UP Elections 2022: ವಾರಾಣಸಿಯಲ್ಲಿ 2 ದಿನ ಪ್ರಧಾನಿ ಮೋದಿ ಪ್ರಚಾರ, ರೋಡ್‌ ಶೋ

UP Elections 2022: ವಾರಾಣಸಿಯಲ್ಲಿ 2 ದಿನ ಪ್ರಧಾನಿ ಮೋದಿ ಪ್ರಚಾರ, ರೋಡ್‌ ಶೋ

Published : Mar 04, 2022, 01:35 PM IST

ಉತ್ತರ ಪ್ರದೇಶದಲ್ಲಿ (Uttar Pradesh)  ಇಂದು 6ನೇ ಹಂತದ ಮತದಾನ ನಡೆದಿದೆ. ಇನ್ನೇನು ಒಂದು ಹಂತದ ಮತದಾನ ಬಾಕಿಯಿದೆಯಷ್ಟೇ. ಮಾ.7ಕ್ಕೆ ಕೊನೆಯ, 7ನೇ ಹಂತದ ಮತದಾನ ನಡೆದರೆ, ಮಾರ್ಚ್ 10ಕ್ಕೆ ಮತ ಎಣಿಕೆ ನಡೆಯಲಿದೆ.

ಲಕ್ನೋ (ಮಾ. 04):  ಉತ್ತರ ಪ್ರದೇಶದಲ್ಲಿ (Uttar Pradesh)  7ನೇ ಹಂತದಲ್ಲಿ 54 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಹಿಂದೂ ಧಾರ್ಮಿಕ ಶ್ರದ್ಧಾಕೇಂದ್ರವಾದ ವಾರಾಣಾಸಿ (varanasi)ಬಿಜೆಪಿ ಪಾಲಿಗೆ ಪ್ರತಿಷ್ಠೆಯ ಕಣವಾಗಿದೆ. ಅಷ್ಟೇ ಅಲ್ಲ  ಲೋಕಸಭೆಯಲ್ಲಿ ವಾರಾಣಸಿಯನ್ನು ಪ್ರಧಾನಿ ಮೋದಿ ಪ್ರತಿನಿಧಿಸುತ್ತಿರುವುದು ಬಿಜೆಪಿಯ ನಿರೀಕ್ಷೆಗಳನ್ನು ಹೆಚ್ಚಿಸಿದೆ.

ಹಾಗಾಗಿ ಪ್ರಧಾನಿ ಮೋದಿಯವರೇ ಖುದ್ದು ವಾರಾಣಾಸಿಯಲ್ಲಿ ಬೀಡು ಬಿಟ್ಟು ಮುಂದಿನೆರಡು ದಿನ ಪ್ರಚಾರ ಕೈಗೊಳ್ಳಲಿದ್ದಾರೆ. ಮಾರ್ಚ್ 4 ಮತ್ತು 5ರಂದು ಮೋದಿ ವಾರಾಣಸಿಗೆ ಬಂದು ಭರ್ಜರಿ ಮಯತಾಚನೆ ನಡೆಸಲಿದ್ದಾರೆ. ಮೊದಲ ದಿನ, ಸರ್ದಾರ್ ವಲ್ಲಭಬಾಯಿ ಪಟೇಲ್‌ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರಧಾನಿ ಮೋದಿ ರೋಡ್‌ ಶೋ ಆರಂಭಿಸಲಿದ್ದಾರೆ. ಬಳಿಕ ಕಾಶಿ ವಿಶ್ವನಾಥ್ ದೇಗುಲಕ್ಕೂ ಭೇಟಿ ನೀಡಿ ವಿಶೇಷ ಪೂಜೆ ನಡೆಸಲಿದ್ದಾರೆ. ಎರಡನೇ ದಿನ ಸಾರ್ವಜನಿಕ ಸಭೆಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಈಗಾಗಲೇ ಅಮಿತ್ ಶಾ ಇಲ್ಲಿ ಪ್ರಚಾರ ನಡೆಸಿದ್ದಾರೆ. ಮುಂದಿನ ಎರಡು ದಿನ ಇತರ ಪಕ್ಷದ ನಾಯಕರು ಕೂಡಾ ವಾರಾಣಸಿಯಲ್ಲಿ  ಪ್ರಚಾರ ನಡೆಸಲಿದ್ದಾರೆ.  ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಮಮತಾ ಬ್ಯಾನರ್ಜಿ ಕೂಡಾ ಇಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್‌, ಆಮ್ ಆದ್ಮಿ ಪಾರ್ಟಿ ಯ ನಾಯಕರೂ ಪ್ರಚಾರ ಕಣದಲ್ಲಿದ್ದಾರೆ.

ವಾರಾಣಸಿಯಲ್ಲಿಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು,  ಕಳೆದ 2017ರ ಚುನಾವಣೆಯಲ್ಲಿ ಎಲ್ಲಾ 8 ಸೀಟುಗಳನ್ನು ಬಿಜೆಪಿ ಹಾಗೂ ಮಿತ್ರಪಕ್ಷಗಳು ಬಾಚಿಕೊಂಡಿದ್ದುವು. ವಾರಾಣಾಸಿ ದಕ್ಷಿಣ ಕ್ಷೇತ್ರ ಕೇಸರಿ ಪಡೆಯ ಭದ್ರಕೋಟೆಯಾಗಿದ್ದು, ಕಳೆದೆರಡೂವರೆ ದಶಕಗಳಿಂದ ಸತತವಾಗಿ ಬಿಜೆಪಿಯ ಅಭ್ಯರ್ಥಿಯೇ ಜಯಗಳಿಸುತ್ತಿದ್ದಾರೆ.

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more