The Kashmir Files: ಸುಳ್ಳಿನ ಕಂತೆ, ಬಲಿಯಾದ ಮುಸ್ಲಿಮರ ಬಗ್ಗೆ ಒಂದು ವಾಕ್ಯವೂ ಇಲ್ಲ: ಒಮರ್ ಅಬ್ದುಲ್ಲಾ

The Kashmir Files: ಸುಳ್ಳಿನ ಕಂತೆ, ಬಲಿಯಾದ ಮುಸ್ಲಿಮರ ಬಗ್ಗೆ ಒಂದು ವಾಕ್ಯವೂ ಇಲ್ಲ: ಒಮರ್ ಅಬ್ದುಲ್ಲಾ

Published : Mar 20, 2022, 03:53 PM ISTUpdated : Mar 20, 2022, 04:26 PM IST

ದಿ ಕಾಶ್ಮೀರ್ ಫೈಲ್ಸ್, ಬಹಳ ಚರ್ಚೆಯಾಗುತ್ತಿರುವ ಸಿನಿಮಾ. ಕಾಶ್ಮೀರ ಪಂಡಿತರ ಮೇಲೆ ನಡೆದ ಕ್ರೌರ್ಯದ ಕಹಿ ಸತ್ಯ ಬಿಚ್ಚಿಡುವ ಬಾಲಿವುಡ್ ವಿವೇಕ್ ಅಗ್ನಿಗೋತ್ರಿ ನಿರ್ದೇಶನದ ಚಿತ್ರ ದಿ ಕಾಶ್ಮೀರ ಫೈಲ್ಸ್ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ. 

ಶ್ರೀನಗರ (ಮಾ. 20): ದಿ ಕಾಶ್ಮೀರ್ ಫೈಲ್ಸ್, ಬಹಳ ಚರ್ಚೆಯಾಗುತ್ತಿರುವ ಸಿನಿಮಾ. ಕಾಶ್ಮೀರ ಪಂಡಿತರ ಮೇಲೆ ನಡೆದ ಕ್ರೌರ್ಯದ ಕಹಿ ಸತ್ಯ ಬಿಚ್ಚಿಡುವ ಬಾಲಿವುಡ್ ವಿವೇಕ್ ಅಗ್ನಿಗೋತ್ರಿ ನಿರ್ದೇಶನದ ಚಿತ್ರ ದಿ ಕಾಶ್ಮೀರ ಫೈಲ್ಸ್ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ. ಚಿತ್ರ ವೀಕ್ಷಿಸಿದ ಪ್ರತಿಯೊಬ್ಬರೂ ಭಾವುಕರಾಗುತ್ತಿರುವುದು ಈ ಚಿತ್ರದ ಕಥೆ ಅದೆಷ್ಟು ಪರಿಣಾಮ ಬೀರುತ್ತಿದೆ ಎನ್ನುವುದಕ್ಕೆ ಸಾಕ್ಷಿ. ಇನ್ನು ರಾಜಕೀಯವಾಗಿ ಕಾಂಗ್ರೆಸ್- ಬಿಜೆಪಿ ನಡುವೆ ಕೆಸರೆರಚಾಟಕ್ಕೆ ಆಹಾರವೂ ಆಗಿದೆ. 

