ಭಾರತ-ಕೊಲ್ಲಿ ರಾಷ್ಟ್ರಗಳ ನಡುವೆ ಕೊಳ್ಳಿ ಇಟ್ಟವರು ಯಾರು..?

Apr 29, 2020, 12:33 PM IST

ಬೆಂಗಳೂರು: ಇಡೀ ಜಗತ್ತೇ ಕೊರೋನಾ ವೈರಸ್ ಭೀತಿಯಿಂದಾಗಿ ನಲುಗಿ ಹೋಗಿದೆ. ಇದರ ನಡುವೆ ಭಾರತ-ಗಲ್ಫ್ ರಾಷ್ಟ್ರಗಳ ನಡುವೆ ಕೆಲವರು ಕೊರೋನಾ ಕೊಳ್ಳಿಯಿಟ್ಟಿದ್ದಾರೆ.

ಕರಾವಳಿ ಮೂಲದ ಕೆಲವರ ಪಾಲಿಗೆ ಸಾಮಾಜಿಕ ಜಾಲತಾಣವೇ ಕಂಠಕವಾಗಿ ಪರಿಣಮಿಸಿದೆ. ಅವರೇ ಹಾಕಿರುವ ಹಳೆಯ ಪೋಸ್ಟ್‌ಗಳು ಮುಳುವಾಗಿವೆ. ದೆಹಲಿಯ ತಬ್ಲೀಘಿ ಘಟನೆಯ ಬಗ್ಗೆ ಮೆಸೇಜ್ ಫಾರ್ವರ್ಡ್ ಮಾಡಿದವರೂ ಇದೀಗ ಗಲ್ಫ್ ರಾಷ್ಟ್ರಗಳಲ್ಲಿ ಕೆಲಸ ಕಳೆದುಕೊಂಡಿದ್ದಾರೆ. 

ತಬ್ಲಿಘಿ ಘಟನೆ ಪೋಸ್ಟ್ ಹಾಕಿದರವ್ರನ್ನ ಕೆಲಸದಿಂದ ಕಿತ್ತು ಹಾಕಿದ ಕೊಲ್ಲಿ ರಾಷ್ಟ್ರ

ಹಸಿಹಸಿ ಸುಳ್ಳುಗಳನ್ನು ಹರಡಿ ಧರ್ಮಗಳ ನಡುವೆ ಕೆಲವರು ಬೆಂಕಿ ಹಚ್ಚಿದ್ದಾರೆ. ಭಾರತದ ಗೌರವಕ್ಕೆ ಮಸಿ ಬಳಿದರ ಮುಖವಾಡವನ್ನು ಸುವರ್ಣ ನ್ಯೂಸ್ ಬಿಚ್ಚಿಡುತ್ತಿದೆ.