ಆಸ್ತಿ ವಿವಾದ: ಟ್ರ್ಯಾಕ್ಟರ್‌ ಲೋಡ್‌ ಮಣ್ಣು ಸುರಿದು ಇಬ್ಬರು ಮಹಿಳೆಯರ ಹತ್ಯೆಗೆ ಯತ್ನ..?

Nov 8, 2022, 1:27 PM IST

ಇಬ್ಬರು ಮಹಿಳೆಯರ ಮೇಲೆ ಮಣ್ಣು ಮುಚ್ಚಿ ಹತ್ಯೆಗೆ ಯತ್ನ ನಡೆಸಿದ ಘಟನೆ ಆಂಧ್ರ ಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಹರಿಪುರಂ ಗ್ರಾಮದಲ್ಲಿ ವರದಿಯಾಗಿದೆ. ಮೂವರು ಸಂಬಂಧಿಕರಿಂದ ಇಬ್ಬರು ಮಹಿಳೆಯರ ಹತ್ಯೆಗೆ ಯತ್ನ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ತಮ್ಮ ಜಮೀನಿನಲ್ಲಿ ಯಾರೋ ಮಣ್ಣು ತಂದಿಟ್ಟಿದ್ದಾರೆ ಎಂದು ನೋಡಲು ಹೋದಾಗ 60 ವರ್ಷದ ತಾಯಿ ಹಾಗೂ 40 ವರ್ಷದ ಮಗಳು ಇಬ್ಬರೂ ಜಮೀನಿಗೆ ಹೋದಾಗ ಒಂದು ಟ್ರ್ಯಾಕ್ಟರ್‌ ಲೋಡ್‌ ಮಣ್ಣನ್ನು ಅವರ ಮೇಲೆ ಸುರಿಯಲಾಗಿದೆ ಎಂದು ಹೇಳಲಾಗಿದೆ. ನಂತರ, ಸ್ಥಳೀಯರು ಬಂದು ಅವರನ್ನು ಬಚಾವ್‌ ಮಾಡಿದ್ದಾರೆ. ಆ ಜಾಗದ ವಿಚಾರವಾಗಿ ಸಂಬಂಧಿಕರ ನಡುವೆ ವಿವಾದವಿದ್ದು, 7 ವರ್ಷಗಳಿಂದ ಕೋರ್ಟ್‌ನಲ್ಲಿ ಈ ಕೇಸ್‌ ನಡೆಯುತ್ತಿದೆ ಎಂದು ತಿಳಿದುಬಂದಿದೆ.