ಹಲಾಲ್ ಮುಕ್ತ ದೀಪಾವಳಿ ಆಚರಣೆಗೆ ಹಿಂದೂ ಸಂಘಟನಗಳ ಕರೆ, ಯತ್ನಾಳ್ ಬೆಂಬಲ!

Oct 15, 2022, 11:07 PM IST

ಕರ್ನಾಟಕದಲ್ಲಿ ಮತ್ತೊಂದು ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ಇದೀಗ ಹಲಾಲ್ ವಿರುದ್ಧ ಹಿಂದೂ ಸಂಘಟನೆಗಳು ಸಮುದಾಯಕ್ಕೆ ವಿಶೇಷ ಮನವಿ ಮಾಡಿದೆ. ಈ ಬಾರಿ ದೀಪಾವಳಿ ಹಬ್ಬವನ್ನು ಹಲಾಲ್ ಮುಕ್ತವಾಗಿ ಆಚರಿಸಿ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮನವಿ ಮಾಡಿದ್ದಾರೆ. ಹಿಂದೂ ವರ್ತಕರಿಂದ ವಸ್ತುಗಳ ಖರೀದಿ ಮಾಡುವಂತೆ ಹಿಂದೂ ಸಮುದಾಯಕ್ಕೆ ಸಂಘಟನೆಗಳು ಕರೆ ನೀಡಿದೆ. ಹಿಂದೂ ಸಂಘಟನೆಗಳ ಕರೆಗೆ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಲ್ ಬೆಂಬಲ ನೀಡಿದ್ದಾರೆ. ಇತ್ತ ಮೀಸಲಾತಿ ಹೋರಾಟ ತೀವ್ರಗೊಳ್ಳುತ್ತಿದೆ. ಚಿತ್ರದುರ್ಗ ಮಠದ ಮೇಲಿನ ಆರೋಪ ಗಂಭೀರವಾಗುತ್ತಿದ್ದಂತೆ ಪೀಠಾಧ್ಯಕ್ಷರ ಬದಲಾವಣೆಗೆ ಆಗ್ರಹ ಹೆಚ್ಚಾಗಿದೆ. ಇದೀಗ 7 ಈ ರೇಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ದಿನದ ಸಂಪೂರ್ಣ ಸುದ್ದಿ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.