ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ರೋಚಕ ಸ್ಟೋರಿಗಳಿವು

ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ರೋಚಕ ಸ್ಟೋರಿಗಳಿವು

Suvarna News   | Asianet News
Published : Jan 06, 2022, 03:49 PM IST

ವೀಲಿಂಗ್‌ ಮಾಡಲು ಹೋಗಿ ಮುಗ್ಗರಿಸಿ ಬಿದ್ದ ಯುವಕ
ಸಾಯಲು ಹೊರಟವನ ಪ್ರಾಣ ಉಳಿಸಿದ ರೈಲ್ವೆ ಸಿಬ್ಬಂದಿ

ಬೆಂಗಳೂರು(ಜ.6) ಜಗತ್ತಿನಲ್ಲಿ ಏನೇನೋ ವಿಚಿತ್ರಗಳು, ಅನಾಹುತಗಳು ನಡೆಯುತ್ತಲ್ಲೇ ಇರುತ್ತವೆ. ಆದರೆ ಇತ್ತೀಚೆಗೆ ಪ್ರತಿಯೊಬ್ಬರ ಕೈಯಲ್ಲೂ  ಸ್ಮಾರ್ಟ್‌ ಫೋನ್‌ ಇರುವುದರಿಂದ ಇವು ವೈರಲ್‌ ಆಗುತ್ತಿವೆ.  ಹೀಗೆ ವೈರಲ್‌ ಆದ ಕೆಲವು ರೋಚಕ ಸ್ಟೋರಿಗಳ ವಿವರ ಇಲ್ಲಿದೆ ನೋಡಿ... 

ಬೈಕ್‌ ವೀಲಿಂಗ್‌ ಸೋಕಿಗೆ ಬಿದ್ದ ಯುವಕರಿಬ್ಬರು ವ್ಹೀಲಿಂಗ್‌ ಮಾಡಲು ಹೋಗಿ ನೋಡ ನೋಡುತ್ತಿದ್ದಂತೆ ರಸ್ತೆಯಿಂದ ಗದ್ದೆಗೆ ಬಿದ್ದಿದ್ದಾರೆ.  ಈ ವೇಳೆ ಬೈಕ್‌ ಹಿಂದೆ ಕುಳಿತಿದ್ದ ಯುವಕ ಕೆಳಗೆ ಬಿದ್ದಿದ್ದಾನೆ.  ಸದ್ಯ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. 

ಬೈಕ್‌ನಲ್ಲಿ ತೆರಳುತ್ತಿದ್ದ ಮೂರು ಜನರಿದ್ದ ಪುಟ್ಟ ಕುಟುಂಬವೊಂದಕ್ಕೆ ಎತ್ತಲಿಂದಲೋ ಬಂದ ಮದವೇರಿದ್ದ ಗೂಳಿಯೊಂದು ಗುದ್ದಿದ್ದು, ಗೂಳಿ ಗುದ್ದಿದ್ದ ರಭಸಕ್ಕೆ ಬೈಕ್ ಹಿಂಬದಿ ಕುಳಿತಿದ್ದ ಮಹಿಳೆ ರಸ್ತೆಗೆ ಬಿದ್ದಿದ್ದಾರೆ. ಈ ಭಯನಾಕ ವಿಡಿಯೋ ನೋಡುಗರ ಎದೆ ಝಲ್‌ ಎನಿಸುವಂತಿದೆ. ತಮಿಳುನಾಡಿನ ಕನ್ನಮಂಗಲಂನಲ್ಲಿ ಈ ಘಟನೆ ನಡೆದಿದೆ. 

ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯೊಬ್ಬ ರೈಲು ಬರುವುದನ್ನೇ ಕಾದು  ರೈಲು ಬರುತ್ತಿದ್ದಂತೆ ಹಳಿಯ ಮೇಲೆ ಮಲಗಿದ್ದಾನೆ. ಆದರೆ ಆತನ ಅದೃಷ್ಟ ಚೆನ್ನಾಗಿತ್ತೇನೋ ಇದನ್ನು ನೋಡಿದ ರೈಲಿನ ಲೋಕೋಪೈಲೆಟ್‌ ಕೂಡಲೇ ರೈಲಿನ ತುರ್ತು ಬ್ರೇಕ್‌ ಎಳೆದು ರೈಲು ನಿಲ್ಲಿಸಿದ್ದಾರೆ. ನಂತರ ರೈಲ್ವೆ ಸಿಬ್ಬಂದಿ ಬಂದು ಈತನನ್ನು ಎಬ್ಬಿಸಿ ರಕ್ಷಿಸಿದ್ದಾರೆ.  ಮುಂಬೈನ ಶಿವ್ಡಿ ರೈಲು ನಿಲ್ದಾಣದ ಸಮೀಪ ಈ ಘಡನೆ ನಡೆದಿತ್ತು. 

ಇನ್ನು ತಮಿಳುನಾಡಿನಲ್ಲಿ  ಕುಟುಂಬವೊಂದು ಎರಡು ಸಾಕು ಬೆಕ್ಕುಗಳಿಗೆ ಸೀಮಂತ ಮಾಡಿದ ವಿಚಿತ್ರ ಘಟನೆ ನಡೆದಿತ್ತು. ಇದು ಅಲ್ಲದೇ ನಮ್ಮ ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಕೆಟ್ಟು ನಿಂತಿದ್ದ ಪ್ರವಾಸಿಗರಿದ್ದ ಕ್ಸೈಲೋ ಮಹೀಂದ್ರಾ ಸಫಾರಿ ವಾಹನವನ್ನು ಹುಲಿಯೊಂದು ಹಿಂದಿನಿಂದ ಎಳೆದ ರೋಚಕ ವಿಡಿಯೋ ಕೂಡ ಈ ವಾರ ಭಾರಿ ವೈರಲ್ ಆಗಿತ್ತು. 

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more