ಇದೀಗ ಕಾಶ್ಮೀರ ಮಾಜಿ ಸಿಎಂ ನ್ಯಾಶನಲ್ ಕಾನ್ಫೆರೆನ್ಸ್ ಪಕ್ಷದ ಅಧ್ಯಕ್ಷ ಓಮರ್ ಅಬ್ದುಲ್ಲಾ, 'ಇದು ಸುಳ್ಳಿನ ಕಂತೆ. ಕಾಶ್ಮೀರ ಪಂಡಿತರ ಮೇಲೆ ಕ್ರೌರ್ಯ ನಡೆಯಿತು ಎಂದು ಹೇಳಲಾಗುತ್ತಿರುವ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಫಾರುಖ್ ಅಬ್ದುಲ್ಲಾ ಆಗಿರಲಿಲ್ಲ. ಈ ವೇಳೆ ರಾಜ್ಯಪಾಲರ ಆಡಳಿತವಿತ್ತು. ಕೇಂದ್ರದಲ್ಲಿ ವಿಪಿ ಸಿಂಗ್ ಸರ್ಕಾರವಿತ್ತು. ಈ ಸರ್ಕಾರಕ್ಕೆ ಬಿಜೆಪಿ ಬಾಹ್ಯ ಬೆಂಬಲವಿತ್ತು. ಆದರೆ ಈ ವಿವರ ಚಿತ್ರದಲ್ಲಿ ಮರೆ ಮಾಚಲಾಗಿದೆ. 1990 ರಲ್ಲಿ ಕಾಶ್ಮೀರ ಪಂಡಿತರ ಮೇಲೆ ದಾಳಿಯಾಗಿದೆ ಅನ್ನುವುದು ಸತ್ಯವಾದರೆ ವಿಷಾಧಿಸುತ್ತೇನೆ. ಆದರೆ ಕಣಿವೆ ರಾಜ್ಯದಲ್ಲಿ ಮುಸ್ಲಿಮರೂ ಕೂಡಾ ಬಲಿಯಾಗಿದ್ದಾರೆ. ಅವರ ಕುರಿತ ಒಂದು ವಾಕ್ಯವೂ ಚಿತ್ರದಲ್ಲಿಲ್ಲ. ಹೀಗಾಗಿ ದಿ ಕಾಶ್ಮೀರ ಚಿತ್ರ ಸತ್ಯಕ್ಕೂ ದೂರವಾಗಿದೆ' ಎಂದು ಅಬ್ದುಲ್ಲಾ ಹೇಳಿದ್ದಾರೆ.

19:36ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!
39:34ಅಮಿತ್ ಶಾ ರಣತಂತ್ರ: ಬದಲಾಗಲಿದೆಯೇ ಬಲಾಬಲ? 3ನೇ 2ರಷ್ಟು ಬಹುಮತ ಪಡೆಯಲು ಹೆಜ್ಜೆ
21:15ಬೆಲೆಗೆ ಬಿದ್ದ 200 ಕೋಟಿ ರೂ ಸರ್ಕಾರಿ ಎಂಜಿನೀಯರ್, ಕೆಜಿಗಟ್ಟಲೇ ಚಿನ್ನ ಬೆಳ್ಳಿ, ಹಲವು ಭವ್ಯ ಬಂಗಲೇ ಸೀಝ್
19:50Suvarna Special: ನನ್ನವರು ಯಾರೂ ಇಲ್ಲ, ದೀದಿ ಕಟ್ಟಿದ ದಶಕದ ಕೋಟೆ ಒಂದೇ ಏಟಿಗೆ ಛಿದ್ರ
21:25ಮಧ್ಯಪ್ರಾಚ್ಯ ಯುದ್ಧ ನಡುವೆ ಭಾರತ ಟಾರ್ಗೆಟ್, ಟ್ರಂಪ್ ಎಡವಟ್ಟಿಗೆ ಮೋದಿ ಸರ್ಕಾರ ಮಾಡಿದ್ದೇನು?
24:27ನೆಹರು ದಾಖಲೆ ಮುರಿದ ಮೋದಿ ಸುದೀರ್ಘ ಆಡಳಿತ, 3 ಬಾರಿ ಜನಾದೇಶ, ಕದಲದ ಮೋದಿ ಸಿಂಹಾಸನ, ಹೇಗಿತ್ತು 4398 ದಿನಗಳ ಆಡಳಿತ?
24:09ದೀದಿ ಕೋಟೆಯಲ್ಲಿ ಮಹಾಬಿರುಕು.. ಏನು ಕಾರಣ? ಗಜಕೇಸರಿ ವ್ಯೂಹ.. ದೀದಿ ದಿಗ್ಬಂಧನ.. ಏನಿದರ ಗುಟ್ಟು?
24:26ಪ್ಲಾಸ್ಟಿಕ್ ನೋಟು... ಕರೆನ್ಸಿ ಕ್ರಾಂತಿ! ಕಾಗದದ ನೋಟುಗಳ ಆಯಸ್ಸು ಖತಂ, ಮತ್ತೆ ಡಿಮಾನಟೈಸೇಶನ್..?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
Read more