೆ ಒಂದೇ ಒಂದು ಮಳೆಗೆ  ಕೋಟಿ ಕೋಟಿ ಸುರಿದು ಮುಚ್ಚಿದ ರಸ್ತೆ ಗುಂಡಿಗಳು ಬಣ್ಣ ಬಯಲಾಗ್ತಿದೆ. ಈಗ ಮತ್ತೆ ರಸ್ತೆ ಗುಂಡಿಗಳ‌ ಅವಾಂತರ ಜಾಸ್ತಿ ಆಗಿದ್ದು ರಸ್ತೆ ಗುಂಡಿ ಮುಚ್ಚೋದಕ್ಕೆ ಬಿಬಿಎಂಪಿ(BBMP) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್  ವಲಯ ಆಯುಕ್ತರುಗಳಿಗೆ ನವೆಂಬರ್ 30ರ ಒಳಗಡೆ ಮೇಜರ್ ರಸ್ತೆಗುಂಡಿಗಳನ್ನ ಮುಚ್ಚುವಂತೆ ಸೂಚಿಸಿದ್ದಾರೆ. ಈಗಾಲೇ ಡಿಸಿಎಂ ಡಿಕೆ ಶಿವಕುಮಾರ್ ಅವರು ಕೂಡ ನವೆಂಬರ್ 30 ರ ಒಳಗಡೆ ರಸ್ತೆ ಗುಂಡಿ(road potholes) ಮುಚ್ಚಬೇಕು ಅಂತಾ ಹೇಳಿದ್ದಾರೆ.‌ 11,361 ಗುಂಡಿಗಳನ್ನ ಗುರುತಿಸಿದ್ದು ಅವುಗಳನ್ನು ಮುಚ್ಚಬೇಕಾಗಿದೆ‌.ಬೊಮ್ಮನಹಳ್ಳಿ ವಲಯದಲ್ಲಿ  319 ರಸ್ತೆ ಗುಂಡಿ ಮುಚ್ಚಬೇಕಿದೆ, ದಾಸರಹಳ್ಳಿ ವಲಯದಲ್ಲಿ  1317 ಗುಂಡಿ ಮುಚ್ಚಬೇಕಿದೆ, ಪೂರ್ವ ವಲಯ್ಲಗಲಿ 1646, ಮಹಾದೇವಪುರ ವಲಯದಲ್ಲಿ 595, ಆರ್ಆರ್ ನಗರ ವಲಯದಲ್ಲಿ 845, ದಕ್ಷಿಣ ವಲಯದಲ್ಲಿ 401, ಪಶ್ಚಿಮ ವಲಯದಲ್ಲಿ  422, ಯಲಹಂಕ ವಲಯದಲ್ಲಿ 423ಗುಂಡಿ ಮುಚ್ಚಬೇಕಿದೆ.ಗುಂಡಿ ಗಂಡಾಂತರದಿಂದ ಬೆಂಗಳೂರಿನ ವಾಹನ‌ ಸವಾರರು ಬೇಸತ್ತು ಹೋಗಿದ್ದು ಸರ್ಕಾರಕ್ಕೆ  ಹಿಡಿಶಾಪ ಹಾಕುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಕರಾವಳಿಯಲ್ಲಿ ಮತ್ತೊಂದು ಚಂಡಮಾರುತ ಭೀತಿ: ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more