ಜ್ಞಾನದೇಗುಲದಲ್ಲೇ ಎಣ್ಣೆ ಹೊಡೆದ ಕುಡುಕ ಶಿಕ್ಷಕರು..!

Mar 5, 2021, 11:15 AM IST

ಭೂಪಾಲ್‌(ಮಾ.05): ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ದೇವರ ಸ್ಥಾನವನ್ನು ನೀಡಲಾಗಿದೆ. ಗುರುವನ್ನು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರನಿಗೆ ಹೋಲಿಸಲಾಗುತ್ತದೆ. ಆದರೆ ಇಂತಹ ಪವಿತ್ರ ಸ್ಥಾನಕ್ಕೆ ಅಲ್ಲೋ ಇಲ್ಲೋ ಕೆಲವರು ಮಸಿ ಬಳಿಯುವ ನಿದರ್ಶನಗಳು ಇವೆ. 

ದೇಶದಲ್ಲಿ ಅನಕ್ಷರಸ್ಥ ರಾಜ್ಯವೆಂದು ಹಣೆಪಟ್ಟಿ ಹೊಂದಿರುವ ಮಧ್ಯಪ್ರದೇಶದಲ್ಲಿ ಗುರುವಿನ ಹೆಸರಿಗೆ ಕಳಂಕವನ್ನುಂಟು ಮಾಡುವಂತಹ ಪ್ರಕರಣ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಸಿವಾನಿ ಗ್ರಾಮದ ಶಾಲೆಯೊಂದರಲ್ಲೇ ಶಿಕ್ಷಕರು ಬಿಂದಾಸ್ ಎಣ್ಣೆ ಪಾರ್ಟಿ ಮಾಡಿದ್ದಾರೆ. ಮೂವರು ಶಿಕ್ಷಕರು ಶಾಲೆಯಲ್ಲೇ ಡ್ರಿಂಕ್ಸ್‌ ಪಾರ್ಟಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಆ ಶಿಕ್ಷಕರು ಅಂದರ್ ಆಗಿದ್ದಾರೆ.

14 ಸಾವಿರ ಅಡಿ ಎತ್ತರ ಆಕಾಶದಲ್ಲಿ ಹಾರುತ್ತಲೇ ಪಿಜ್ಜಾ ತಿಂದ ಗೆಳೆಯರು!

ಇನ್ನು ಪೆಟ್ಟಿಗೆ ಅಂಗಡಿಯೊಂದಕ್ಕೆ ವಿದ್ಯುತ್ ಶಾಕ್ ತಗಲಿ ನೋಡ ನೋಡುತ್ತಿದ್ದಂತೆ ಪ್ರಾಣಕಳೆದುಕೊಂಡ ಘಟನೆ, ಸ್ಕೈವ್‌ ಡೈವ್‌ನಲ್ಲಿ ಪ್ರೇಮ ನಿವೇದನೆ ನೀರಿನೊಳಗೆ ವಿವಾಹ ಮಾಡಿಕೊಂಡ ವಿನೂತನ ಘಟನೆಯ ಕಂಪ್ಲೀಟ್‌ ಡೀಟೈಲ್ಸ್ ಸೂಪರ್ ಸ್ಪೆಷಲ್ ನ್ಯೂಸ್‌ನಲ್ಲಿದೆ ನೋಡಿ