ಮಹಾಮೌನಿ ಸಾಧಕನಿಗೆ ಎದುರಾಗಿದ್ದ ಅವಮಾನ ಎಂಥದ್ದು?: ಶಾಂತಿಪ್ರಿಯ ಸಿಂಗ್‌ರಲ್ಲಿ ಒಬ್ಬ ಸುಂದರ ಕವಿಯೂ ಇದ್ದ

ಮಹಾಮೌನಿ ಸಾಧಕನಿಗೆ ಎದುರಾಗಿದ್ದ ಅವಮಾನ ಎಂಥದ್ದು?: ಶಾಂತಿಪ್ರಿಯ ಸಿಂಗ್‌ರಲ್ಲಿ ಒಬ್ಬ ಸುಂದರ ಕವಿಯೂ ಇದ್ದ

Published : Dec 28, 2024, 09:43 AM IST

ಮಹಾಮೌನಿ ಸಾಧಕನಿಗೆ ಎದುರಾಗಿದ್ದ ಅವಮಾನ ಎಂಥದ್ದು..? ಅಪಮಾನಗಳನ್ನು ಹಲ್ಲುಕಚ್ಚಿ ನುಂಗಿದ್ದರಾ ತಿಪ್ರಿಯ..?  ಆರ್ಥಿಕ ತಜ್ಞ.. ಮಹಾ ಮೇಧಾವಿ.. ಸಿಂಗ್ ಈಸ್ ಕಿಂಗ್..!  ಇದೆಲ್ಲವನ್ನು ನೋಡೋದೇ ಈ ಕ್ಷಣದ ವಿಶೇಷ ಮನಮೋಹನ ಮೌನ ಸಂಗ್ರಾಮ.

ಮಹಾಮೌನಿ ಸಾಧಕನಿಗೆ ಎದುರಾಗಿದ್ದ ಅವಮಾನ ಎಂಥದ್ದು..? ಅಪಮಾನಗಳನ್ನು ಹಲ್ಲುಕಚ್ಚಿ ನುಂಗಿದ್ದರಾ ತಿಪ್ರಿಯ..?  ಆರ್ಥಿಕ ತಜ್ಞ.. ಮಹಾ ಮೇಧಾವಿ.. ಸಿಂಗ್ ಈಸ್ ಕಿಂಗ್..!  ಇದೆಲ್ಲವನ್ನು ನೋಡೋದೇ ಈ ಕ್ಷಣದ ವಿಶೇಷ ಮನಮೋಹನ ಮೌನ ಸಂಗ್ರಾಮ. ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್ ವಿಧಿವಶವಾಗಿದ್ದಾರೆ. ಡಾ. ಮನಮೋಹನ್ ಸಿಂಗ್ ಭಾರತದ ಪ್ರಧಾನಿಯಾಗಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅವರು ನಿನ್ನೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ವಯೋ ಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಅವರ ಅಗಲಿಕೆಗೆ ದೇಶವೇ ಮರಗುತ್ತಿದೆ. ಈ ಮಧ್ಯೆ ಅವರು ಪಿಎಂ ಆಗಿದ್ದಾಗಿನ ಕೆಲವು ವಿಡಿಯೋಗಳು ಸೋಷಿಯಲ್ ಮೀಡಿಗಾಲ್ಲಿ ವೈರಲ್ ಆಗುತ್ತಿವೆ. 

ಇಷ್ಟೊಂದು ಶಾಂತ ಸ್ವಭಾವದ ಪ್ರಧಾನಿ ಮೇಲೂ ಹತ್ತಾರು ಆರೋಪಗಳು ಕೇಳಿ ಬಂದಿದ್ದವು. ಆದ್ರೆ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ತಾವಾಯ್ತು ತಮ್ಮ ಕೆಲಸವಾಯ್ತು ಎಂದು ದೇಶಕ್ಕಾಗಿ ಸೇವೆ ಸಲ್ಲಿಸಿದವರು ಡಾ. ಮನಮೋಹನ್ ಸಿಂಗ್. ಮನಮೋಹನ್ ಸಿಂಗ್ ಅವರ ಕುರಿತು ಇನ್ನು ಕೆಲವೊಂದಿಷ್ಟು ಇಂಟ್ರಸ್ಟಿಂಗ್ ಸ್ಟೋರಿಗಳಿವೆ. ಮನಮೋಹನ್ ಸಿಂಗ್ ದೇಶದ ಪ್ರಧಾನಿಯಾಗಿದ್ದಾಗ ಕೆಲ ವಿಶೇಷ ಸಾಧನೆಗಳನ್ನು ಮಾಡಿದ್ದಾರೆ. ಜಾಗತಿಕ ಮಟ್ಟದಲ್ಲಿ ದೇಶದ ದೃಷ್ಟಿಯಲ್ಲಿ ಬದಲಿಸುವ ಪ್ರಯತ್ನ ಮಾಡಿದ್ದಾರೆ. ಹಾಗೆನೇ ಭಾರತ ದೇಶದ ಪ್ರಧಾನಿಯಾಗಿದ್ದಾಗ ಪ್ರಮುಖ ದೇಶಗಳ ನಾಯಕರ ಮೆಚ್ಚುಗೆಯನ್ನು ಪಡೆದ ಹೆಗ್ಗಳಿಗೆ ಪ್ರಧಾನಿ ಮನಮೋಹನ್ ಸಿಂಗ್ ಅವರದ್ದು. 

ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ತಮ್ಮ ಆತ್ಮಚರಿತ್ರೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕುರಿತು ತುಂಬಾ ಚೆನ್ನಾಗಿ ಬರೆದುಕೊಂಡಿದ್ದಾರೆ. ಅದನ್ನು ನಾವೆಲ್ಲ ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳದಿದ್ದರೆ ಹೇಗೆ? ಇನ್ನು ಮನಮೋಹನ್ ಸಿಂಗ್ ಕುಟುಂಬ ಕುರಿತು ಹೆಚ್ಚಿನವರಿಗೆ ಅಷ್ಟೊಂದು ಗೊತ್ತಿಲ್ಲ. ಬಹುಶ ಮನಮೋಹನ್ ಸಿಂಗ್ ಅವರಿಗೆ ಮಕ್ಕಳು ಎಷ್ಟು ಅನ್ನೋದು ಹೆಚ್ಚಾಗಿ ಯಾರಿಗೂ ಗೊತ್ತಿಲ್ಲ. ಮನಮೋಹನ್ ಸಿಂಗ್ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಇದು ದಿವಂಗತ ಡಾ. ಮನಮೋಹನ್ ಸಿಂಗ್ ಅವರ ಕುಟುಂಬದ ಪರಿಚಯ. 92 ವರ್ಷಗಳ ಕಾಲ ಬದುಕಿದ್ದ ಮನಮೋಹನ್ ಸಿಂಗ್ ಅವರು ಈಗ ನಮ್ಮಲ್ಲೆಲ್ಲ ಅಗಲಿದ್ದಾರೆ.

21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
Read more