ನಾರಾಯಣ ಗುರು ಸ್ತಬ್ಧಚಿತ್ರ ವಿವಾದ ಹಿಂದೆ ಕೇರಳ ಕುತಂತ್ರ ಬಯಲು, ಶಿವಗಿರಿ ಸ್ವಾಮೀಜಿ ಬಿಚ್ಚಿಟ್ಟ ಸ್ಫೋಟಕ ಸತ್ಯ!

Jan 27, 2022, 11:11 PM IST

ಗಣರಾಜ್ಯೋತ್ಸವ ದಿನಾಚರಣೆಗೆ ಕೇರಳ ಸರ್ಕಾರದ ನಾರಾಯಣ ಗುರು ಸ್ತಬ್ದಚಿತ್ರ ತಿರಸ್ಕರಿಸಿದ ವಿವಾದ ಭಾರಿ ಭುಗಿಲೆದ್ದಿದೆ. ಇದರ ಬೆನ್ನಲ್ಲೇ ಕೇರಳ ಸರ್ಕಾರ ಭಾರಿ ಹುನ್ನಾರ ನಡೆಸಿ ವಿವಾದವನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ದಿದೆ. ಕೇರಳ ಸರ್ಕಾರದ ನೈಜ ಬಣ್ಣವನ್ನು ಸ್ವತಃ ನಾರಾಯಣಗುರು ಸ್ಥಾಪಿಸಿದ ಕೇರಳದ ಶಿವಗಿರಿ ಮಠದ ಸ್ವಾಮೀಜಿ ಬಯಲು ಮಾಡಿದ್ದಾರೆ. ಕೇರಳ ಸರ್ಕಾರ ಮಠಕ್ಕೆ ಮಾಡಿದ ಅನ್ಯಾಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದೇ ವೇಳೆ ಕೇಂದ್ರದ ಮೋದಿ ಸರ್ಕಾರ ಯಾವತ್ತೂ ನಾರಾಯಣಗುರುವಿಗೆ ಅನ್ಯಾ ಮಾಡಿಲ್ಲ. 70 ಕೋಟಿ ರೂಪಾಯಿ ನೆರವು ನೀಡಿದೆ ಎಂದಿದ್ದಾರೆ. ಈ ಕುರಿತು ಸ್ವತಃ ಶಿವಗಿರಿ ಮಠದ ಸ್ವಾಮೀಜಿ ಸುವರ್ಣನ್ಯೂಸ್ ಜೊತೆ ಮಾತನಾಡಿ, 1994ರಿಂದ ಶಿವಗಿರಿ ಮಠ ಹಾಗೂ ನಾರಾಯಣಗುರುವಿಗೆ ಅನ್ಯಾಯ ಮಾಡುತ್ತಿರುವ ಕಮ್ಯೂನಿಸ್ಟ್ ಸರ್ಕಾರದ ನಡೆಯನ್ನು ದಾಖಲೆಯೊಂದಿಗೆ ಬಿಚ್ಚಿಟ್ಟಿದ್ದಾರೆ.