ಬೆಂಗಳೂರಿನಲ್ಲಿ ಬಲಿ ಪಡೆಯಲು ಕಾಯ್ತಿದೆ 11,361 ರಸ್ತೆ ಗುಂಡಿಗಳು !

ಬೆಂಗಳೂರಿನಲ್ಲಿ ಬಲಿ ಪಡೆಯಲು ಕಾಯ್ತಿದೆ 11,361 ರಸ್ತೆ ಗುಂಡಿಗಳು !

Published : Oct 19, 2023, 11:35 AM IST

ಬೆಂಗಳೂರಿನಲ್ಲಿ ಕಳಪೆ ರಸ್ತೆ ಕಾಮಗಾರಿಯಿಂದ ರಸ್ತೆ ಗುಂಡಿ ಹೆಚ್ಚಾಗ್ತಿವೆ. ಎಷ್ಟು ಗುಂಡಿ ಮುಚ್ಚಿದ್ರು ಮೂರೇ ದಿನಕ್ಕೆ ಬಾಯ್ತೆರೆಯುತ್ತವೆ. ರಸ್ತೆ ಗುಂಡಿ ಮುಚ್ಚಲು ಈಗ ಬಿಬಿಎಂಪಿ ಮುಖ್ಯ ಆಯುಕ್ತರು ಗುಡುವು ನೀಡಿದ್ದಾರೆ. ನವೆಂಬರ್ 30ರ ಒಳಗಡೆ ಮೇಜರ್ ರಸ್ತೆಗಳ ಗುಂಡಿ ಮುಚ್ಚಲು ಸೂಚನೆ ನೀಡಲಾಗಿದೆ.

ಬ್ರ್ಯಾಂಡ್ ಬೆಂಗಳೂರು ನಿರ್ಮಾಣ ಮಾಡೋ ಕನಸನ್ನ ಡಿಸಿಎಂ ಡಿಕೆ ಶಿವಕುಮಾರ್(DK Shivakumar) ಕನಸು ಕಾಣ್ತಾ ಇದ್ದಾರೆ. ಆದ್ರೆ ಒಂದೇ ಒಂದು ಮಳೆಗೆ  ಕೋಟಿ ಕೋಟಿ ಸುರಿದು ಮುಚ್ಚಿದ ರಸ್ತೆ ಗುಂಡಿಗಳು ಬಣ್ಣ ಬಯಲಾಗ್ತಿದೆ. ಈಗ ಮತ್ತೆ ರಸ್ತೆ ಗುಂಡಿಗಳ‌ ಅವಾಂತರ ಜಾಸ್ತಿ ಆಗಿದ್ದು ರಸ್ತೆ ಗುಂಡಿ ಮುಚ್ಚೋದಕ್ಕೆ ಬಿಬಿಎಂಪಿ(BBMP) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್  ವಲಯ ಆಯುಕ್ತರುಗಳಿಗೆ ನವೆಂಬರ್ 30ರ ಒಳಗಡೆ ಮೇಜರ್ ರಸ್ತೆಗುಂಡಿಗಳನ್ನ ಮುಚ್ಚುವಂತೆ ಸೂಚಿಸಿದ್ದಾರೆ. ಈಗಾಲೇ ಡಿಸಿಎಂ ಡಿಕೆ ಶಿವಕುಮಾರ್ ಅವರು ಕೂಡ ನವೆಂಬರ್ 30 ರ ಒಳಗಡೆ ರಸ್ತೆ ಗುಂಡಿ(road potholes) ಮುಚ್ಚಬೇಕು ಅಂತಾ ಹೇಳಿದ್ದಾರೆ.‌ 11,361 ಗುಂಡಿಗಳನ್ನ ಗುರುತಿಸಿದ್ದು ಅವುಗಳನ್ನು ಮುಚ್ಚಬೇಕಾಗಿದೆ‌.ಬೊಮ್ಮನಹಳ್ಳಿ ವಲಯದಲ್ಲಿ  319 ರಸ್ತೆ ಗುಂಡಿ ಮುಚ್ಚಬೇಕಿದೆ, ದಾಸರಹಳ್ಳಿ ವಲಯದಲ್ಲಿ  1317 ಗುಂಡಿ ಮುಚ್ಚಬೇಕಿದೆ, ಪೂರ್ವ ವಲಯ್ಲಗಲಿ 1646, ಮಹಾದೇವಪುರ ವಲಯದಲ್ಲಿ 595, ಆರ್ಆರ್ ನಗರ ವಲಯದಲ್ಲಿ 845, ದಕ್ಷಿಣ ವಲಯದಲ್ಲಿ 401, ಪಶ್ಚಿಮ ವಲಯದಲ್ಲಿ  422, ಯಲಹಂಕ ವಲಯದಲ್ಲಿ 423ಗುಂಡಿ ಮುಚ್ಚಬೇಕಿದೆ.ಗುಂಡಿ ಗಂಡಾಂತರದಿಂದ ಬೆಂಗಳೂರಿನ ವಾಹನ‌ ಸವಾರರು ಬೇಸತ್ತು ಹೋಗಿದ್ದು ಸರ್ಕಾರಕ್ಕೆ  ಹಿಡಿಶಾಪ ಹಾಕುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಕರಾವಳಿಯಲ್ಲಿ ಮತ್ತೊಂದು ಚಂಡಮಾರುತ ಭೀತಿ: ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more