ರೈತ ಹೋರಾಟಕ್ಕೆ ತಾತ್ಕಾಲಿಕ ಗೆಲುವು, ಕೃಷಿ ಕಾಯ್ದೆಗೆ ಬ್ರೇಕ್!

Jan 12, 2021, 3:59 PM IST

ನವದೆಹಲಿ(ಜ.12):ಕೃಷಿ ಕಾಯ್ದೆಗಳಿಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ದೆಹಲಿ ಹೊರ ವಲಯದಲ್ಲಿ ಪಂಜಾಬ್ ಹಾಗೂ ಹರ್ಯಾಣ ರೈತರು ನಡೆಸುತ್ತಿದ್ದ ಪ್ರತಿಭಟನೆ ಸುಪಗ್ರಿಂ ಮೆಟ್ಟಿಲೇರಿತ್ತು. ಎರಡೂ ಕಡೆಯ ವಾದ ಪ್ರತಿವಾದ ಕೇಳಿಸಿಕೊಂಡ ಸರ್ವೋಚ್ಛ ನ್ಯಾಯಾಲಯ ಸದ್ಯ ಈ ವಿವಾದಾತ್ಮಕ ಕಾಯ್ದೆಗಳಿಗೆ ಬ್ರೇಕ್ ಹಾಕಿದೆ.

ಇಷ್ಟೇ ಅಲ್ಲದೇ ವಿಚಾರ ವಿಮರ್ಶೆ ನಡೆಸಿ ವರದಿ ನೀಡಲು ನಾಲ್ಕು ಮಂದಿ ತಜ್ಞರ ಸಮಿತಿಯನ್ನೂ ರಚಿಸಲಾಗಿದೆ. ಇವರು ನೀಡಿದ ವರದಿ ಬಳಿಕವಷ್ಟೇ ಮುಂದಿನ ತೀರ್ಪು ನೀಡಲಿದೆ ಸುಪ್ರೀಂ.